ಬ್ರೇಕಿಂಗ್ ನ್ಯೂಸ್
24-11-25 08:37 pm HK News Desk ಕ್ರೈಂ
ಕಾರವಾರ, ನ 24 : ಆನ್ಲೈನ್ನಲ್ಲಿ ಅತಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ಫಾರೆಕ್ಸ್ ಟ್ರೇಡಿಂಗ್ ಆ್ಯಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 46.50 ಲಕ್ಷ ರೂಪಾಯಿ ವಂಚಿಸಿದ ಅಂತಾರಾಜ್ಯ ವಂಚಕರ ಜಾಲವನ್ನು ಉತ್ತರ ಕನ್ನಡದ ಸಿಇಎನ್ (CEN) ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಎಂಬವರು ಫೇಸ್ಬುಕ್ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, 'MarketAxess' ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರು. ಬಳಿಕ ಆರೋಪಿಗಳು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ, ಮೇ 28, 2025 ರಿಂದ ಜುಲೈ 23, 2025 ರ ಅವಧಿಯಲ್ಲಿ ಹಂತ, ಹಂತವಾಗಿ ಒಟ್ಟು ರೂ. 46,50,000 ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಹಣ 75,00,000 ರೂ.ಗಳಾದರೂ ವಿತ್ಡ್ರಾ ಮಾಡಲು ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ದೂರುದಾರರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಂಧಿತರಲ್ಲಿ ಮೂವರು ಬ್ಯಾಂಕ್ ರಿಲೇಶನ್ಶಿಪ್ ಮ್ಯಾನೇಜರ್ಗಳು:
ಅದರಂತೆ, ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಇಎನ್ ಡಿವೈಎಸ್ಪಿ ಬಿ. ಅಶ್ವಿನಿ ಅವರ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು, ಎಂ.ಡಿ ಆಲಮ್ (ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ), ಹೈದರಾಬಾದ್ನಲ್ಲಿ ಬಂಧಿಸಲಾದ ಬಿಲ್ಲೆ ಪ್ರವೀಣಕುಮಾರ್ (35) ಮತ್ತು ವಿನಯ್ ಕುಮಾರ್ (30) ಎಂಬವರನ್ನು ಬಂಧಿಸಿದ್ದಾರೆ. ಇವರು ಆರ್ಬಿಎಲ್ (RBL) ಬ್ಯಾಂಕ್ನಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ಗಳಾಗಿದ್ದು, ವಂಚನೆಗೆ ಅಕ್ರಮವಾಗಿ ಖಾತೆ ತೆರೆದು ಸಹಕರಿಸಿದ್ದರು. ಇನ್ನೋರ್ವ ಆರೋಪಿ ಶಮೀಮ್ ಅಖ್ತರ್ (55) ಎಂಬಾತ ಬಿಹಾರ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತ ದೂರುದಾರರನ್ನು ವಂಚಕರ ಬಲೆಗೆ ಬೀಳಿಸಲು ಸಹಕರಿಸಿದ್ದ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಜಾಹೀರಾತು ನಂಬಿ ಮೋಸ ಹೋಗದಿರಿ:
ಈ ಪ್ರಕರಣದ ಮೂಲಕ ಪೊಲೀಸರು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ 'ಅಧಿಕ ಲಾಭ'ದ ಜಾಹೀರಾತುಗಳನ್ನು ನಂಬದಂತೆ ತಿಳಿಸಿದ್ದಾರೆ. ಅಧಿಕೃತವಲ್ಲದ ಟ್ರೇಡಿಂಗ್ ಆ್ಯಪ್ಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಅಲ್ಲದೆ, ಅಪರಿಚಿತರು ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಮೂಲಕ ನೀಡುವ ಆರ್ಥಿಕ ಸಲಹೆಗಳನ್ನು ನಂಬಿ ಹಣ ವರ್ಗಾಯಿಸಬೇಡಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪೊಲೀಸರು ಮನವಿ ಮಾಡಿದ್ದಾರೆ.
A major interstate fraud network has been busted by the Uttara Kannada CEN (Cyber Economic and Narcotics) police after a Honnavar-based businessman was cheated of ₹46.50 lakh through a fake online forex trading scheme. Shockingly, three of the arrested accused are bank relationship managers who helped the fraudsters by illegally opening accounts.
24-11-25 09:55 pm
Bangalore Correspondent
Pralhad Joshi, D.K. Shivakumar: ಕಾಂಗ್ರೆಸಿನಲ್ಲ...
22-11-25 08:03 pm
DK Shivakumar: ಸಿಎಂ ಅವರೇ ಐದು ವರ್ಷ ಇರೋದಾಗಿ ಹೇಳ...
22-11-25 02:25 pm
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
24-11-25 10:04 pm
HK News Desk
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
24-11-25 10:08 pm
Mangalore Correspondent
ಪುತ್ತೂರಿನಲ್ಲಿ ಜವಾಬ್ದಾರಿ ನೀಡಿದರೆ ಅಭ್ಯರ್ಥಿ ಯಾರಾ...
24-11-25 08:41 pm
ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಗೆ 15 ವರ್ಷಗಳ ಬಳಿಕ...
24-11-25 11:16 am
ಕಾಸರಗೋಡಿನಲ್ಲಿ ಮಲಯಾಳೀಕರಣ ; ಡಿಸೆಂಬರ್ 3ನೇ ವಾರದಲ್...
24-11-25 11:13 am
Mangaluru and Puttur: ನ.28ರಂದು ಪ್ರಧಾನಿ ಮೋದಿ ಉ...
23-11-25 03:25 pm
24-11-25 08:37 pm
HK News Desk
Bajpe Yedapadavu Crime, Mangalore: ಎಡಪದವು ಬಳಿ...
24-11-25 08:37 pm
ಹೊಸಕೋಟೆ ಪಾಳುಬಿದ್ದ ಮನೆಯಲ್ಲಿ ಸಿಕ್ಕಿತ್ತು ಕೋಟಿ ಕೋ...
23-11-25 07:17 pm
Bangalore Atm Van Robbery, Arrest: ಮೆಗಾ ದರೋಡೆ...
22-11-25 07:55 pm
Bangalore Robbery, Police Arrested: ಮಹಾನ್ ದರೋ...
21-11-25 11:07 pm