ಬ್ರೇಕಿಂಗ್ ನ್ಯೂಸ್
02-08-23 01:54 pm Source: Vijayakarnataka ಕ್ರೀಡೆ
ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಿದೆ. ಪ್ರಮುಖವಾಗಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯವನ್ನು ಒಂದು ದಿನ ಮುಂಚಿತವಾಗಿಯೇ ನಡೆಸಲು ಬಿಸಿಸಿಐ ಮತ್ತು ಐಸಿಸಿ ಮುಂದಾಗಿವೆ. ಭದ್ರತೆ ದೃಷ್ಟಿಯಲ್ಲಿ ಅಕ್ಟೋಬರ್ 15ರಂದು ನಡೆಯಬೇಕಿದ್ದ ಪಂದ್ಯವನ್ನು ಅಕ್ಟೋಬರ್ 14ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಬದಲಾದ ವೇಳಾಪಟ್ಟಿ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಸಮ್ಮತಿ ಸೂಚಿಸಿದೆ.
ಭಾರತಕ್ಕೆ ವಿಂಡೀಸ್ ವಿರುದ್ಧ ಭರ್ಜರಿ ಜಯ:
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಜಯ ದಾಖಲಿಸಿದೆ. ಮಂಗಳವಾರ ನಡೆದ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಅಧಿಕಾರಯುತ ಆಟವಾಡಿದ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ, ಎಲ್ಲ ವಿಭಾಗಗಳಲ್ಲಿಯೂ ಆತಿಥೇಯರ ಸದ್ದಡಗಿಸಿ 200 ರನ್ಗಳ ಜಯ ದಾಖಲಿಸಿತು. ಮೊದಲಿಗೆ ವಿಂಡೀಸ್ ನೆಲದಲ್ಲಿ ದಾಖಲೆಯ ಗರಿಷ್ಠ ಸ್ಕೋರ್ ಆಗಿ 351 ರನ್ ಸಿಡಿಸಿದ ಭಾರತ ತಂಡ, ಬಳಿಕ ಎದುರಾಳಿಯನ್ನು 151 ರನ್ಗಳಿಗೆ ಆಲ್ಔಟ್ ಮಾಡಿತು.
ಕಮ್ಬ್ಯಾಕ್ ಪಂದ್ಯದಲ್ಲಿ ಜಯದೇವ್ ಉನಾದ್ಕಟ್ಗೆ ವಿಕೆಟ್
ಟ್ರಿನಿಡಾಡ್: ಬರೋಬ್ಬರಿ 3539 ದಿನಗಳ ಬಳಿಕ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆದ ಎಡಗೈ ವೇಗದ ಬೌಲರ್ ಜಯದೇವ್ ಉನಾದ್ಕಟ್, ಕಮ್ಬ್ಯಾಕ್ ಪಂದ್ಯದಲ್ಲಿ ವಿಕೆಟ್ ಕೂಡ ಪಡೆದರು. ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ಎದುರು ನಡೆದ 3ನೇ ಹಾಗೂ ಸರಣಿ ನಿರ್ಣಾಯಕ ಒಡಿಐ ಪಂದ್ಯದಲ್ಲಿ ಎದುರಾಳಿಯ ಅಪಾಯಕಾರಿ ಬ್ಯಾಟರ್ ಕೇಸಿ ಕಾರ್ಟಿ (6) ವಿಕೆಟ್ ಪಡೆದು ಸಂಭ್ರಮಿಸಿದರು.
ಶುಭಮನ್ ಗಿಲ್ - ಇಶಾನ್ ಕಿಶನ್ ದಾಖಲೆಯ ಜೊತೆಯಾಟ
ಟ್ರಿನಿಡಾಡ್: ವೆಸ್ಟ್ ಇಂಡೀಸ್ ಎದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಯುವ ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್, ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಸರಣಿ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಮೊದಲ ವಿಕೆಟ್ಗೆ 118 ಎಸೆತಗಳಲ್ಲಿ 141 ರನ್ ಕಲೆಹಾಕುವ ಮೂಲಕ, ವೆಸ್ಟ್ ಇಂಡೀಸ್ ನೆಲದಲ್ಲಿ ಮೊದಲ ವಿಕೆಟ್ಗೆ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಜೋಡಿ ಎಂದೆನಿಸಿಕೊಂಡಿದೆ. ಈ ಮೂಲಕ 6 ವರ್ಷ ಹಳೇ ದಾಖಲೆಯನ್ನು ಗಿಲ್-ಕಿಶನ್ ಅಳಿಸಿಹಾಕಿದ್ದಾರೆ.
ದೇವಧರ್ ಟ್ರೋಫಿ 2023: ದಕ್ಷಿಣ ವಲಯ ಫೈನಲ್ಗೆ
ಬೆಂಗಳೂರು: ತಮಿಳುನಾಡಿನ ಯುವ ಆರಂಭಿಕ ಬ್ಯಾಟರ್ ಸಾಯ್ ಸುದರ್ಶನ್ (132) ಬಾರಿಸಿದ ಮನಮೋಹಕ ಶತಕದ ಬಲದಿಂದ ಅಬ್ಬರಿಸಿದ ದಕ್ಷಿಣ ವಲಯ ತಂಡ ಕೇಂದ್ರ ವಲಯ ಎದುರು 7 ವಿಕೆಟ್ಗಳ ಜಯ ದಾಖಲಿಸಿ ಫೈನಲ್ಗೆ ದಾಪುಗಾಲಿಟ್ಟಿದೆ. ಅತ್ತ ರಿಯಾನ್ ಪರಾಗ್ ಶತಕದ ಬಲದಿಂದ ಮಿಂಚಿದ ಪೂರ್ವ ವಲಯ ತಂಡ ಪಶ್ಚಿಮ ವಲಯವನ್ನು 157 ರನ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಆಗಸ್ಟ್ 3ರಂದು ಪುದುಚರಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ.
Latest sports news today live 2 august 2023 India wins ODC series south zone storm in to Deodhar trophy final
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm