ಬ್ರೇಕಿಂಗ್ ನ್ಯೂಸ್
06-03-21 11:24 pm Mangaluru correspondent ಕರಾವಳಿ
ಮಂಗಳೂರು, ಮಾ.6: ಕಂಬಳದಲ್ಲಿ ಹಿಂಸೆ ಆಗತ್ತೆ ಎಂದು ಕೋರ್ಟಿಗೆ ಹೋಗಿದ್ದನ್ನು ಕೇಳಿದ್ದೆ. ಆದರೆ, ನನಗೆ ಕಂಬಳದಲ್ಲಿ ಹಿಂಸೆ ಕಂಡಿಲ್ಲ. ಹಿಂಸೆ ಆಗ್ತಾ ಇರುವುದು ಕಾಣ್ತಾ ಇಲ್ಲ ಎಂದು ಅವಧೂತ, ವಿನಯ ಗುರೂಜಿ ಹೇಳಿದ್ದಾರೆ.

ನಗರದ ಕುಳೂರಿನಲ್ಲಿ ನಡೆದ ರಾಮ ಲಕ್ಷ್ಮಣ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ವಿನಯ ಗುರೂಜಿ ಮಾತನಾಡಿದರು.
ಕಂಬಳ ನಮ್ಮ ಜನಪದ ಕ್ರೀಡೆ. ನಮ್ಮ ಹೆಮ್ಮೆ. ಆದರೆ, ಕಂಬಳ ನಮ್ಮ ಕರಾವಳಿ ಅಥವಾ ಕರ್ನಾಟಕ ರಾಜ್ಯಕ್ಕೆ ಸೀಮಿತ ಆಗಬಾರದು. ಕಂಬಳ, ಯಕ್ಷಗಾನ ಯಾಕೆ ಇಲ್ಲಿಗೆ ಸೀಮಿತ ಆಗಬೇಕು. ಯಕ್ಷಗಾನ ಹೊರ ದೇಶಕ್ಕೆ ಹೋಗಿದೆ. ಕಂಬಳವೂ ಹೋಗಬೇಕು. ವಿದೇಶದಲ್ಲೂ ಮಿಂಚಬೇಕು, ನಮ್ಮ ಕಂಬಳದಲ್ಲಿ ಉದ್ಯೋಗ ಕಂಡವರು ವಿದೇಶಕ್ಕೆ ಹೋಗಿ ತಮ್ಮ ಸಾಧನೆ ಮೆರೆಯಬೇಕು. ರಾಜಕಾರಣಿಗಳು, ಉದ್ಯಮ ಕ್ಷೇತ್ರದ ಸಾಧಕರು ಮನಸ್ಸು ಮಾಡಿದರೆ ಇದು ಕಷ್ಟದ ಕೆಲಸ ಅಲ್ಲ ಎಂದು ಹೇಳಿದರು.



ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ, ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ , ಸದ್ಯದಲ್ಲೇ ಗೋಲ್ಡ್ ಫಿಂಚ್ ಮೈದಾನ ಒಂದು ಸಿಟಿಯಾಗಿ ಬೆಳೆಯಲಿದೆ. ಇದರ ಕಾಮಗಾರಿ ನಡೆಯುತ್ತಿದ್ದು ಸಿಟಿಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕೂಡ ಬರಲಿದೆ. ಅದರಲ್ಲಿ ಜೋಡುಕರೆ ಕಂಬಳದ ಕರೆಯನ್ನೂ ಮಾಡುವಂತೆ ಆರ್ಕಿಟೆಕ್ಚರ್ ಬಳಿ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮಧ್ಯಪ್ರದೇಶದ ಸ್ವಾಮಿ ಕಾಳಿಚರಣ್ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ ಗಣ್ಯರನ್ನು ಸ್ವಾಗತಿಸಿದರು.


ಮಂಗಳೂರು ನಗರದ ಜನರಿಗೆ ಕಂಬಳದ ಅದ್ದೂರಿತನ, ಜನಪದ ಕ್ರೀಡೆಯ ಔನ್ನತ್ಯವನ್ನು ತೋರಿಸಬೇಕೆನ್ನುವ ಚಿಂತನೆಯಲ್ಲಿ ಆರಂಭಗೊಂಡ ಮಂಗಳೂರು ಕಂಬಳ ಈ ಬಾರಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಲವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಕಂಬಳವನ್ನು ಸವಿದಿದ್ದಾರೆ. ಕಂಬಳದಲ್ಲಿ 157 ಜೊತೆ ಕೋಣಗಳು ಭಾಗವಹಿಸಿದ್ದು ನಾಳೆ ಮಧ್ಯಾಹ್ನ ವರೆಗೂ ಕಂಬಳ ನಡೆಯಲಿದೆ.
The fourth edition of Rama-Lakshmana Jodukere Kambala was held on 6 March at the Goldfinch City, Bangra Kulur in Mangalore.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm