ಬ್ರೇಕಿಂಗ್ ನ್ಯೂಸ್
19-05-21 04:50 pm Mangalore Correspondent ಕರಾವಳಿ
ಉಳ್ಳಾಲ, ಮೇ 19: ಲಾಕ್ ಡೌನ್ ಮಾಡಿ ಕೊರೊನಾ ಕಡಿಮೆ ಆಗಿಲ್ಲ, ಮೂರು ಸಾವಿರ ಸಂಖ್ಯೆಯಲ್ಲಿದ್ದಾಗ ಕಡಿಮೆ ಆಗದ ಕೊರೊನಾ ಮೂರು ಲಕ್ಷ ಪ್ರಕರಣ ಇರುವಾಗ ಹತೋಟಿಗೆ ಬರ್ತದಾ? ಸರಕಾರಕ್ಕೆ ಬದ್ಧತೆ, ಜನರ ಬಗ್ಗೆ ಕಾಳಜಿ ಇಲ್ಲ. ಪ್ರತಿ ಮನೆಗೂ 10,000 ರೂಪಾಯಿ ಮತ್ತು ಆಹಾರ ಕಿಟ್ ನೀಡಿ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕುರ್ನಾಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತೀಯರಿಗೆ ಲಸಿಕೆ ಕೊಡದೆ ಬಾಂಗ್ಲಾ , ಪಾಕಿಸ್ತಾನಕ್ಕೆ ಲಸಿಕೆ ಕೊಡಲು ಯಾಕೆ ಮುಂದಾದಿರಿ ಎಂದು ಪ್ರಶ್ನಿಸಿದ ಅವರು ಇತರ ದೇಶದಲ್ಲಿ ಜನರ ಆರೋಗ್ಯ ನೋಡಿಕೊಂಡು ಮದ್ದು ವಿತರಿಸಿದರೆ ಬಿಜೆಪಿ ಸರಕಾರದಲ್ಲಿ ದಾಸ್ತಾನು ನೋಡಿ ಮದ್ದು ವಿತರಿಸಲಾಗುತ್ತದೆ ಎಂದು ಲೇವಡಿ ಮಾಡಿದರು.
ಕೊರೊನಾ ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಜೊತೆಗೆ ಚರ್ಚಿಸಿಕೊಂಡು ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಭೇಟಿ ಮಾಡಿದ್ದೇವೆ. ಕೊರೊನಅ ನಿಯಂತ್ರಣಕ್ಕೆ ಮುಖ್ಯವಾಗಿ ಟಾಸ್ಕ್ ಫೋರ್ಸ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದವರು ಹೇಳಿದರು.



ಲ್ಯಾಬ್ ಗೆ ಕೊರೊನಾ ಟೆಸ್ಟ್ ಗೆ ಹೋದವರ ಮಾಹಿತಿ ತಕ್ಷಣ ಗ್ರಾಮ ಪಂಚಾಯಿತಿಗೆ ತಲುಪಬೇಕು. ವರದಿ ಬರೋ ತನಕ ಎಲ್ಲೂ ಹೋಗದಂತೆ ರೋಗಿಯ ಮನವೊಲಿಸಬೇಕು. ಪಾಸಿಟಿವ್ ಕಂಡುಬಂದರೆ ಫಾ. ಮುಲ್ಲರ್ ವಿಶ್ರಾಂತಿ ಕೇಂದ್ರ, ಕೊಣಾಜೆಯ ಲೇಡೀಸ್ ಹಾಸ್ಟೆಲ್, ದೇರಳಕಟ್ಟೆಯ ಯೇನಪೊಯ ಹಸನ್ ಚೇಂಬರ್ ಅಥವಾ ಮನೆಯಲ್ಲಿ ಉಳಿಯುವವರಿಗೆ ಸಹಕಾರ ಕೊಡುವುದರ ಮೂಲಕ ನಿಯಂತ್ರಿಸಲು ಸಾಧ್ಯ ಎಂದರು.
ಅಂಗನವಾಡಿ ,ಆಶಾ ಕಾರ್ಯಕರ್ತೆಯರಿಗೆ ಎನ್ - 90 ಮಾಸ್ಕ್ ವಿತರಣೆಗೆ ಪಂಚಾಯಿತಿಗೆ ಅವಕಾಶ ನೀಡಲಾಗಿದೆ. ಸರಕಾರ ಆಶಾ ಕಾರ್ಯಕರ್ತರು, ಅಂಗನವಾಡಿ, ದಾದಿಯರ ವೇತನವನ್ನು ಆದಷ್ಟು ಶೀಘ್ರದಲ್ಲಿ ನೀಡಬೇಕು. ಈ ಕಾಲಘಟ್ಟದಲ್ಲೂ ಪಡಿತರ ಕಟ್ ಮಾಡುವುದು ಸರಿಯಲ್ಲ, ಸರಕಾರವು ಅವ್ಯವಸ್ಥೆಗಳನ್ನ ಸರಿಪಡಿಸಬೇಕಿದೆ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕುರ್ನಾಡು ಗ್ರಾಪಂ ಅಧ್ಯಕ್ಷ ಗಣೇಶ್ ನಾಯ್ಕ್ ಕುರ್ನಾಡು, ಉಪಾಧ್ಯಕ್ಷೆ ಪ್ರೇಮಾ ಗಟ್ಟಿ , ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ದೇವದಾಸ್ ಭಂಡಾರಿ ಕುರ್ನಾಡು, ಖಾಸಿಂ, ಲೋಲಾಕ್ಷಿ ಮೊದಲಾದವರು ಇದ್ದರು.
Read: ಪಡಿತರ ವಿತರಣೆಯಲ್ಲೂ ಸಮಸ್ಯೆ ; ರಾಜ್ಯ ಸರಕಾರದ ವಿರುದ್ಧ ಖಾದರ್ ವಾಗ್ದಾಳಿ
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm