ಬ್ರೇಕಿಂಗ್ ನ್ಯೂಸ್
 
            
                        04-03-21 04:43 pm Mangalore Correspondent ಕರಾವಳಿ
 
            ಮಂಗಳೂರು, ಮಾ.4: ಕೆಂಜಾರು ವಿಮಾನ ನಿಲ್ದಾಣ ಬಳಿಯ ಕೆಐಎಡಿಬಿಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಮಾಡಿದ್ದ ಗೋಶಾಲೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.
1993ರಲ್ಲಿ ಕೆಐಎಡಿಬಿಗೆ ಮಾರಾಟ ಮಾಡಿದ್ದ ಸರಕಾರಿ ಜಾಗವನ್ನು ಹಾಗೇ ಬಿಡಲಾಗಿತ್ತು. ಫಲ್ಗುಣಿ ನದಿಗೆ ತಾಗಿಕೊಂಡಿದ್ದ ಸದ್ರಿ ಜಾಗದಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಕಳೆದ ಎಂಟು ವರ್ಷಗಳಿಂದ ಗೋಶಾಲೆ ನಿರ್ಮಿಸಿದ್ದರು. ಇಂಟರ್ಲಾಕ್ ಫ್ಯಾಕ್ಟರಿ ಮತ್ತು ಅದರ ಬದಿಯಲ್ಲೇ ಗೋವುಗಳಿಗೆ ಇರಲು ಶೆಲ್ಟರ್ ಮಾಡಿದ್ದರು. ಕಪಿಲಾ ಹೆಸರಿನ ಗೋಶಾಲೆಯಲ್ಲಿ ದೇಸೀ ಮತ್ತು ಅಪರೂಪದ ಗಿರ್ ತಳಿಯ ಗೋವುಗಳನ್ನು ಸಾಕಿದ್ದರು. ಅಲ್ಲದೆ, ಜಗತ್ತಿನಲ್ಲೇ ಅಪರೂಪ ಆಗಿರುವ ಕಪಿಲಾ ಗೋವಿನ ತಳಿಯನ್ನು ಸಾಕಿದ್ದರು. ತಿಳಿ ಹಳದಿ ಬಣ್ಣದ ಕಪಿಲಾ ಗೋವು ಭಾರತದ ದೇಸೀ ಗೋವು ಆಗಿದ್ದು ಕೃಷ್ಣ ಸಾಕಿದ್ದ ಗೋವು ಆಗಿದ್ದರಿಂದ ಕಪಿಲಾ ಎಂದು ಹೆಸರಿಸಲಾಗಿತ್ತು. ಈ ರೀತಿಯ ಗೋವು ದೇಶದಲ್ಲಿ ಐನೂರು ಮಾತ್ರ ಇದ್ದು ಅವುಗಳಲ್ಲಿ ನೂರರಷ್ಟು ಗೋವು ಪ್ರಕಾಶ್ ಶೆಟ್ಟಿಯವರ ಕಪಿಲಾ ಗೋಶಾಲೆಯಲ್ಲಿದ್ದವು. ಒಟ್ಟು 250 ರಷ್ಟು ಗೋವುಗಳಿದ್ದವು.

ಆದರೆ, ಕೆಐಎಡಿಬಿಗೆ ಸೇರಿದ ಕೆಂಜಾರಿನ ಜಾಗದಲ್ಲಿ ಇತ್ತೀಚೆಗೆ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿ ಮಂಜೂರಾಗಿತ್ತು. ಆದರೆ, ಸದರಿ ಭೂಮಿಯಲ್ಲಿ ಗೋಶಾಲೆ ಮಾಡಿದ್ದಲ್ಲದೆ, ಗೋವುಗಳನ್ನು ಮೇಯಲು ಬಿಡಲು ಬಳಸುತ್ತಿದ್ದರು. ಭೂಮಿ ತೆರವು ಮಾಡಿಕೊಡಬೇಕಾದ ದ.ಕ ಜಿಲ್ಲಾಡಳಿತ ಇಂದು ಪೊಲೀಸರು ಹಾಗು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗೋಶಾಲೆ ಕಟ್ಟಡವನ್ನು ನೆಲಸಮ ಮಾಡಿದೆ.
ಗೋವುಗಳನ್ನು ಮೇಯಲು ಬಿಟ್ಟಿರುವ ವೇಳೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಸದರಿ ಜಾಗದ ಮಾಲೀಕರಿಗೆ 1993ರಲ್ಲೇ ಪರಿಹಾರ ಕೊಟ್ಟು ಸ್ವಾಧೀನ ಪಡಿಸಿತ್ತು ಕೆಐಎಡಿಬಿ. ಸದ್ಯ ಹಳೆಯ ಮಾಲೀಕರು ಮೃತರಾಗಿದ್ದರು. ಈ ನಡುವೆ, ಪ್ರಕಾಶ್ ಶೆಟ್ಟಿ ಕೂಡ ಹತ್ತು ವರ್ಷಗಳ ಹಿಂದೆ ಜಾಗವನ್ನು ಮೂಲ ಮಾಲೀಕರಿಂದ ಖರೀದಿ ಮಾಡಿದ್ದರು ಎನ್ನಲಾಗುತ್ತಿದೆ.

ಇದೀಗ ಗೋಶಾಲೆ ಇಲ್ಲದೇ ನೂರಾರು ಗೋವುಗಳು ಬೀದಿಗೆ ಬಿದ್ದಿವೆ. ಗೋಶಾಲೆ ಕಟ್ಟಡದ ಜೊತೆಗೆ ಪ್ರಕಾಶ್ ಶೆಟ್ಟಿಗೆ ಸೇರಿದ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ನೆಲಸಮವಾಗಿದೆ. ಏಕಾಏಕಿ ಗೋಶಾಲೆ ಇದ್ದ ಕಟ್ಟಡವನ್ನು ತೆರವುಗೊಳಿಸಿದ ಕ್ರಮವನ್ನು ಪ್ರಕಾಶ್ ಶೆಟ್ಟಿ ಆಕ್ಷೇಪಿಸಿದ್ದಾರೆ. ಬಿಜೆಪಿ ಸರಕಾರ ಗೋಶಾಲೆ, ಗೋವುಗಳ ರಕ್ಷಣೆಗೆ ಬೆಂಬಲ ನೀಡುವುದಾಗಿ ಹೇಳುತ್ತದೆ. ಆದರೆ, ಇಲ್ಲಿ ದೇಸೀ ತಳಿಗಳನ್ನೇ ಸಾಕಿದ್ದ ಗೋಶಾಲೆಯ ಕಟ್ಟಡವನ್ನೇ ನೆಲಸಮ ಮಾಡಿದ್ದಾರೆ ಎಂದಿದ್ದಾರೆ. ಇದರ ಬದಲಿಗೆ ಬೇರೆ ಸರಕಾರಿ ಜಾಗ ನೀಡುವ ಪ್ರಸ್ತಾಪ ಮುಂದಿಟ್ಟರೂ, ಪ್ರಕಾಶ್ ಶೆಟ್ಟಿ ಅದಕ್ಕೆ ಒಪ್ಪಿಲ್ಲ. ಈಗ ಇರುವ ಜಾಗದಲ್ಲಿ ಒಳ್ಳೆಯ ಹಸಿರು ಬಯಲು ಇದ್ದುದರಿಂದ ಗೋವುಗಳು ತಮ್ಮಷ್ಟಕ್ಕೆ ಮೇಯ್ದು ಬರುತ್ತಿದ್ದವು. ಬೋಳು ಜಾಗ ಒಂದಿಷ್ಟು ಕೊಟ್ಟರೆ ಮೇವಿಗೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
 
            
            
            The district administration cleared an illegal goshala on government land at Kenjar, on the outskirts of the city with help of the police force.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 09:23 pm
                        
            
                  
                Mangalore Correspondent    
            
                    
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm