ಬ್ರೇಕಿಂಗ್ ನ್ಯೂಸ್
16-07-26 09:26 pm HK News Staffer ಕ್ರೈಂ
ಮಂಗಳೂರು, ಜುಲೈ 16: ಏಕಮುಖದ ಪ್ರೀತಿ, ಆಕೆ ತನಗೇ ಸಿಗಬೇಕು, ತಾನಲ್ಲದಿದ್ದರೆ ಬೇರೊಬ್ಬನೊಂದಿಗೆ ಆಕೆಯೂ ಬದುಕಿರಲೇಬಾರದು ಅನ್ನುವ ಹುಚ್ಚುತನ ಮತ್ತು ಲಂಪಟ ಪ್ರೀತಿಗೆ ಅಮಾಯಕ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಬಿ.ಸಿ ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿರುವ ಘಟನೆ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ.
ಕಕ್ಯಪದವು ನಿವಾಸಿಯಾಗಿರುವ ಲಾವಣ್ಯ(21) ಎಂಬ ಹುಡುಗಿ ಎರಡು ತಿಂಗಳ ಹಿಂದಷ್ಟೇ ಕಲ್ಲಡ್ಕದಲ್ಲಿ ಖಾಸಗಿ ಆಸ್ಪತ್ರೆಯೊಂದರ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅದಕ್ಕೂ ಮೊದಲೇ ಆಕೆಯ ದೂರದ ಸಂಬಂಧಿಯಾಗಿದ್ದ 22 ವರ್ಷದ ಚೇತನ್ ಗೌಡ ಎಂಬ ಹುಡುಗ ಯುವತಿಯ ಹಿಂದೆ ಬಿದ್ದಿದ್ದ. ತನ್ನನ್ನು ಪ್ರೀತಿಸಬೇಕು, ತನ್ನನ್ನೇ ಮದುವೆಯಾಗಬೇಕೆಂಬ ಹುಚ್ಚುತನವನ್ನು ಬೆಳೆಸಿಕೊಂಡು ಆಕೆಯನ್ನು ಹಿಂಬಾಲಿಸತೊಡಗಿದ್ದ.





ಆದರೆ ಹುಡುಗಿ ಮಾತ್ರ ಸಪೂರ ದೇಹದ ಚೇತನ್ ಗೌಡನನ್ನು ಮದುವೆಯಾಗಲು ನಿರಾಕರಿಸಿದ್ದಳು ಎನ್ನಲಾಗಿದೆ. ಆತ ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಏನೇನೋ ಮೆಸೇಜ್ ಮಾಡಿ ಹಿಂದೆ ಬಿದ್ದಿದ್ದರಿಂದ ಹುಡುಗಿಯೂ ಬೆದರಿ ಹೋಗಿದ್ದಳು. ಇಂದು ತನ್ನ ಜೊತೆಗೆ ಬರದಿದ್ದರೆ ಕೊಂದು ಬಿಡುತ್ತೇನೆಂಬ ಬೆದರಿಕೆಯನ್ನೂ ಹಾಕಿದ್ದನೆಂದು ಹೇಳಲಾಗುತ್ತಿದೆ. ಸಂಜೆ ಮೆಡಿಕಲ್ ನಿಂದ ಹೊರಡುವಾಗಲೇ ಈ ಬಗ್ಗೆ ಹುಡುಗಿ ತನ್ನ ಹತ್ತಿರದ ಸಂಬಂಧಿಕರಿಗೆ ತಿಳಿಸಿದ್ದಳು. ಎಂದಿನಂತೆ ಬಿಸಿ ರೋಡಿಗೆ ಬಂದು ಕಕ್ಯಪದವು ಹೋಗುವ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿದ್ದಾಗಲೇ ಚೇತನ್ ಕಾರಿನಲ್ಲಿ ಬಂದಿದ್ದನ್ನು ಆಕೆ ಕಂಡಿದ್ದಳು. ಹೊರಗಡೆಯಿಂದ ಬಸ್ಸಿನಿಂದ ಇಳಿದು ಬಾ ಎಂದು ಹೇಳುತ್ತಾ ಬರುತ್ತಿದ್ದುದನ್ನು ನೋಡಿದ ಆಕೆ ನಿಂತಿದ್ದ ಬಸ್ಸಿನಿಂದ ಕೆಳಕ್ಕಿಳಿದು ಓಟಕ್ಕೆ ಶುರು ಮಾಡಿದ್ದಳು. ಆದರೆ ಅಷ್ಟರಲ್ಲೇ ತನ್ನ ಕೈಲಿದ್ದ ಕತ್ತಿಯಿಂದ ಆಕೆಯ ಕತ್ತಿಗೆ ಬೀಸಿದ್ದು ಕೆಳಕ್ಕೆ ಕುಸಿದು ಬಿದ್ದಾಗಲೂ ಆಕೆಯ ಮೇಲೆ ಕತ್ತಿಯಿಂದ ಯದ್ವಾತದ್ವಾ ಕಡಿದಿದ್ದಾನೆ. ಈ ವೇಳೆ, ಬಸ್ ನಿಲ್ದಾಣದಲ್ಲಿ ಅಷ್ಟೇನೂ ಜನರು ಇಲ್ಲದಿದ್ದರೂ ಇದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರೇ ವಿನಾ ತಡೆಯುವ ಕೆಲಸ ಮಾಡಿರಲಿಲ್ಲ. ಸ್ಥಳದಲ್ಲೇ ಕುಸಿದು ಬಿದ್ದ ಯುವತಿ ಸಾವು ಕಂಡಿದ್ದಳು.
ಕೃತ್ಯ ಎಸಗಿ ಅಲ್ಲಿಂದ ಓಡುತ್ತಿರುವ ವಿಡಿಯೋ ಕೂಡ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ. ಆತ ತಾನು ಬಂದಿದ್ದ ಕಾರಿನಲ್ಲೇ ತೆರಳಿದ್ದು ಎಲ್ಲಾದರೂ ಹೋಗಿ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಚೇತನ್ ಗೌಡ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೊಲೆಯಾದ ಕೂಡಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಮಾಂಸದ ಮುದ್ದೆಯಾದಗಿ ಬಿದ್ದಿದ್ದ ಹುಡುಗಿಯ ಶವವನ್ನು ಬಟ್ಟೆಯಲ್ಲಿ ಮುಚ್ಚಿ ಆಸ್ಪತ್ರೆಗೆ ಸಾಗಿಸಿದ್ದರು.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm