ಬ್ರೇಕಿಂಗ್ ನ್ಯೂಸ್
15-09-26 12:55 pm HK News Staffer ಕ್ರೈಂ
ಮಂಗಳೂರು, ಸೆ 15: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ 19 ವರ್ಷದ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋಗೆ ಮಾರ್ಫ್ ಮಾಡಿ, ಇನ್ಸ್ಟಾಗ್ರಾಮ್ ಫಾಲೋವರ್ಸ್ ಜೊತೆ ಹಂಚಿಕೊಳ್ಳುವುದಾಗಿ ಬ್ಲ್ಯಾಕ್ಮೇಲ್ ನಡೆಸಿ ಬರೋಬ್ಬರಿ 5.24 ಲಕ್ಷಕ್ಕೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ಈ ಸಂಬಂಧ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಪಿರ್ಯಾದಿದಾರ 19 ವರ್ಷದ ಯುವಕ ಇನ್ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದಾಗ 'ಜಮ್ಶೇದ್' ಎಂಬ ಹೆಸರಿನ ವ್ಯಕ್ತಿ ಕಮೆಂಟ್ ಬಾಕ್ಸ್ ಮೂಲಕ ಪರಿಚಯವಾಗಿದ್ದನು. ಆತ ವಾಟ್ಸಾಪ್ನಲ್ಲಿ ಚಾಟ್ ಮಾಡಲು ನಂಬರ್ ನೀಡಿದ್ದನು.
ಜೂನ್ 19, 2026 ರಂದು ಯುವಕ ಆ ನಂಬರ್ನಲ್ಲಿ ಚಾಟ್ ಮಾಡಲು ಆರಂಭಿಸಿದಾಗ, ಆರೋಪಿಯು ಮೊದಲು ರೂ. 300 ಹಣ ನೀಡುವಂತೆ ಬೇಡಿಕೆಯಿಟ್ಟಿದ್ದನು. ಆರಂಭದಲ್ಲಿ ಹಣ ನೀಡಲು ನಿರಾಕರಿಸಿದರೂ, ಪದೇ ಪದೇ ಫೋನ್ ಕರೆ ಮಾಡಿ ಗೋಗರೆದು ಬೇಡಿಕೊಂಡಿದ್ದರಿಂದ ಯುವಕ ಆತ ಕಳುಹಿಸಿದ ಸ್ಕ್ಯಾನರ್ಗೆ ರೂ. 300 ಫೋನ್ಪೇ ಮಾಡಿದ್ದನು.
300 ರೂ. ಪಡೆದ ಬಳಿಕ ಆರೋಪಿಯು ಮತ್ತೆ ಬೇರೆ ಬೇರೆ ವಾಟ್ಸಾಪ್ ನಂಬರ್ಗಳ ಮೂಲಕ ನಿರಂತರವಾಗಿ ಹೆಚ್ಚಿನ ಹಣ ನೀಡುವಂತೆ ಪೀಡಿಸಲು ಶುರುಮಾಡಿದನು. ಯುವಕ ಹಣ ನೀಡಲು ನಿರಾಕರಿಸಿದಾಗ, ಆತನ ಮುಖದ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫ್ (ಎಡಿಟ್) ಮಾಡಿ ಯುವಕನ ವಾಟ್ಸಾಪ್ಗೆ ಕಳುಹಿಸಿದ್ದಾನೆ. "ಹೇಳಿದಷ್ಟು ಹಣ ನೀಡದಿದ್ದರೆ ಈ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ನಿನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿರುವ ಎಲ್ಲಾ ಫಾಲೋವರ್ಸ್ಗೆ ಕಳುಹಿಸಿ ಮಾನ ಹರಾಜು ಹಾಕುತ್ತೇನೆ" ಎಂದು ತೀವ್ರ ಬೆದರಿಕೆ ಹಾಕಿದ್ದಾನೆ.
ಮಾನಹಾನಿಯ ಭಯಕ್ಕೆ ಬಿದ್ದ ಯುವಕ, ಜೂನ್ 19, 2026 ರಿಂದ ಜುಲೈ 23, 2026 ರವರೆಗೆ ವಂಚಕರು ನೀಡಿದ ವಿವಿಧ ಕ್ಯೂಆರ್ ಸ್ಕ್ಯಾನರ್ಗಳಿಗೆ ತಮ್ಮ ಬ್ಯಾಂಕ್ ಆಫ್ ಬರೋಡಾ ಉಳಿತಾಯ ಖಾತೆಯಿಂದ ಫೋನ್ಪೇ ಮೂಲಕ ಹಂತ ಹಂತವಾಗಿ ಒಟ್ಟು ರೂ. 5,24,712/- ಹಣವನ್ನು ವರ್ಗಾಯಿಸಿದ್ದಾರೆ.
ಇಷ್ಟೊಂದು ಹಣ ನೀಡಿದರೂ ಆರೋಪಿಗಳ ಸುಲಿಗೆ ಮತ್ತು ಬ್ಲ್ಯಾಕ್ಮೇಲ್ ಮುಂದುವರಿದ ಕಾರಣ, ಅಂತಿಮವಾಗಿ ಯುವಕ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
What began with a demand for just ₹300 allegedly turned into a prolonged cyber blackmail ordeal, with a 19-year-old youth losing ₹5.24 lakh after cyber fraudsters allegedly morphed his photograph into an obscene image and threatened to circulate it among his Instagram followers.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
ಗಣೇಶ ಹಬ್ಬದ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm