ಬ್ರೇಕಿಂಗ್ ನ್ಯೂಸ್
11-05-21 05:20 pm Udupi Correspondent ಕರಾವಳಿ
ಕುಂದಾಪುರ, ಮೇ 11: ಲಾಕ್ಡೌನ್ ಇರುವುದರಿಂದ ಗ್ರೋಸರಿ ತರುವುದಕ್ಕೂ ವಾಹನ ಬಳಸುವಂತಿಲ್ಲ ಎಂದು ರಾಜ್ಯ ಸರಕಾರ ನಿಯಮ ಹೇರಿರುವುದರಿಂದ ಹೆಚ್ಚಿನ ಕಡೆ ಪೊಲೀಸರು ಲಾಠಿ ಬೀಸಿದ್ದು ಪರ- ವಿರೋಧ ಟೀಕೆಗೂ ಕಾರಣವಾಗಿದೆ. ಇದೇ ವೇಳೆ, ಇಲ್ಲಿನ ಕುಂಭಾಸಿಯ ಯುವಕನೊಬ್ಬ ಪೊಲೀಸರ ಲಾಠಿರುಚಿಯನ್ನು ಅಣಕಿಸುವುದಕ್ಕಾಗಿಯೇ ಹೊಸ ತಂತ್ರಕ್ಕೆ ಮೊರೆಹೋಗಿರುವ ಫೋಟೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬವರು ಸೈಕಲ್ ನಲ್ಲಿ ಪೇಟೆಗೆ ಹೊರಟಿದ್ದು ತಲೆಗೆ ಹೆಲ್ಮೆಟ್ ಮತ್ತು ಬೆನ್ನಿಗೆ ತಗಡು ಶೀಟನ್ನು ಕಟ್ಟಿಕೊಂಡಿದ್ದಾರೆ. ಬೆನ್ನಿಗೆ ಪೆಟ್ಟು ಬಿದ್ದರೂ ತಗಡು ಶೀಟ್ ಇದೆಯೆಂಬ ರೀತಿ ಬಿಂಬಿಸಿ, ಸೈಕಲಿನಲ್ಲಿ ಹೊರಟಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಲಾಠಿಗೆ ಪ್ರತಿತಂತ್ರ ಎನ್ನುವ ರೀತಿ ಬಿಂಬಿತವಾಗುತ್ತಿದೆ.
ಬೆಳಗ್ಗೆ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಿದ್ದು ಆದರೆ ನಡೆದುಕೊಂಡೇ ಮನೆ ಪರಿಸರದ ಅಂಗಡಿಗಳಿಂದ ಖರೀದಿ ನಡೆಸಬೇಕು. ಯಾವುದೇ ಕಾರಣಕ್ಕೂ ವಾಹನಗಳಲ್ಲಿ ದೂರಕ್ಕೆ ಪ್ರಯಾಣ ಮಾಡಬಾರದು. ಅಗತ್ಯ ವಸ್ತು ಖರೀದಿಗೆಂದು ಮಾರುಕಟ್ಟೆ ಇನ್ನಿತರ ಪ್ರದೇಶಕ್ಕೆ ಹೋಗಬಾರದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಯಮವನ್ನು ಬಹುತೇಕ ಕಡೆ ಜನರು ಮುರಿಯುತ್ತಿದ್ದಾರೆ. ಪೊಲೀಸರು ಅಡ್ಡಗಟ್ಟಿದರೂ ಒಳದಾರಿಗಳಿಂದ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಈ ವೇಳೆ, ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ಘಟನೆ ನಡೆದಿದೆ.
ಪೊಲೀಸರ ಲಾಠಿ ಬೀಸುವ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಯಸ್ಸಾದವರು ತಮ್ಮ ಸ್ಕೂಟರ್ ಬಳಸದೆ ಗ್ರೋಸರಿ ತರುವುದು ಹೇಗೆಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಕೆಲವು ಕಡೆ ವಯಸ್ಸಾದವರು, ಅಸಹಾಯಕರಿಗೆ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಹೀಗಿದ್ದರೂ, ಜನರು ಅಂಗಡಿ ಮುಂದೆ ಸೇರುವುದು, ಮುಗಿ ಬೀಳುವುದು ಕಾಮನ್ ಆಗಿದೆ. ಇಂಥ ಸಂದರ್ಭದಲ್ಲೇ ಯುವಕನೊಬ್ಬ ಬೆನ್ನಿಗೆ ಕಬ್ಬಿಣದ ಶೀಟ್ ಕಟ್ಟಿಕೊಂಡು ಸೈಕಲಿನಲ್ಲಿ ಪೇಟೆಗೆ ಹೊರಟು ಸುದ್ದಿಯಾಗಿದ್ದಾನೆ.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm