ಬ್ರೇಕಿಂಗ್ ನ್ಯೂಸ್
06-03-21 05:44 pm Mangalore Correspondent ಕರಾವಳಿ
ಮಂಗಳೂರು, ಮಾ.6 : ಮಗನ ಸ್ಕೂಲ್ ಫೀಸ್ ಕಟ್ಟಲೆಂದು ಎತ್ತಿಟ್ಟಿದ್ದ ಹಣನ್ನು ಹಿಂದಿನ ಸಿಸಿಬಿ ಪೊಲೀಸರು ದೋಚಿದ್ದಾರೆ ಎಂದು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಿಗೆ ಪಾಂಡೇಶ್ವರ ನಿವಾಸಿ ವಿನಯಾ ಎಂಬ ಮಹಿಳೆ ದೂರು ನೀಡಿದ್ದಾರೆ. ಮಹಿಳೆಯ ದೂರಿನೊಂದಿಗೆ ಈ ಹಿಂದಿನ ಸಿಸಿಬಿ ಪೊಲೀಸ್ ತಂಡದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
2019ರ ಅಕ್ಟೋಬರ್ನಲ್ಲಿ ಸಿಸಿಬಿ ಅಧಿಕಾರಿಗಳು ಕ್ರಿಕೆಟ್ ಬೆಟ್ಟಿಂಗ್ ಆರೋಪದಡಿ ಅಂಗಡಿಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಪೊಲೀಸರು ಅಂಗಡಿಯಲ್ಲಿದ್ದ ಬ್ಯಾಗ್ನಿಂದ 86,000 ರೂ. ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಹಣ ಮಗನ ಶಾಲಾ ಶುಲ್ಕಕ್ಕೆ ಇಟ್ಟಿದ್ದಾಗಿತ್ತು. ತನಗೆ ನ್ಯಾಯ ದೊರಕಿಸಿಕೊಡಿ ಎಂದು ಮಹಿಳೆ ವಿನಯ ಗಾಂವ್ಕರ್ ಬಳಿ ದೂರು ನೀಡಿದ್ದಾರೆ.
ಕಬ್ಬಾಳ್ ರಾಜ್ ಮಂಗಳೂರು ಸಿಸಿಬಿ ಎಸ್ಐ ಆಗಿದ್ದಾಗ ಈ ಲೂಟಿ ನಡೆದಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಕಬ್ಬಾಳರಾಜ್ ಎಸ್ಐ ಆಗಿದ್ದ ಸಿಸಿಬಿ ತಂಡದ ವಿರುದ್ಧ ಸರಣಿಯಂತೆ ಆರೋಪ ಕೇಳಿಬಂದಿದ್ದು, ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರುಗಳ ಮಾರಾಟ ಪ್ರಕರಣದಲ್ಲಿ ಈಗಾಗ್ಲೇ ನಾಲ್ವರು ಸಸ್ಪೆಂಡ್ ಆಗಿದ್ದಾರೆ. ಪ್ರಕರಣದಲ್ಲಿ ಡಿಸಿಪಿ ವಿನಯ್ ಗಾಂವ್ಕರ್ ನೀಡಿರುವ ವರದಿ ಆಧರಿಸಿ, ಡಿಜಿಪಿ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಿದ್ದಾರೆ.
ಮೂರು ಐಷಾರಾಮಿ ಕಾರುಗಳಲ್ಲಿ ಜಾಗ್ವಾರ್ ಕಾರನ್ನು ಮಾರಾಟ ಮಾಡಿದ್ದು ಸಿಐಡಿಗೆ ಮಂಗಳೂರು ಪೊಲೀಸ್ ಅಧಿಕಾರಿಗಳ ತಂಡ ಎಫ್ಐಆರ್ ಸಹಿತ ವರದಿ ಸಲ್ಲಿಸಿದೆ. ಪಿಎಸ್ಸೈ ಕಬ್ಬಾಳ್ ರಾಜ್, ನಾರ್ಕೋಟಿಕ್ ಇನ್ಸ್ಪೆಕ್ಟರ್ ರಾಮಕೃಷ್ಣ ಮತ್ತು ರಾಜಾ ವಿರುದ್ಧ ವರದಿ ದಾಖಲಾಗಿದ್ದು, ಪೊಲೀಸ್ ಬ್ರೋಕರ್ ದಿವ್ಯದರ್ಶನ್ ವಿರುದ್ಧ ವರದಿ ದಾಖಲಾಗಿದೆ.
Women files complaint on the old CCB police team alleging of stealing money of school fees during a raid at their residence in Mangalore.
19-03-24 10:27 am
HK News Desk
ಆಜಾನ್ ಕೂಗುತ್ತಿದ್ದಾಗ ಅಂಗಡಿಯಲ್ಲಿ ಹನುಮಾನ್ ಚಾಲೀಸ...
18-03-24 09:50 pm
PM Modi, Shivamogga: ಬಿಎಸ್ ವೈ ತವರಲ್ಲಿ ನಮೋ ರಣಕ...
18-03-24 07:07 pm
Mysuru Prathap Simha, Yaduveer, BJP: ರಂಗೇರಿದ...
18-03-24 06:11 pm
BJP leader DV Sadananda Gowda congress ; ಟಿಕೆ...
18-03-24 03:43 pm
17-03-24 09:41 pm
HK News Desk
Lok sabha election, Karnataka Date result 202...
16-03-24 04:24 pm
Jammu and Kashmir, Accident: ಚಾಲಕನ ನಿಯಂತ್ರಣ ತ...
15-03-24 12:51 pm
Supreme Court, SBI Electoral bonds: ರಾಜಕೀಯ ಪಕ...
15-03-24 10:35 am
Petrol, Diesel Price; ಲೋಕಸಭಾ ಚುನಾವಣೆ ಹಿನ್ನೆಲೆ...
14-03-24 11:20 pm
18-03-24 11:01 pm
Mangalore Correspondent
ದೈವ, ದೇವರ ಹೆಸರಿನಲ್ಲಿ ಕಲಾವಿದರ ಮೇಲೆ ದಬ್ಬಾಳಿಕೆ ಸ...
18-03-24 10:56 pm
Mangalore Maiden bava: ಲೋಕಸಭೆ ಚುನಾವಣೆಗೆ ಪಕ್ಷೇ...
18-03-24 10:40 pm
Mangalore Mp candidate Brijesh Chowta, progra...
18-03-24 10:28 pm
Mangalore University, Harish Acharya, Electio...
18-03-24 05:39 pm
17-03-24 12:00 pm
Bangalore Correspondent
Shivamogga, Youth murdered: ಶಿವಮೊಗ್ಗ ; ಇನ್ನೋವ...
16-03-24 04:50 pm
Foreign Woman murder; ಸಿಲಿಕಾನ್ ಸಿಟಿಯಲ್ಲಿ ವಿದೇ...
14-03-24 09:40 pm
Shootout Bangalore Laxmi jewellery, video: ಬೆ...
14-03-24 04:04 pm
Tamil Nadu, gang-raped: ರಥೋತ್ಸವ ನೋಡಲು ಬಂದ 17...
13-03-24 12:03 pm