ಬ್ರೇಕಿಂಗ್ ನ್ಯೂಸ್
03-06-25 04:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 3 : ಯುನೈಟೆಡ್ ಬ್ರೂವರೀಸ್ ಬಿಯರ್ ಕಂಪನಿಯು ಇದೇ ಜೂನ್ ತಿಂಗಳ ಅಂತ್ಯಕ್ಕೆ ಮಂಗಳೂರಿನಲ್ಲಿ ಉತ್ಪಾದನಾ ಫ್ಯಾಕ್ಟರಿಯನ್ನು ಕ್ಲೋಸ್ ಮಾಡಲಿದೆ. ಸದ್ಯಕ್ಕೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಫ್ಯಾಕ್ಟರಿ ಹೊಂದಿದ್ದು ಕರಾವಳಿ ಜಿಲ್ಲೆಯ ಫ್ಯಾಕ್ಟರಿಯನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ.
ಮಂಗಳೂರಿನ ಫ್ಯಾಕ್ಟರಿಯನ್ನು ನಿಲ್ಲಿಸುವುದರಿಂದ ರಾಜ್ಯದಲ್ಲಿ ಒಟ್ಟು ವ್ಯವಹಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಯುಬಿಎಲ್ ಸೆಬಿ ಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಮಂಗಳೂರು ಬದಲು ಮೈಸೂರಿನ ನಂಜನಗೂಡಿನಲ್ಲಿರುವ ಫ್ಯಾಕ್ಟರಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕಂಪನಿ ಮುಂದಾಗಿದೆ. ಸ್ಥಳಾಂತರದೊಂದಿಗೆ, ಇಲ್ಲಿರುವ ಉದ್ಯೋಗಿಗಳಿಗೂ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿಕೊಂಡಿದೆ. ಮೈಸೂರಿನಲ್ಲಿ ಕಂಪನಿ ವಿಸ್ತರಣೆ ಮಾಡುವ ಮೂಲಕ ಉತ್ಪಾದನೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯೂ ಆಗಲಿದೆ ಎಂದು ಹೇಳಿದೆ.
ಕಳೆದ ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದರೂ, ಯುಬಿಎಲ್ ವ್ಯವಹಾರದಲ್ಲಿ ಕಡಿತ ಆಗಿಲ್ಲ. ಬದಲಿಗೆ, 2024-25ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಯುಬಿಎಲ್ ವ್ಯವಹಾರ 9 ಶೇ. ವೃದ್ಧಿಯಾಗಿದೆ. ಒಟ್ಟು ವಹಿವಾಟು 2321 ಕೋಟಿಗೆ ಏರಿಕೆಯಾಗಿದೆ.
ಮಂಗಳೂರಿನ ಫ್ಯಾಕ್ಟರಿಯನ್ನು ದಿಢೀರ್ ನಿಲ್ಲಿಸುವುದು ಏಕೆ ಎನ್ನುವ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. 2012ರಲ್ಲಿ ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಯುಬಿಎಲ್ ಫ್ಯಾಕ್ಟರಿ ಆರಂಭಗೊಂಡಿದ್ದು ಮಂಗಳೂರು ಘಟಕದ ಜಿಎಸ್ಟಿ ಮಾಹಿತಿ ಪ್ರಕಾರ ವಾರ್ಷಿಕ 500 ಕೋಟಿ ವಹಿವಾಟು ನಡೆಸುತ್ತಿದೆ.
United Breweries Ltd (UBL) has announced that it will shut down its Mangaluru beer manufacturing unit by the end of June. The company currently operates facilities in Bengaluru, Mysuru, and Mangaluru.
05-06-25 11:06 am
Bangalore Correspondent
RCB, Death, CM Siddaramaiah: RCB ಕಾಲ್ತುಳಿತ ;...
04-06-25 10:48 pm
RCB celebration, Bangalore, Stampede, update:...
04-06-25 09:07 pm
R Ashok, RCB, Bangalore, Death: ಕಿಲ್ಲರ್ RCB ;...
04-06-25 08:06 pm
RCB Victory Celebration, Death, Stampede, Ban...
04-06-25 06:21 pm
04-06-25 05:05 pm
HK News Desk
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
05-06-25 03:05 pm
HK News Desk
VHP, Mangalore,Bakrid: ಬಕ್ರೀದ್ ವೇಳೆ ಅಕ್ರಮ ಗೋಹ...
05-06-25 01:48 pm
ಕೇಸರಿ ಕಟ್ಟಿ ಹೊಡೆದ್ಕೊಂಡರೆ ಹಿಂದು ಕಾರ್ಯಕರ್ತ ಆಗ್ತ...
05-06-25 10:10 am
ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆ...
04-06-25 10:43 pm
Mangalore Police, Social Media, Arrest: ಜಾಲತಾ...
04-06-25 09:34 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm