ಬ್ರೇಕಿಂಗ್ ನ್ಯೂಸ್
04-12-21 10:48 pm HK Desk news ಕ್ರೀಡೆ
ಮುಂಬೈ, ಡಿ.4: ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಇತಿಹಾಸ ದಾಖಲಾಗಿದೆ. ನ್ಯೂಜಿಲಂಡಿನ ಅಜಾಜ್ ಪಟೇಲ್ ಒಂದು ಇನ್ನಿಂಗ್ಸಿನಲ್ಲಿ ಎಲ್ಲ ಹತ್ತು ವಿಕೆಟ್ ಗಳನ್ನು ಕಿತ್ತು ಹೊಸ ದಾಖಲೆ ಬರೆದಿದ್ದಾರೆ. ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಾಟದಲ್ಲಿ ಅಜಾಜ್ ಪಟೇಲ್ ಭಾರತದ ಎಲ್ಲ ಹತ್ತು ವಿಕೆಟ್ ಗಳನ್ನು ಕಿತ್ತಿದ್ದು, ಈ ಸಾಧನೆ ಮಾಡಿದ ಜಗತ್ತಿನ ಮೂರನೇ ಬೌಲರ್ ಎಂಬ ಗರಿಮೆಗೆ ಪಾತ್ರವಾಗಿದ್ದಾರೆ.
ಅಜಾಜ್ ಪಟೇಲ್ 119 ರನ್ ಕೊಟ್ಟು 10 ವಿಕೆಟ್ ಪಡೆದಿದ್ದರೆ, ಈ ಹಿಂದೆ ಭಾರತದ ಅನಿಲ್ ಕುಂಬ್ಳೆ 1999ರಲ್ಲಿ ಮತ್ತು ಇಂಗ್ಲೆಂಡಿನ ಜಿಮ್ ಲೇಕರ್ 1956ರಲ್ಲಿ ಈ ಸಾಧನೆ ಮಾಡಿ ದಾಖಲೆ ಬರೆದಿದ್ದರು. ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 53 ರನ್ನಿಗೆ 10 ವಿಕೆಟ್ ಪಡೆದಿದ್ದರೆ, ಅನಿಲ್ ಕುಂಬ್ಳೆ ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ 74 ರನ್ನಿಗೆ ಹತ್ತು ವಿಕೆಟ್ ಪಡೆದು ದಾಖಲೆ ಸೇರಿದ್ದರು. ಜಿಮ್ ಲೇಕರ್ ಹತ್ತು ವಿಕೆಟ್ ಸಾಧನೆ ಮಾಡಲು 51.2 ಓವರ್ ತೆಗೆದುಕೊಂಡಿದ್ದರೆ, ಅನಿಲ್ ಕುಂಬ್ಳೆ ಕೇವಲ 26.3 ಓವರ್ ಬೌಲಿಂಗ್ ಮಾಡಿದ್ದರು. ಅಜಾಜ್ ಪಟೇಲ್ 47.5 ಓವರ್ ಗಳನ್ನು ಹತ್ತು ವಿಕೆಟ್ ಪಡೆಯಲು ತೆಗೆದುಕೊಂಡಿದ್ದಾರೆ.
ಭಾರತ ಮೂಲದ ಅಜಾಜ್ ಪಟೇಲ್ ಮುಂಬೈನಲ್ಲಿ ಹುಟ್ಟಿದ್ದು, ಅವರಿಗೆ ಎಂಟು ವರ್ಷ ಆಗಿದ್ದಾಗ ಹೆತ್ತವರು ನ್ಯೂಜಿಲಂಡಿನ ಆಕ್ಲೆಂಡ್ ನಗರಕ್ಕೆ ವಲಸೆ ಹೋಗಿದ್ದರು. ರಾಷ್ಟ್ರೀಯ ತಂಡಕ್ಕೆ ನೇಮಕ ಆಗೋದಕ್ಕೂ ಮುನ್ನ ದೇಸೀ ಕ್ರಿಕೆಟಿನಲ್ಲಿ ಆಕ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದರು. 33 ವರ್ಷದ ಅಜಾಜ್ ಪಟೇಲ್ ಇದೀಗ ತಾನು ಹುಟ್ಟಿ ಬೆಳೆದ ಮುಂಬೈನಲ್ಲಿ ವಿಶ್ವ ಶ್ರೇಷ್ಠ ಬೌಲಿಂಗ್ ಮೆರೆದಿದ್ದು, ದಾಖಲೆಯ ಪುಟಕ್ಕೆ ಸೇರಿದ್ದಾರೆ.
Shifting base got him into cricket, switching to spin made it all possible for Ajaz. If shifting from India to New Zealand saw him fall in love with cricket, switching to spin from fast bowling paved the way for Ajaz Patel’s entry into the game’s top-flight.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm