ಬ್ರೇಕಿಂಗ್ ನ್ಯೂಸ್
08-05-21 10:16 am Mangalore Correspondent ಕರಾವಳಿ
ಮಂಗಳೂರು, ಮೇ 8: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಸೀದಿಗಳ ಒಕ್ಕೂಟ ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದೆ. ಸೋಂಕಿತರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್, ಐಸೊಲೇಶನ್ ಸೆಂಟರ್ ತೆರೆಯಲು ಮುಂದಾಗಿದೆ.
ಮಂಗಳೂರಿನ ವಿವಿಧ ಮಸೀದಿಗಳ ಆಡಳಿತ ಮಂಡಳಿಗಳು ಸೇರಿಕೊಂಡು ಒಕ್ಕೂಟ ರಚಿಸಿದ್ದು, ಕೋವಿಡ್ ಸೋಂಕಿತರ ನೆರವಿಗಾಗಿ ಮಸೀದಿ ಆಡಳಿತಕ್ಕೆ ಸೇರಿದ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಿಸಲು ಮುಂದಾಗಿದೆ. ಮೊದಲಿಗೆ ಅಡ್ಯಾರ್ ನಲ್ಲಿರುವ ಬರಾಕಾ ಇಂಟರ್ನ್ಯಾಶನಲ್ ಸ್ಕೂಲ್ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತಯಾರಿ ನಡೆದಿದೆ.
ಸದ್ಯಕ್ಕೆ ಶಾಲೆ, ಕಾಲೇಜು ತೆರೆಯುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ, ಶಾಲೆಗಳನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಮಸೀದಿ ಕಮಿಟಿಗಳು ನಿರ್ಧರಿಸಿವೆ. ಕೋವಿಡ್ ಪಾಸಿಟಿವ್ ಆಗಿದ್ದವರನ್ನು ಮನೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲ್ಲ ಎಂಬ ಸ್ಥಿತಿಯಲ್ಲಿದ್ದರೆ, ಅವರನ್ನು ಕೋವಿಡ್ ಕೇರ್ ಸೆಂಟರಿನಲ್ಲಿ ಇರಿಸಲಾಗುವುದು. ಅದರ ಜೊತೆಗೆ ಐಸೋಲೇಶನ್ ಸೆಂಟರ್ ನಲ್ಲಿ ವೈದ್ಯಕೀಯ ತಜ್ಞರನ್ನು ಒಳಗೊಂಡು ರೋಗಿಗಳ ಆರೈಕೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮಸೀದಿಗಳ ಒಕ್ಕೂಟದ ಕಮಿಟಿಯ ಸದಸ್ಯ ಮಹಮ್ಮದ್ ಹುಸೇನ್ ತಿಳಿಸಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಭಾರೀ ವೇಗದಲ್ಲಿ ಹರಡುತ್ತಿದ್ದು, ಈಗ 1500 ಕ್ಕೂ ಹೆಚ್ಚು ಮಂದಿ ಪಾಸಿಟಿವ್ ಬರುತ್ತಿವೆ. ಜಿಲ್ಲಾಡಳಿತದ ಪ್ರಕಾರ, ಒಂದೆರಡು ವಾರಗಳ ನಂತರ ಈ ಸಂಖ್ಯೆ ಎರಡು- ಮೂರು ಸಾವಿರ ಆಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗೆ ನಿಗದಿಯಾಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಾಗಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಹೀಗಾಗಿ ಕೋವಿಡ್ ಕೇರ್ ವಿಚಾರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಂಘಟನೆಗಳು ರೋಗಿಗಳ ಆರೈಕೆಗಾಗಿ ಕೇರ್ ಸೆಂಟರ್ ಮಾಡಲು ಮುಂದಾಗಿದ್ದು ಅದನ್ನು ಮಸೀದಿ ಕಮಿಟಿಗಳ ಮೂಲಕ ಜಾರಿಗೆ ತರಲು ಯೋಜನೆ ಹಾಕಿದೆ. ಈ ಕೇಂದ್ರಗಳಲ್ಲಿ ಜಾತಿ, ಧರ್ಮದ ಭೇದ ಇಲ್ಲದೆ, ಎಲ್ಲರಿಗೂ ಮುಕ್ತವಾಗಿ ಸೌಲಭ್ಯ ನೀಡಲಾಗುವುದು. ವಸತಿ, ಆಹಾರ, ವ್ಯವಸ್ಥೆ ಎಲ್ಲವೂ ಉಚಿತವಾಗಿ ಸಿಗಲಿದೆ ಎಂದು ಮತ್ತೊಬ್ಬ ಸದಸ್ಯ ಇಮ್ತಿಯಾಜ್ ಬೋಳಾರ ತಿಳಿಸಿದ್ದಾರೆ.
Barakah school in Adyar to turn as covid center. The Masjid committee had declared many schools and colleges that comes under them will be turned has covid centers due to spike in Covid-19 cases.
20-02-25 10:06 pm
Bangalore Correspondent
Kalaburagi farmers protest, crocodile: ಕಲಬುರಗ...
20-02-25 08:59 pm
Chikkamagaluru Car Murder, Body Found; ಚಿಕ್ಕಮ...
20-02-25 06:59 pm
Chikkaballapur, Muzrai scam, Revenue Inspecto...
20-02-25 04:45 pm
ಉದಯಗಿರಿ ಗಲಭೆ ಪ್ರಕರಣ ; ಪ್ರಚೋದನಕಾರಿ ಭಾಷಣ ಮಾಡಿದ್...
20-02-25 02:47 pm
19-02-25 11:00 pm
HK News Desk
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
Maha Kumbh river, NGT Board: ಕುಂಭಮೇಳ ನದಿ ನೀರು...
19-02-25 01:54 pm
ಇಬ್ಬರು ಹೆಂಡಿರ ಮುದ್ದಿನ ಗಂಡ ; ವಾರದ 3 ದಿನ ಅಲ್ಲಿ....
18-02-25 10:49 pm
Hindu idols Bishop House, Pala diocese, Kera...
18-02-25 10:45 pm
21-02-25 12:40 am
Giridhar Shetty, Mangaluru
Protest Mangalore, 400 KV, Catholic sabha: ಉಡ...
20-02-25 06:48 pm
Kmc Mangalore, hospital: 2 ವರ್ಷದ ಮಗುವಿನ ಗಂಟಲಲ...
19-02-25 01:56 pm
Satish Jarkiholi, Mangalore: ಕೆಪಿಸಿಸಿ ಅಧ್ಯಕ್ಷ...
18-02-25 12:36 pm
Dinesh Gundurao, Munner katipalla, Sand Mafia...
17-02-25 10:56 pm
20-02-25 01:22 pm
Mangalore Correspondent
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm