ಬ್ರೇಕಿಂಗ್ ನ್ಯೂಸ್
12-06-21 05:50 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ನಗರದ ಹೃದಯಭಾಗದಲ್ಲಿರುವ ನವಭಾರತ ವೃತ್ತವನ್ನು ನಿನ್ನೆ ರಾತ್ರಿ ಕೆಡವಿ ಹಾಕಲಾಗಿತ್ತು. ಅಲ್ಲಿ ಹೊಸತಾಗಿ ಸರ್ಕಲ್ ನಿರ್ಮಿಸಲಾಗುವುದೆಂದು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ಸರ್ಕಲ್ ನೆಲಸಮಗೊಳಿಸಿ ಗುಂಡಿ ಅಗೆಯುವಷ್ಟರಲ್ಲಿ ವೃತ್ತದ ಅಡಿಭಾಗದಲ್ಲಿ ಹಳೆಯ ಕಾಲದ ಬಾವಿ ಇರುವುದು ಪತ್ತೆಯಾಗಿದೆ.
ನವಭಾರತ ವೃತ್ತ ಅನ್ನುವುದು ಬ್ರಿಟಿಷರ ಕಾಲದಿಂದಲೂ ಹೆಸರು ಪಡೆದಿದ್ದ ಜಾಗ. ಯಾಕಂದ್ರೆ, ಈಗ ಓಷ್ಯನ್ ಪರ್ಲ್ ಹೊಟೇಲ್ ಇರುವ ಜಾಗದಲ್ಲಿ ಹಿಂದೆ ಸಿಪಿಸಿ ಬಿಲ್ಡಿಂಗ್ ಇತ್ತು. ಸಿಪಿಸಿ ಮೋಟರ್ಸ್ ಬಸ್ ಗಳು, ಗ್ಯಾರೇಜ್ ಅಲ್ಲಿದ್ದವು. 15 ವರ್ಷಗಳ ಹಿಂದೆ ಅದನ್ನು ಕೆಡವಿ ಓಷ್ಯನ್ ಪರ್ಲ್ ಹೊಟೇಲ್ ಕಟ್ಟಡ ನಿರ್ಮಿಸಲಾಗಿತ್ತು.


ಆದರೆ, ಅದೇ ಸಿಪಿಸಿ ಮೋಟರ್ಸ್ ಕಟ್ಟಡದಲ್ಲೇ ಹಿಂದೆ ಸ್ವಾತಂತ್ರ್ಯ ಕಾಲದಲ್ಲಿ ನವಭಾರತ ಪ್ರಿಂಟಿಂಗ್ ಪ್ರೆಸ್ ಇತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭೂಗತವಾಗಿ ಕರಪತ್ರಗಳನ್ನು ಮುದ್ರಿಸಿ, ಮಂಗಳೂರಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದೇ ನವಭಾರತ ಪ್ರಿಂಟಿಂಗ್ ಪ್ರೆಸ್. ಮಂಗಳೂರಿನ ಮಟ್ಟಿಗೆ ಅತ್ಯಂತ ಹಳೆಯ ಹೆಸರಾಗಿರುವ ನವಭಾರತ ಪ್ರಿಂಟಿಂಗ್ ಪ್ರೆಸ್ ಇದ್ದ ಕಾರಣಕ್ಕೆ ಆ ಜಾಗಕ್ಕೂ ನವಭಾರತ ವೃತ್ತ ಅನ್ನುವ ಹೆಸರು ಬಂದಿತ್ತು.
ಅತ್ತ ಡೊಂಗರಕೇರಿ ಇತ್ತ ವೆಂಕಟರಮಣ ದೇವಸ್ಥಾನದ ನಡುವೆ ಇರುವ ಕೇಂದ್ರ ಸ್ಥಾನವಾಗಿದ್ದ ನವಭಾರತ ವೃತ್ತ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿತ್ತು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಗಾಂಧೀಜಿಯವರು ಮಂಗಳೂರು ಭೇಟಿ ನೀಡಿದ್ದಾಗ ಇದೇ ನವಭಾರತದ ವೃತ್ತದ ಮೂಲಕ ಕೆನರಾ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಇವೆಲ್ಲ ಹಿರಿಮೆ- ಗರಿಮೆಗಳಿಗೆ ಹೆಸರಾಗಿದ್ದ ನವಭಾರತ ವೃತ್ತಕ್ಕೆ ಇತ್ತೀಚೆಗೆ ಹತ್ತು ವರ್ಷಗಳ ಹಿಂದೆ ಗೋವಿಂದ ಪೈ ವೃತ್ತ ಎಂದು ನಾಮಕರಣ ಮಾಡಲಾಗಿತ್ತು.


ಆದರೆ, ಹಳೆ ಕಾಲದಿಂದಲೂ ಇದ್ದ ವೃತ್ತದ ಅಡಿಭಾಗದಲ್ಲಿ ಬಾವಿ ಇದ್ದ ಬಗ್ಗೆ ಈಗಿನ ಮಂದಿಗೆ ಯಾರಿಗೂ ಗೊತ್ತಿಲ್ಲ. ಅದರ ಇತಿಹಾಸದ ಬಗ್ಗೆಯೂ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಸಿಪಿಸಿ ಮೋಟರ್ಸ್, ನವಭಾರತ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದ ವಿ.ಎಸ್. ಕುಡ್ವಾ ಈಗ ಇಲ್ಲ. ಅವರ ಪೀಳಿಗೆಯವರಿಗೂ ಬಾವಿಯ ಬಗ್ಗೆ ಮಾಹಿತಿ ಇಲ್ಲ. ವೃತ್ತ ಇದ್ದ ಜಾಗದಲ್ಲಿ ಹಳೆ ಕಾಲದ ಬಾವಿ ಪತ್ತೆ ಆಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಅಂದಾಜು 150 ವರ್ಷಗಳ ಹಿಂದಿನ ಬಾವಿಯೇ ಆಗಿರುವ ಸಾಧ್ಯತೆಯಿದೆ.
ಇತ್ತೀಚೆಗೆ ಹಂಪನಕಟ್ಟೆಯ ವೃತ್ತದಲ್ಲಿಯೂ ರಸ್ತೆ ಅಗೆದ ಸಂದರ್ಭದಲ್ಲಿ ಪ್ರಾಚೀನ ಬಾವಿ ಪತ್ತೆಯಾಗಿತ್ತು. ಹಿಂದೆ ಹಂಪಣ್ಣ ಎಂಬವರು ಕುಳಿತುಕೊಂಡಿದ್ದ ಕಾರಣಕ್ಕೆ ಬಾವಿ ಕಟ್ಟೆಗೆ ಹಂಪಣ್ಣನ ಕಟ್ಟೆ ಎನ್ನುವ ಹೆಸರಾಗಿತ್ತು ಅನ್ನುವ ಹಿನ್ನೆಲೆ ಅದಕ್ಕಿತ್ತು. ಆ ಬಾವಿಯನ್ನೂ ಸ್ಮಾರ್ಟ್ ಸಿಟಿಯ ಕಾಂಕ್ರೀಟ್ ಕೆಲಸ ನಡೆಯುವಾಗ ಉಳಿಸಿಕೊಳ್ಳಲಾಗಿದೆ.
A well, which is said to be over a century old, was found at Navabharath Circle in Mangalore. Strangely, the well is in good condition even now. It is very deep, and some claim it to be aout 100 feet deep.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm