ಮಸೀದಿಯಲ್ಲಿ ದೇವಸ್ಥಾನ ಕುರುಹು ಪತ್ತೆ ; ಕೋರ್ಟ್ ಮೆಟ್ಟಿಲೇರಿದ ವಿವಾದ, ಕಟ್ಟಡ ಕಾಮಗಾರಿಗೆ ತಡೆಯಾಜ್ಞೆ 

23-04-22 11:54 am       Mangalore Correspondent   ಕರಾವಳಿ

ಗುರುಪುರ ಹೋಬಳಿಯ ಗಂಜಿಮಠ ಬಳಿಯ ಮಣೇಲ್ ಎಂಬಲ್ಲಿ ಮಸೀದಿ ನವೀಕರಣದ ಸಂದರ್ಭದಲ್ಲಿ ದೇವಸ್ಥಾನ ಮಾದರಿಯ ಕುರುಹು ಪತ್ತೆಯಾಗಿರುವ ವಿಚಾರ ಕೋರ್ಟ್ ಮೆಟ್ಟಿಲೇರಿದೆ. 

ಮಂಗಳೂರು, ಎ.23: ಗುರುಪುರ ಹೋಬಳಿಯ ಗಂಜಿಮಠ ಬಳಿಯ ಮಣೇಲ್ ಎಂಬಲ್ಲಿ ಮಸೀದಿ ನವೀಕರಣದ ಸಂದರ್ಭದಲ್ಲಿ ದೇವಸ್ಥಾನ ಮಾದರಿಯ ಕುರುಹು ಪತ್ತೆಯಾಗಿರುವ ವಿಚಾರ ಕೋರ್ಟ್ ಮೆಟ್ಟಿಲೇರಿದೆ. 

ಗಂಜಿಮಠ ನಿವಾಸಿ ಧನಂಜಯ ಎಂಬವರು ಮಂಗಳೂರಿನ ಮೂರನೇ ಜೆಎಂಎಫ್ ಕೋರ್ಟ್ ನಲ್ಲಿ ಈ ಬಗ್ಗೆ ದಾವೆ ಹೂಡಿದ್ದು ಸದರಿ ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಮಸೀದಿಯಲ್ಲಿ ದೇವಸ್ಥಾನ ಹೋಲುವ ಕಟ್ಟಡ ಇರುವುದರಿಂದ ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸಬಾರದು. ಕಟ್ಟಡದ ಒಳಗಡೆ ಮಸೀದಿ ಕಮಿಟಿಯವರಾಗಲೀ, ಇತರರಾಗಲೀ ಪ್ರವೇಶ ಮಾಡಬಾರದು ಎಂದು ಕೋರ್ಟ್ ತಡೆಯಾಜ್ಞೆ ನೀಡಿದೆ. 

ಮುಂದಿನ ವಿಚಾರಣೆಯ ವರೆಗೆ ಈ ತಡೆಯಾಜ್ಞೆ ಇರಲಿದೆ. ಮುಂದಿನ ವಿಚಾರಣೆ ದಿನಾಂಕ ಜೂನ್ 3ಕ್ಕೆ ನಿಗದಿ ಪಡಿಸಲಾಗಿದೆ. ಮಳಲಿ ಪೇಟೆಯ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ದೇವಸ್ಥಾನದ ಕುರುಹು ಕಂಡುಬಂದಿತ್ತು.

ಮಣೇಲ್ ಮಸೀದಿಯೊಳಗೆ ದೇವಸ್ಥಾನದ ಕುರುಹು ಪತ್ತೆ ; ಜನರಲ್ಲಿ ಕುತೂಹಲ, ಹಿಂದು ಸಂಘಟನೆಗಳಿಂದ ಸಂಶೋಧನೆಗೆ ಆಗ್ರಹ, ಜೈನ ಬಸದಿ ಬಗ್ಗೆ ಶಂಕೆ, ಯಥಾಸ್ಥಿತಿ ಕಾಪಾಡಲು ಜಿಲ್ಲಾಡಳಿತ ಸೂಚನೆ

The works related to renovation of mosque at Malali as a controversy of siting of remnants of olden Hindu temple on land of mosque cropped up, city police commissioner N Shashikumar said that, as a precaution police security is put up near the mosque till the issue is resolved.