ಬ್ರೇಕಿಂಗ್ ನ್ಯೂಸ್
24-06-26 09:28 pm HK News Desk ಕ್ರೈಂ
ಪುಣೆ, ಜೂನ್ 24: ಇಲ್ಲಿನ ಲೋಹಗಢ ಕೋಟೆಯಲ್ಲಿ ಫೋಟೊ ಶೂಟ್ ಸಂದರ್ಭದಲ್ಲಿ ಕಾಲು ಜಾರಿ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(26) ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಭಯಾನಕ ತಿರುವು ಪಡೆದಿದ್ದು ಆತನನ್ನು ಮದುವೆಯಾಗಲಿದ್ದ ಭಾವಿ ಪತ್ನಿಯೇ ವಿಲನ್ ಆಗಿದ್ದಾಳೆ.
ಫೋಟೊ ತೆಗೆಯುವಾಗ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಕೇತನ್ ಮೃತಪಟ್ಟಿದ್ದರು ಎಂದು ಭಾವಿಸಲಾಗಿದ್ದ ಪ್ರಕರಣದಲ್ಲಿ ಈಗ ಆತನ ಭಾವಿ ಪತ್ನಿಯನ್ನೇ ಪೊಲೀಸರು ಬಂಧಿಸಿದ್ದಾರೆ. ಅಗರ್ವಾಲ್ ಜತೆ ನಿಶ್ಚಿತಾರ್ಥವಾಗಿದ್ದ ಯುವತಿಯೇ ತನ್ನ ಪ್ರಿಯಕರನ ಜತೆ ಸೇರಿ ಸಿನಿಮೀಯ ರೀತಿಯಲ್ಲಿ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಇಡೀ ಪ್ರಕರಣವು ಎರಡೂ ಕುಟುಂಬಗಳನ್ನು ಹಾಗೂ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಕೇತನ್ ವಿಶಾಲ್ ಅಗರ್ವಾಲ್ ಅವರ ಪತ್ನಿಯಾಗಬೇಕಿದ್ದ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿ (22) ಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಇಬ್ಬರಿಗೂ ಪೋಷಕರು ನಿಶ್ಚಿತಾರ್ಥ ನೆರವೇರಿಸಿ ಈ ವರ್ಷದ ನವೆಂಬರ್ನಲ್ಲಿ ಅದ್ದೂರಿ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ತನ್ನ ಭಾವಿ ಪತಿಯನ್ನು ಮುಗಿಸಲು ಯೋಜನೆ ರೂಪಿಸಿದ್ದಳು. ಸಿಯಾ ತನ್ನ ಜನ್ಮದಿನದ ನೆಪ ಮಾಡಿ ಜೂನ್ 18ರಂದು ಅಗರ್ವಾಲ್ ನನ್ನು ಲೋಹಗಢ ಕೋಟೆಗೆ ಟ್ರೆಕ್ಕಿಂಗ್ಗೆ ಕರೆತಂದಿದ್ದಳು. ಪೂರ್ವ ಯೋಜನೆಯಂತೆ ಪ್ರಿಯಕರ ಚೇತನನ್ನೂ ಆಕೆ ಅಲ್ಲಿಗೆ ಕರೆಸಿಕೊಂಡಿದ್ದಳು. ಕೋಟೆಯ ತುದಿಯಲ್ಲಿ ಕೇತನ್ ಫೋಟೊ ತೆಗೆಯುತ್ತಿದ್ದ ವೇಳೆ ಇಬ್ಬರೂ ಆತನನ್ನು ಪ್ರಪಾತಕ್ಕೆ ತಳ್ಳಿದ್ದರು. ಆರಂಭದಲ್ಲಿ ಫೋಟೊಗೆ ಪೋಸ್ ನೀಡುವಾಗ ಅಗರ್ವಾಲ್ ಕಾಲು ಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಬಳಿಕ ರಕ್ಷಣಾ ತಂಡವು ಮೃತದೇಹವನ್ನು ಹೊರತೆಗೆದಿತ್ತು. ಆದರೆ, ಲೋನಾವಾಲಾ ಗ್ರಾಮಾಂತರ ಪೊಲೀಸರು ತನಿಖೆ ವೇಳೆ ಹಲವು ಅನುಮಾನಾಸ್ಪದ ಸಂಗತಿಗಳನ್ನು ಪತ್ತೆಹಚ್ಚಿದರು. ಮೊಬೈಲ್ ಡೇಟಾ, ಕರೆ ದಾಖಲೆಗಳು ಮತ್ತು ಸ್ಥಳದಲ್ಲಿದ್ದ ಜನರ ಹೇಳಿಕೆಗಳು ಸಂಶಯವನ್ನು ಹುಟ್ಟುಹಾಕಿದ್ದವು. ತಕ್ಷಣವೇ ಪೊಲೀಸರು ಸಿಯಾ ಮತ್ತು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ.
ಕೇತನ್ ಅಗರ್ವಾಲ್ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ಕೊಲೆಗೀಡಾಗುವ ಮುನ್ನ ಅದೇ ಸ್ಥಳದಲ್ಲಿ ನಾಲ್ಕು ದಿನ ಮೊದಲು ಅಂದರೆ ಜೂನ್ 14ರಂದು ಕೊಲೆಗೆ ಯತ್ನ ನಡೆದಿತ್ತು. ಆದರೆ, ಕೂದಳೆಲೆ ಅಂತರದಲ್ಲಿ ಬದುಕುಳಿದಿದ್ದರು. ಜೂನ್ 14ರಂದು ಇದೇ ಕೋಟೆಯ ತುದಿಯಲ್ಲಿ ಕೇತನ್ ಅಗರ್ವಾಲ್ ನನ್ನು ಸಿಯಾ ತಳ್ಳಿದ್ದಳು. ಆದರೆ, ಅಲ್ಲಿನ ಮರವೊಂದು ಆತನನ್ನು ತಡೆಹಿಡಿದಿದ್ದರಿಂದ ಅಪಾಯದಿಂದ ಪಾರಾಗಿದ್ದ. ಆ ಸಮಯದಲ್ಲಿ ಸಿಯಾ, ಕೋಟೆಯ ತುದಿಯಲ್ಲಿ ಹಾವು ಇದ್ದದ್ದು ತನ್ನ ಗಮನಕ್ಕೆ ಬಂದಿತ್ತು. ಹಾವಿನ ಕಡಿತದಿಂದ ಕೇತನ್ ನನ್ನು ರಕ್ಷಿಸುವ ಉದ್ದೇಶದಿಂದ ತಳ್ಳಿದ್ದಾಗಿ ಸುಳ್ಳಿನ ಕಥೆ ಹೇಳಿ ನಂಬಿಸಿದ್ದಳು ಎಂದು ಅಗರ್ವಾಲ್ ಕುಟುಂಬಸ್ಥರು ಆರೋಪಿಸಿದ್ದಾರೆ.

17 ಕೋಟಿಯ ಅರಮನೆ ಬುಕ್ಕಿಂಗ್ !
ಕೇತನ್ ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪ್ರಿ-ಚಿಂಚವಾಡದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ. ಸಿಯಾ ಮತ್ತು ಕೇತನ್ ವಿವಾಹವು ನವೆಂಬರ್ ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆಯಬೇಕಿತ್ತು. ಕುಟುಂಬಸ್ಥರು ಜೈಪುರದಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯನ್ನು ಬುಕ್ ಮಾಡಿದ್ದರು. ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm