ಬ್ರೇಕಿಂಗ್ ನ್ಯೂಸ್
08-08-21 10:05 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 8: ಕಂಬಳದ ಅಪ್ಪಟ ಅಭಿಮಾನಿ, ಕಂಬಳ ಕೋಣಗಳ ಸಾಧಕ ಗುರುಪುರ ನಿವಾಸಿ ಕೆದುಬರಿ ಗುರುವಪ್ಪ ಪೂಜಾರಿ (78) ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕಂಬಳದ ಸಾಧನೆಯೊಂದಿಗೆ ಸ್ವತಃ ಕೃಷಿಕನಾಗಿದ್ದ ಗುರುವಪ್ಪ ಪೂಜಾರಿ ದಿನವೂ ಹಾಲು ಡೈರಿಗೆ ಒಯ್ಯುವ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ತನ್ನ ಸ್ಕೂಟಿಯಲ್ಲಿ ಹಾಲನ್ನು ಒಯ್ಯುತ್ತಿದ್ದಾಗ ಗುರುಪುರದ ಬಳಿಯ ಕುಕ್ಕುದಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಗುರುವಪ್ಪ ಪೂಜಾರಿಯವರು ತೀವ್ರ ಗಾಯಗೊಂಡಿದ್ದು ಬಳಿಕ ಆಸ್ಪತ್ರೆ ತಲುಪುವಷ್ಟರಲ್ಲಿ ನಿಧನರಾಗಿದ್ದಾರೆ.


ನಾಲ್ಕು ದಶಕಗಳಿಂದ ತಮ್ಮ ಕೃಷಿಯೊಂದಿಗೆ ಕೋಣಗಳನ್ನು ಸಾಕುತ್ತಾ ಕಂಬಳಕ್ಕೆ ಒಯ್ಯುತ್ತಿದ್ದ ಕೆದುಬರಿ ಗುರುವಪ್ಪ ಪೂಜಾರಿ ಕಂಬಳ ಕ್ಷೇತ್ರದ ಅನನ್ಯ ಸಾಧಕರು. ಕಂಬಳದ ಮೇಲಿದ್ದ ಪ್ರೇಮದಿಂದ ಕೋಣಗಳನ್ನು ಒಯ್ಯುತ್ತಿದ್ದರೇ ವಿನಾ ಅವರು ಪದಕ ಗೆಲ್ಲುವತ್ತ ಮನಸ್ಸು ನೆಟ್ಟಿರಲಿಲ್ಲ. ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ, ಕನೆಹಲಗೆ ಹೀಗೆ ಕಂಬಳದ ಎಲ್ಲ ಪ್ರಕಾರಗಳಲ್ಲೂ ಕೋಣಗಳನ್ನು ಓಡಿಸಿದ್ದ ಹಿರಿಮೆ ಅವರದ್ದು. ಹಾಗಿದ್ದರೂ ಬಿರುಸಿನ ಸ್ಪರ್ಧೆಯ ನಡುವೆ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಕೆದುಬರಿ ಹೆಸರಿಗೆ ಗುರುವಪ್ಪ ಪೂಜಾರಿಯವರು ತನ್ನದೇ ಛಾಪು ಮೂಡಿಸಿದ್ದರು. ಪೂಜಾರಿಯವರ ನಿಧನ ಕಂಬಳಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Mangalore Kambala Player Guruvappa Poojary dies of Road Accident
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 08:27 am
HK News Staffer
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm