ಬ್ರೇಕಿಂಗ್ ನ್ಯೂಸ್
05-07-21 11:10 pm Mangaluru Correspondent ಕ್ರೈಂ
ಪುತ್ತೂರು, ಜುಲೈ 5: ಹೈಟೆಕ್ ಹನಿಟ್ರ್ಯಾಪ್ ಪ್ರಕರಣ ಸಂಬಂಧಿಸಿ ಪುತ್ತೂರು ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಯುವಕನಿಂದ ಹಣ ಕಿತ್ತುಕೊಂಡಿದ್ದ ಪುತ್ತೂರಿನ ಮಹಮ್ಮದ್ ಶಾಫಿ (34), ಸವಣೂರಿನ ಅಜರುದ್ದೀನ್(38), ನಝೀರ್ (32) ಎಂಬವರನ್ನು ಬಂಧಿಸಲಾಗಿದೆ.
ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸೀರ್ ಎಂಬಾತನಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ವಿಡಿಯೋ ಕಾಲ್, ಚಾಟಿಂಗ್ ಮಾಡಿ ಹತ್ತಿರವಾಗಿದ್ದಳು. ಬಳಿಕ ವಿಡಿಯೋ ಕಾಲ್ ನಲ್ಲಿ ಅರೆ ನಗ್ನವಾಗಿ ತೋರಿಸುವಂತೆ ಹೇಳಿ, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಯುವತಿಯ ಬಲೆಗೆ ಬಿದ್ದು ಆಕೆ ಹೇಳಿದಂತೆ ಕೇಳಿದ್ದ ಅಬ್ದುಲ್ ನಾಸೀರ್ ಹನಿಟ್ರ್ಯಾಪ್ ಒಳಗಾಗಿದ್ದ. ಬಳಿಕ ಆರೇಳು ಮಂದಿ ಯುವಕರು ಅಬ್ದುಲ್ ನಾಸಿರ್ ಹಿಂದೆ ಬಿದ್ದು ಹಣಕ್ಕಾಗಿ ಪೀಡಿಸಿದ್ದಾರೆ. 30 ಲಕ್ಷ ರೂ. ಹಣ ನೀಡದೇ ಇದ್ದರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಹೇಳಿ, ಒತ್ತಡ ಹೇರಿದ್ದಾರೆ. ಅದರಂತೆ, ಮಾನಸಿಕ ಒತ್ತಡಕ್ಕೊಳಗಾದ ಅಬ್ದುಲ್ ನಾಸೀರ್ ಜಾಗ ಖರೀದಿಸಲೆಂದು ಕೂಡಿಟ್ಟಿದ್ದ 25 ಲಕ್ಷ ರೂ.ವನ್ನು ಆರೋಪಿಗಳಿಗೆ ಕೊಟ್ಟಿದ್ದ. ಆದರೆ, ಐದು ಲಕ್ಷ ಬಾಕಿ ಇರಿಸಿಕೊಂಡ ಹಣವನ್ನು ಪೀಕಿಸಿಕೊಳ್ಳಲು ನಜೀರ್ ಮತ್ತು ಅಜರ್ ಬಂದಿದ್ದು ಮತ್ತೆ ಅಬ್ದುಲ್ ನಾಸೀರ್ ನನ್ನು ಸತಾಯಿಸಿದ್ದಾರೆ.
ಇದರಿಂದ ಹಿಂಸೆಗೊಳಗಾಗಿದ್ದ ಅಬ್ದುಲ್ ನಾಸೀರ್ ಪುತ್ತೂರು ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಮೊದಲು ಯುವತಿಯನ್ನು ಬಂಧಿಸಿದ್ದು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಏಳು ಮಂದಿ ಆರೋಪಿಗಳ ಹೆಸರನ್ನು ಪೊಲೀಸರಿಗೆ ನೀಡಲಾಗಿತ್ತು. ಯುವತಿ ತನ್ನ ಹೆಸರನ್ನು ನತಾಶಾ ಎಂದು ಪರಿಚಯಿಸಿದ್ದಲ್ಲದೆ, ಕಾರ್ಕಳದವಳೆಂದು ಹೇಳಿ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ಬಂಧನದ ಬಳಿಕ ಆಕೆ ಬಂಟ್ವಾಳದ ನಿವಾಸಿಯೆಂದು ತಿಳಿದುಬಂದಿತ್ತು.
ಆರೋಪಿಗಳ ಬಳಿಯಿಂದ ಏಳು ಲಕ್ಷ ರೂ. ನಗದು, ಒಂದು ಕಾರು, ಒಂದು ಆಟೋ ಮತ್ತು ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೇ ಹನಿಟ್ರ್ಯಾಪ್ ; ಲಕ್ಷಾಂತರ ಕಳಕೊಂಡ ಯುವಕ, ಬಲೆಗೆ ಬಿದ್ದ ಯುವತಿ !
Puttur Honey trap case three Absconding persons have been arrested by Police. Seven lakh cash, 5 lakh worth Car and 1 lakh worth Auto has been seized by the Police.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm