Shirur Landslide, Malayalam Film: ಶಿರೂರು ಗುಡ್ಡ ಕುಸಿತ ದುರಂತ ; ಮಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ, ಚಿತ್ರ ಕಥೆಗೆ ಮುಂದಾಗಿದ್ದಾರೆ ಮಂಜೇಶ್ವರ ಶಾಸಕ 

30-07-25 09:04 am       Mangalore Correspondent   ಕರಾವಳಿ

ಶಿರೂರು ಭೂಕುಸಿತ ದುರಂತದ ಬಗ್ಗೆ ಕೇರಳದ ಶಾಸಕರೊಬ್ಬರು ಮಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಮಂಜೇಶ್ವರ ಕ್ಷೇತ್ರದ ಶಾಸಕ ಅಶ್ರಫ್ ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ. 

ಮಂಗಳೂರು, ಜುಲೈ 30 : ಶಿರೂರು ಭೂಕುಸಿತ ದುರಂತದ ಬಗ್ಗೆ ಕೇರಳದ ಶಾಸಕರೊಬ್ಬರು ಮಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಮಂಜೇಶ್ವರ ಕ್ಷೇತ್ರದ ಶಾಸಕ ಅಶ್ರಫ್ ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ. 

ಕಳೆದ ವರ್ಷ ಜುಲೈನಲ್ಲಿ ಅಂಕೋಲದ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತವಾಗಿ 11 ಜನ ಮೃತಪಟ್ಟಿದ್ದರು. ಈವರೆಗೂ ಜಗನ್ನಾಥ, ಲೋಕೇಶ್ ಎಂಬವರ ಶವಗಳು ದೊರೆತಿಲ್ಲ. ಕೇರಳದ ಚಾಲಕ ಅರ್ಜುನ್ ಮೃತದೇಹ ಹುಡುಕಲು ಮೂರು ತಿಂಗಳ ಕಾಲ ಅವಿರತ ಕಾರ್ಯಾಚರಣೆ ನಡೆಸಲಾಗಿತ್ತು. ಕೊನೆಗೆ ಆತನ ಅರೆಬರೆ ಶವದ ಗುರುತನ್ನು ಮಾತ್ರ ಹೊರತೆಗೆಯಲಾಗಿತ್ತು.  

ಅರ್ಜುನ್ ಬದುಕಿ ಬರಲೆಂದು ಕೇರಳದ ಜನತೆ ಪ್ರಾರ್ಥನೆ ಮಾಡಿದ್ದರು. ಇದೀಗ ಶಿರೂರು ಘಟನೆ ನಡೆದು ಒಂದು ವರ್ಷವಾದ ಬೆನ್ನಲ್ಲೇ ಈ ದುರಂತ ಘಟನೆ ಕೇರಳದ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ರೂಪದಲ್ಲಿ ಬರಲು ಸಿದ್ಧವಾಗಿದೆ.

A tragic landslide incident that occurred last year in Shirur, Ankola, has now become the subject of an upcoming Malayalam film. Kerala’s Manjeshwar MLA, A.K.M. Ashraf, is reportedly working on the script based on the heartbreaking event.