ಬ್ರೇಕಿಂಗ್ ನ್ಯೂಸ್
09-08-26 04:47 pm HK News Staffer ಕ್ರೈಂ
ಮಂಗಳೂರು, ಆ.8: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ಮಹಿಳಾ ಸಿಬಂದಿಯೊಬ್ಬರು ತನ್ನ ಗಂಡನ ಚಿಕಿತ್ಸೆಯ ನೆಪದಲ್ಲಿ ನಾಲ್ಕು ಪಟ್ಟು ಬಿಲ್ ತೋರಿಸಿ 4.80 ಲಕ್ಷ ರೂ. ಹಣ ಲಪಟಾಯಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಷನರ್ ಕಚೇರಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯಶಸ್ವಿನಿ ಟಿ.ಎಸ್ ಎಂಬವರ ವಿರುದ್ಧ ಅಕೌಂಟ್ ಸುಪರಿಡೆಂಟ್ ಎಸ್.ಐ ವಂಡಾಲ್ಕರ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಯಶಸ್ವಿನಿ ಅವರು ತನ್ನ ಗಂಡ ಪುಷ್ಪ ಕುಮಾರ್ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಸಲುವಾಗಿ ಬಿಲ್ ಭರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕಾಗಿ ಕಚೇರಿ ಮುಖ್ಯಸ್ಥರ ಅನುಮತಿಯೊಂದಿಗೆ ಪತ್ರಗಳನ್ನು ಬರೆದು ಕ್ಲೈಮ್ ಮಾಡಲು ಮುಂದಾಗಿದ್ದರು.
ವೈದ್ಯಕೀಯ ಚಿಕಿತ್ಸೆಯ ಮೊದಲ ಬಿಲ್ ಪಾವತಿಸಲು ಲಗ್ತೀಕರಿಸಿದ ಬಿಲ್ಲುಗಳ ಮೊತ್ತ 15,398 ಆಗಿದ್ದರೂ, 1,95,243 ರೂ. ಮರು ಪಾವತಿ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಎರಡನೇ ಬಿಲ್ ನಲ್ಲಿ ವೈದ್ಯಕೀಯ ವೆಚ್ಚವನ್ನು 2,86,245 ರೂ. ಎಂದು ಹೇಳಿ ಮರು ಪಾವತಿಗೆ ಕೋರಲಾಗಿತ್ತು. ಆದರೆ, ಇದರ ಜೊತೆಗೆ ಲಗ್ತೀಕರಿಸಿದ ಬಿಲ್ ಮೊತ್ತ ಕೇವಲ 65,831 ಮಾತ್ರ ಆಗಿರುತ್ತದೆ. ಆಮೂಲಕ ಕಡಿಮೆ ವೈದ್ಯಕೀಯ ವೆಚ್ಚ ಆಗಿದ್ದರೂ, ನಾಲ್ಕು ಪಟ್ಟು ಹಣ ಪಡೆಯುವ ಸಲುವಾಗಿ ಬಿಲ್ಲುಗಳ ಮೊತ್ತವನ್ನು 4,81,488 ರೂ. ಎಂದು ಹೆಚ್ಚು ತೋರಿಸಿ ಹಣ ಲಪಟಾಯಿಸಲು ಯತ್ನಿಸಿರುವುದು ಕಂಡುಬಂದಿದೆ ಎಂದು ಅಕೌಂಟ್ ವಿಭಾಗದ ಮುಖ್ಯಸ್ಥ ವಂಡಾಲ್ಕರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
2025ರ ಜೂನ್ ತಿಂಗಳಿನಿಂದ 2026ರ ಆಗಸ್ಟ್ 5ರ ನಡುವೆ ಈ ರೀತಿಯ ಕಳ್ಳಾಟ ನಡೆದಿದ್ದು ಈ ಕುರಿತು ಸಲ್ಲಿಸಿರುವ ಪತ್ರದಲ್ಲಿ ಕಮಿಷನರ್ ಆಫ್ ಪೊಲೀಸ್ ಮಂಗಳೂರು ಇವರ ಸಹಿ ಮತ್ತು ಮೊಹರನ್ನು ದುರ್ಬಳಕೆ ಮಾಡಿದ್ದಾರೆಂದೂ ದೂರಿನಲ್ಲಿ ತಿಳಿಸಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm