ಬ್ರೇಕಿಂಗ್ ನ್ಯೂಸ್
09-04-21 04:05 pm Mangalore Correspondent ಕರಾವಳಿ
ಮಂಗಳೂರು, ಎ.9: ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ಮುಂದುವರಿದಿರುವಾಗಲೇ ಮಂಗಳೂರು ವಿಭಾಗದಲ್ಲಿ ನಿಧಾನವಾಗಿ ಬಸ್ಸುಗಳು ರಸ್ತೆಗೆ ಇಳಿಯತೊಡಗಿವೆ. ನಿಗಮದಲ್ಲಿ ನಿವೃತ್ತರಾದ 62 ವರ್ಷದ ಒಳಗಿನ ಸಿಬ್ಬಂದಿಯನ್ನು ಕರೆಸಿಕೊಂಡು ಬಸ್ ಚಾಲನೆ ಮಾಡಲು ಆರಂಭಿಸಿದೆ. ಸಂಸ್ಥೆಯ ತುರ್ತು ಕರೆಗೆ ಓಗೊಟ್ಟು ನಿವೃತ್ತ ನೌಕರರು ಡ್ಯೂಟಿ ಮಾಡಲು ಮುಂದಾಗುತ್ತಿದ್ದಾರೆ.
ಬೇಡಿಕೆ ಈಡೇರಿಸುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟ ಹಠ ಹಿಡಿದು ಕುಳಿತಿದ್ದರೆ, ರಾಜ್ಯ ಸರ್ಕಾರ ಕೂಡ ತನ್ನ ಪಟ್ಟನ್ನು ಸಡಿಲಿಸುತ್ತಿಲ್ಲ. ಈ ನಡುವೆ ಕೆಎಸ್ಸಾರ್ಟಿಸಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಬಸ್ ಗಳನ್ನು ಚಾಲನೆಗೊಳಿಸಲು ಸರಕಾರ ಮುಂದಾಗಿದೆ. ಇದೇ ಕಾರಣಕ್ಕೆ ನಿವೃತ್ತ ನೌಕರರನ್ನು ಕೆಲಸಕ್ಕೆ ಕರೆಯಲಾಗಿದೆ. ಮಂಗಳೂರಿನಿಂದ ಬೆಂಗಳೂರು, ಮೈಸೂರು, ಕೇರಳದ ಕಾಸರಗೋಡು ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಸ್ ಗಳ ಸಂಚಾರ ಆರಂಭವಾಗಿದೆ. ಬೆಳಗ್ಗಿನಿಂದಲೇ ಪ್ರತೀ ರೂಟಿನಲ್ಲಿ ಕೆಲವಷ್ಟು ಬಸ್ ಗಳನ್ನು ರಸ್ತೆಗೆ ಇಳಿಸಲಾಗಿದೆ. ದೂರದ ಪ್ರಯಾಣಕ್ಕೆ ಸಾಗುವ ವೋಲ್ವೋ, ರಾಜಹಂಸ ಸೇರಿದಂತೆ ಒಟ್ಟು ನಾಲ್ಕು ಬಸ್ ಗಳು ಬೆಂಗಳೂರಿಗೆ ತೆರಳಿವೆ. ಮಂಗಳೂರಿನಿಂದ ಬೆಳಗ್ಗೆ 30 ರಷ್ಟು ಬಸ್ ಗಳು ವಿವಿಧ ರೂಟಿನಲ್ಲಿ ಸಂಚಾರ ನಡೆಸಿವೆ.
ನಿಗಮಗಳಲ್ಲಿ ಸೇವೆ ಸಲ್ಲಿಸಿ ಎರಡು ವರ್ಷದೊಳಗೆ ನಿವೃತ್ತಿಯಾಗಿರುವ 62 ವರ್ಷ ಮೀರದ ದೈಹಿಕವಾಗಿ ಶಕ್ತರಾಗಿರುವ ಚಾಲಕ ಹಾಗು ನಿರ್ವಾಹಕರಿಗೆ ಒಪ್ಪಂದದ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಇದೇ ರೀತಿ ಪುತ್ತೂರು, ಸುಬ್ರಹ್ಮಣ್ಯ ಡಿಪೋದಿಂದಲೂ ವಿವಿಧ ಕಡೆಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ನಿವೃತ್ತರಾದ ಸಿಬಂದಿಗೆ ಗೌರವ ಧನ ರೂಪದಲ್ಲಿ ಚಾಲಕರಿಗೆ 800 ರೂ. ಮತ್ತು ನಿರ್ವಾಹಕರಿಗೆ 700 ರೂ. ದಿನಕ್ಕೆ ನೀಡುವುದಾಗಿ ಒಪ್ಪಂದ ಮಾಡಲಾಗಿದೆ.
ಈ ನಡುವೆ ನಿಯಮ ಉಲ್ಲಂಘಿಸಿರುವ 9 ಮಂದಿ ಸಾರಿಗೆ ಸಿಬ್ಬಂದಿ ಗಳ ಮೇಲೆ ಮಂಗಳೂರು ವಿಭಾಗದಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ. ತರಬೇತಿಯಲ್ಲಿದ್ದ ಚಾಲಕರು ಹಾಗು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಬರ ಹೇಳಿದರೂ ಬಾರದೇ ಇರುವ ಸಿಬಂದಿಯ ವಿರುದ್ಧ ನಿರ್ಲಕ್ಷ್ಯ ತೋರಿದ ಕಾರಣಕ್ಕೆ 9 ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ.
ಕೆ ಎಸ್ ಆರ್ ಟಿ ಸಿ ಯ ಕೆಲವು ಬಸ್ ಗಳು ಓಡಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಉದ್ದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸೂಚನೆ ಮೇರೆಗೆ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಹೆಲ್ಪ್ ಡೆಸ್ಕ್ ರಚಿಸಲಾಗಿದೆ. ನಾಳೆ ಮತ್ತಷ್ಟು ಬಸ್ ಗಳು ರಸ್ತೆಗೆ ಇಳಿಯುವ ಸಾಧ್ಯತೆಯಿದೆ.
Retired Ksrtc staffs called to work in Depos as drivers and conductors go on strike in Mangalore.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm