ಕೃಷ್ಣನನ್ನು ನೋಡಲು ಮಠಕ್ಕೆ ಬರುತ್ತಿದ್ದೆ , ಸಿಎಂ ಆಗಿ ಉಡುಪಿಗೆ ಬರುವ ಯೋಗ ಕರುಣಿಸಿದ್ದಾನೆ ; ಭಾವುಕರಾದ ಮುಖ್ಯಮಂತ್ರಿ 

12-08-21 11:20 pm       Udupi Correspondent   ಕರಾವಳಿ

ಉಡುಪಿಗೆ ಯಾಕೆ ನನ್ನನ್ನು ಉಸ್ತುವಾರಿ ಮಾಡಿದ್ದರೋ ಗೊತ್ತಿಲ್ಲ. ಈಗ ನಾನು ಸಿಎಂ ಆಗಿ ಉಡುಪಿಗೆ ಬರುವ ಯೋಗ ಸಿಕ್ಕಂತಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿದ್ದಾರೆ.

ಉಡುಪಿ, ಆಗಸ್ಟ್ 12: ಉಡುಪಿ ಕೃಷ್ಣನನ್ನು ಹೊರತುಪಡಿಸಿದರೆ ಈ ಭಾಗದ ಜೊತೆ ನನಗೆ ಯಾವುದೇ ಸಂಬಂಧವಿರಲಿಲ್ಲ. ನಾನು ಶ್ರೀಕೃಷ್ಣನ ಭಕ್ತ. ಮಠಕ್ಕೆಂದೇ ಉಡುಪಿಗೆ ಬರುತ್ತಿದ್ದೆ.‌ ಆದರೆ, ಯಡಿಯೂರಪ್ಪ ನನ್ನನ್ನು ಉಡುಪಿಗೆ ಉಸ್ತುವಾರಿ ಮಾಡಿದ್ದರು.‌ ಉಡುಪಿಗೆ ಯಾಕೆ ನನ್ನನ್ನು ಉಸ್ತುವಾರಿ ಮಾಡಿದ್ದರೋ ಗೊತ್ತಿಲ್ಲ. ಈಗ ನಾನು ಸಿಎಂ ಆಗಿ ಉಡುಪಿಗೆ ಬರುವ ಯೋಗ ಸಿಕ್ಕಂತಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿದ್ದಾರೆ. 

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಮಾಡಿದ ಸಿಎಂ ಬೊಮ್ಮಾಯಿ ಅವರನ್ನು ಪರ್ಯಾಯ ಶ್ರೀಗಳು ಗೌರವಿಸಿದರು.‌ 

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಉಡುಪಿಯ ಜನರು ತುಂಬ ಹೃದಯವೈಶಾಲ್ಯ ಉಳ್ಳವರು.‌ ನಮ್ಮ ಕಷ್ಟಕ್ಕೆ ಪರಿಹಾರ ಕೇಳುತ್ತಾರೆ ವಿನಹ ವೈಯಕ್ತಿಕ ಏನೂ ಕೇಳುವುದಿಲ್ಲ.‌ ಉಡುಪಿಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಕೇಳುತ್ತಿದ್ದೆ. ಆದರೆ ಸಿಎಂ ಆಗುವ ಮೂಲಕ ಉಸ್ತುವಾರಿಯನ್ನು ಮುಕ್ತನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದರು. ‌

Karnataka CM Visits Udupi Sri Krishna Matha becomes emotional. Chief minister Basavaraj Bommai on Thursday August 12 visited Udupi district.