ಬ್ರೇಕಿಂಗ್ ನ್ಯೂಸ್
02-07-21 10:03 pm Mangaluru Correspondent ಕರಾವಳಿ
ಉಳ್ಳಾಲ, ಜು.2: ಮುಸ್ಲಿಂ ಶಾಸಕ ಯು.ಟಿ.ಖಾದರ್ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಲು ಇನ್ಪೋಸಿಸ್ ನಂತಹ ಅಂತರಾಷ್ಟ್ರೀಯ ಕಂಪೆನಿಯಿಂದ ಒಂದೂವರೆ ಕೋಟಿ ಅನುದಾನ ತಂದುದರ ವಿರುದ್ಧ ಭೂಕಬಳಿಕೆ ಸ್ವರೂಪ ನೀಡುವುದು ಸಲ್ಲದೆಂದು ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟಿನಲ್ಲಿ ಪತ್ರಿಕಾಗೋಷ್ಟಿ ಕರೆದು ಅವರು ಮಾತನಾಡಿದರು. ಯು.ಟಿ.ಖಾದರ್ ಅವರು ತಾನೊಬ್ಬ ಮುಸ್ಲಿಮನಾದರೂ ಸಹ ಬಹಳ ಮುತುವರ್ಜಿ ವಹಿಸಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೋಸಿಸ್ ಕಂಪನಿಯಿಂದ ಒಂದೂವರೆ ಕೋಟಿ ಅನುದಾನ ತಂದಿದ್ದಾರೆ. ಆದರೆ ಕೆಲವರು ಷಡ್ಯಂತರ ನಡೆಸಿ ಭೂಕಬಳಿಕೆ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಇರುವ ಒಂದೂವರೆ ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಸಾಧ್ಯ ,ಹತ್ತಿರದ ಶವ ಹೂಳುವ 45 ಸೆಂಟ್ಸ್ ಜಾಗದಲ್ಲಿ ನಿರ್ಮಿಸೋದಾದರೆ 50 ಲಕ್ಷ ಹೆಚ್ಚು ಹಣ ಬೇಕೆಂದು ಕಂಪನಿ ಪ್ರಮುಖರು ಹೇಳಿದ್ದಾರೆ. ಉಳ್ಳಾಲದ ಇತಿಹಾಸದಲ್ಲೇ ಯಾರೊಬ್ಬ ನಾಯಕರೂ ರುದ್ರಭೂಮಿಗೆ ಇಷ್ಟೊಂದು ದೊಡ್ಡ ಅನುದಾನ ತಂದಿಲ್ಲ. ಆದರೂ ಭೂಕಬಳಿಕೆ ಎಂದು ಗುಳ್ಳೆಬ್ಬಿಸಿ ಶಾಸಕ ಯು.ಟಿ.ಖಾದರ್ ಅವರನ್ನು ಎತ್ತಿ ಕಟ್ಟುತ್ತಿರುವುದು ಸರಿಯಲ್ಲ. ಬದಲಾವಣೆ ಬೇಕಿದ್ದರೆ ಶಾಸಕರೊಂದಿಗೆ ಮಾತನಾಡಲಿ, ಅದು ಬಿಟ್ಟು ಈ ರೀತಿ ಅಪಪ್ರಚಾರ ಮಾಡೋದನ್ನ ನಿಲ್ಲಿಸಲಿ ಎಂದರು.
ಮುಖಂಡರಾದ ಸುರೇಶ್ ಭಟ್ನಗರ ಮಾತನಾಡಿ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ಅನೇಕ ವರುಷಗಳ ಇತಿಹಾಸವಿದೆ. ಇನ್ನು ಇದನ್ನ ಕಬಳಿಸೋ ಪ್ರಶ್ನೆ ಎಲ್ಲಿಂದ ಬರುತ್ತೆ. ಇನ್ಫೋಸಿಸ್ ನಿಂದ ವಿದ್ಯುತ್ ಚಿತಾಗಾರ ನಿರ್ಮಾಣವಾಗೋ ವಿಚಾರವನ್ನ ಸ್ಮಶಾನದ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರಲ್ಲಿ ಹೇಳಿದಾಗ ಅವರೂ ಆ ಯೋಜನೆಯನ್ನ ಪ್ರಶಂಸಿಸಿದ್ದಾರೆ. ಪ್ರಸ್ತುತ ಸ್ಮಶಾನದಲ್ಲಿ ಶವ ಸುಡಲು ಸುಮಾರು 4000 ರೂಪಾಯಿ ಖರ್ಚು ತಗಲುತ್ತಿದ್ದು, ಕೇವಲ 200 ರೂಪಾಯಿ ಖರ್ಚಲ್ಲಿ ಜನರು ಶವ ಸುಡುವಂತಾಗಲಿ ಎಂಬ ಸದುದ್ದೇಶದಿಂದ ಯು.ಟಿ.ಖಾದರ್ ಅವರು ಈ ಯೋಜನೆಯನ್ನ ತಂದಿದ್ದಾರೆ. ಸುಖಾಸುಮ್ಮನೆ ಸ್ಮಶಾನದ ಜಾಗ ಕಬಳಿಸುತ್ತಿದ್ದಾರೆ ಎಂದು ಷಡ್ಯಂತರದಿಂದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು. ಚೆಂಬುಗುಡ್ಡೆ ಪ್ರದೇಶ ಎತ್ತರ ಇರೋದರಿಂದ ಸ್ಮಶಾನಕ್ಕೆ ಕಾಯ್ದಿರಿಸಿದ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಯಿತು. ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಸಿಗಬೇಕೆಂಬ ಸದುದ್ದೇಶದಿಂದ ಶಾಸಕರು ಈ ಕಾಮಗಾರಿ ನಡೆಸಿದರೂ ಅದಕ್ಕೂ ಸ್ಮಶಾನದ ಜಾಗ ಮಾರಾಟ ನಡೆಸಿದ್ದಾರೆಂದು ಅಪಪ್ರಚಾರ ನಡೆಸಿದರು. ಶಾಸಕ ಯು.ಟಿ ಖಾದರ್ ಅವರಿಂದ ಹಿಂದೂಗಳಿಗೆ ಎಂದಿಗೂ ಅನ್ಯಾಯವಾಗಿಲ್ಲ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಸದಸ್ಯರಾದ ಶಶಿಕಲಾ, ಪ್ರಮುಖರಾದ ದೀಪಕ್ ಪಿಲಾರ್, ನಾಗೇಶ್ ಶೆಟ್ಟಿ, ವಸಂತ್ ಭಟ್ನಗರ, ಕಿಶೋರ್ ಮೊದಲಾದವರು ಇದ್ದರು.
Ullal Ishwar Ullal appreciates MLA UT Khaders efforts for Chembugudde Electric Crematorium implementation
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 11:02 am
Mangalore Correspondent
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm