ಬ್ರೇಕಿಂಗ್ ನ್ಯೂಸ್
13-05-21 02:22 pm Mangalore Correspondent ಕರಾವಳಿ
ಮಂಗಳೂರು, ಮೇ 13: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 11 ಸರಕಾರಿ ರುದ್ರಭೂಮಿಗಳಲ್ಲಿ ಉಚಿತವಾಗಿ ಅಂತ್ಯಕ್ರಿಯೆ ನೆರವೇರಿಸಬಹುದು ಎಂದು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಈ ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಆದೇಶ ಹೊರಡಿಸಿದ್ದಾರೆ. ಈನತಕ ಅತ್ತಾವರ, ಬೋಳೂರು ಸ್ಮಶಾನಗಳಲ್ಲಿ ಮಾತ್ರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿತ್ತು. ಮಹಾನಗರ ಪಾಲಿಕೆಯಿಂದಲೇ ಖರ್ಚನ್ನು ಭರಿಸಲಾಗುತ್ತಿದ್ದರೂ, ಆಯಾ ಭಾಗದ ಜನರಿಗೆ ಕಷ್ಟ ಎದುರಾಗಿತ್ತು. ಇದೀಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಹನ್ನೊಂದು ಸ್ಮಶಾನಗಳಲ್ಲಿಯೂ ಅಂತ್ಯಕ್ರಿಯೆ ನಡೆಸಬಹುದು ಎಂದು ಹೊಸ ಆದೇಶ ಮಾಡಲಾಗಿದೆ.

ಬೋಳೂರು ಭಾಗದವರಿಗೆ ಬೋಳೂರು ಸ್ಮಶಾನ, ಕಾಟಿಪಳ್ಳ ಉತ್ತರ -5ರ ವಾರ್ಡಿನಲ್ಲಿರುವ ಕಾಟಿಪಳ್ಳ 8ನೇ ಬ್ಲಾಕ್ ಮ್ತತು 3ನೇ ಬ್ಲಾಕ್ ನಲ್ಲಿರುವ ಸ್ಮಶಾನ, ಹೊಸಬೆಟ್ಟು ವಾರ್ಡ್ 8ರಲ್ಲಿರುವ ಕುಳಾಯಿ ಕೃಷ್ಣನಗರ ಸ್ಮಶಾನ, ಸುರತ್ಕಲ್ ಇಡ್ಯಾ ಪೂರ್ವ ವಾರ್ಡ್ ಸಂಖ್ಯೆ 6ರಲ್ಲಿರುವ ಸುರತ್ಕಲ್ ಸ್ಮಶಾನ, ಪಂಜಿಮೊಗರು 12 ವಾರ್ಡ್ ನಲ್ಲಿರುವ ಕುಳೂರು ಸ್ಮಶಾನ, ಪಚ್ಚನಾಡಿ ವಾರ್ಡ್ 19ರಲ್ಲಿರುವ ಪಚ್ಚನಾಡಿ ಸ್ಮಶಾನ, ಕದ್ರಿ ಪದವು ವಾರ್ಡ್ 22ರ ಮುಗ್ರೋಡಿ ಗುಣಕುಲಪಾದೆ ಸ್ಮಶಾನ, ಕದ್ರಿ ದಕ್ಷಿಣ ವಾರ್ಡಿನ 33ರಲ್ಲಿ ಇರುವ ಕದ್ರಿ ಸ್ಮಶಾನ, ಪದವು ಸೆಂಟ್ರಲ್ ವಾರ್ಡಿನ 35ರಲ್ಲಿ ಶಕ್ತಿನಗರ ಸ್ಮಶಾನ, ಅತ್ತಾವರ ವಾರ್ಡಿನ 55ರಲ್ಲಿರುವ ನಂದಿಗುಡ್ಡೆ ಸ್ಮಶಾನದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳನ್ನು ಉಚಿತವಾಗಿ ಅಂತ್ಯಕ್ರಿಯೆ ನಡೆಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.
City corporation commissioner, Akshay Sridhar, said that orders have been issued to perform the funerals of those who die of coronavirus within the city limits free of cost in all the 11 crematoriums located within the city corporation limits.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
10-02-26 11:44 am
HK News Desk
ಕೆನಡಾದಲ್ಲಿ ಗುಂಡಿಟ್ಟು ಕನ್ನಡಿಗ ಸಾಫ್ಟ್ವೇರ್ ಇಂಜಿ...
09-02-26 10:25 pm
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
09-02-26 11:20 pm
HK News Desk
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
10-02-26 10:59 am
Mangalore Correspondent
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm