ಕದ್ರಿಯಲ್ಲಿ ದಂಪತಿ ಆತ್ಮಹತ್ಯೆ ; ಡೆತ್ ನೋಟ್ ಪತ್ತೆ

09-06-21 10:49 am       Mangalore Correspondent   ಕರಾವಳಿ

ಕದ್ರಿ ಕಂಬ್ಳ ಬಳಿಯ ಪಿಂಟೋ ಲೇನ್ ರಸ್ತೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಮಂಗಳೂರು, ಜೂನ್ 9: ನಗರದ ಕದ್ರಿ ಕಂಬ್ಳ ಬಳಿಯ ಪಿಂಟೋ ಲೇನ್ ರಸ್ತೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಪಿಂಟೋಸ್ ಲೇನ್ ನಿವಾಸಿ 55 ವರ್ಷದ ಸುರೇಶ್ ಮತ್ತು ವಾಣಿಶ್ರೀ ಮೃತರು. ಸುರೇಶ್ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದ್ದು ವಾಣಿಶ್ರೀ ಶವ ಮನೆಯ ಟೆರೇಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಸುರೇಶ್, ತಬ್ಲಾ ಕಲಾವಿದರಾಗಿದ್ದರು. ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಘಟನೆಗೆ ಕಾರಣ ಏನು ಎನ್ನುವ ಬಗ್ಗೆ ಬರೆದಿದ್ದಾರೆ ಎನ್ನಲಾಗಿದೆ. 

ಕದ್ರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Read: ಲಾಕ್ಡೌನ್ ಎಫೆಕ್ಟ್ ; ಚೀಟಿ ವ್ಯವಹಾರದಲ್ಲಿ ಆರ್ಥಿಕ ಬಿಕ್ಕಟ್ಟು ; ಬದುಕನ್ನು ಮುಗಿಸಿಯೇ ಬಿಟ್ಟ ದಂಪತಿ !

Couple die by suicide in Pinto lane Kadri death note found. The man's  body was found inside the well where as the Wonand body was found hanging in the terrace.  Kadri police are investigating the case.