ಕಡಬ ; ಸ್ಮಶಾನದಲ್ಲಿ ಅರೆಬೆಂದ ನರಮಾಂಸ ತಿಂದು ಚಪ್ಪರಿಸಿದ ನಾಯಿಗಳು !

08-08-21 01:38 pm       Mangaluru Correspondent   ಕರಾವಳಿ

ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ ಶವವನ್ನು ಅರೆಬರೆ ಸುಟ್ಟು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ನಡೆದಿದೆ.

Photo credits : Representational

ಪುತ್ತೂರು, ಆಗಸ್ಟ್ 8: ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ ಶವವನ್ನು ಅರೆಬರೆ ಸುಟ್ಟು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ನಡೆದಿದೆ.

ಕಡಬ ತಾಲೂಕಿನ ಗೋಳಿಯಡ್ಕ ಗ್ರಾಮದ ನಿವಾಸಿ ಶನಿವಾರ ಮೃತಪಟ್ಟಿದ್ದು, ಕಡಬದ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಸ್ಮಶಾನದಲ್ಲಿ ಯಾರೂ ಇರದ ಕಾರಣ ಸ್ವಲ್ಪ ಹೊತ್ತಿನ ಬಳಿಕ ಮಾಂಸ ಬೆಂದ ವಾಸನೆಗೆ ನಾಯಿಗಳು ಬಂದಿದ್ದು ಮಾಂಸದ ತುಂಡುಗಳನ್ನು ತಿಂದ ಬಳಿಕ ಎಲುಬುಗಳನ್ನು ಪಕ್ಕದ ಮನೆಗಳ ಅಂಗಳದಲ್ಲಿ ಬಿಟ್ಟಿವೆ.

ಇದೇ ವೇಳೆ ಸ್ಥಳೀಯರಿಗೆ ವಾಸನೆ ಬರಲಾರಂಭಿಸಿದ್ದು, ಸ್ಮಶಾನಕ್ಕೆ ತೆರಳಿದಾಗ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾಯಿಗಳು ನರಮಾಂಸವನ್ನು ತಿಂದು ಚಪ್ಪರಿಸಿದ್ದು ಹೊಸ ರುಚಿ ಕಂಡಕೊಂಡಂತಾಗಿದೆ.

Dogs eat half burnt dead bodies in Kadaba in Puttur. The body was half burned and that's the reason the dogs are seen eating the flesh say locals.