ಬ್ರೇಕಿಂಗ್ ನ್ಯೂಸ್
05-07-21 11:10 pm Mangaluru Correspondent ಕ್ರೈಂ
ಪುತ್ತೂರು, ಜುಲೈ 5: ಹೈಟೆಕ್ ಹನಿಟ್ರ್ಯಾಪ್ ಪ್ರಕರಣ ಸಂಬಂಧಿಸಿ ಪುತ್ತೂರು ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಯುವಕನಿಂದ ಹಣ ಕಿತ್ತುಕೊಂಡಿದ್ದ ಪುತ್ತೂರಿನ ಮಹಮ್ಮದ್ ಶಾಫಿ (34), ಸವಣೂರಿನ ಅಜರುದ್ದೀನ್(38), ನಝೀರ್ (32) ಎಂಬವರನ್ನು ಬಂಧಿಸಲಾಗಿದೆ.
ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸೀರ್ ಎಂಬಾತನಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ವಿಡಿಯೋ ಕಾಲ್, ಚಾಟಿಂಗ್ ಮಾಡಿ ಹತ್ತಿರವಾಗಿದ್ದಳು. ಬಳಿಕ ವಿಡಿಯೋ ಕಾಲ್ ನಲ್ಲಿ ಅರೆ ನಗ್ನವಾಗಿ ತೋರಿಸುವಂತೆ ಹೇಳಿ, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಯುವತಿಯ ಬಲೆಗೆ ಬಿದ್ದು ಆಕೆ ಹೇಳಿದಂತೆ ಕೇಳಿದ್ದ ಅಬ್ದುಲ್ ನಾಸೀರ್ ಹನಿಟ್ರ್ಯಾಪ್ ಒಳಗಾಗಿದ್ದ. ಬಳಿಕ ಆರೇಳು ಮಂದಿ ಯುವಕರು ಅಬ್ದುಲ್ ನಾಸಿರ್ ಹಿಂದೆ ಬಿದ್ದು ಹಣಕ್ಕಾಗಿ ಪೀಡಿಸಿದ್ದಾರೆ. 30 ಲಕ್ಷ ರೂ. ಹಣ ನೀಡದೇ ಇದ್ದರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಹೇಳಿ, ಒತ್ತಡ ಹೇರಿದ್ದಾರೆ. ಅದರಂತೆ, ಮಾನಸಿಕ ಒತ್ತಡಕ್ಕೊಳಗಾದ ಅಬ್ದುಲ್ ನಾಸೀರ್ ಜಾಗ ಖರೀದಿಸಲೆಂದು ಕೂಡಿಟ್ಟಿದ್ದ 25 ಲಕ್ಷ ರೂ.ವನ್ನು ಆರೋಪಿಗಳಿಗೆ ಕೊಟ್ಟಿದ್ದ. ಆದರೆ, ಐದು ಲಕ್ಷ ಬಾಕಿ ಇರಿಸಿಕೊಂಡ ಹಣವನ್ನು ಪೀಕಿಸಿಕೊಳ್ಳಲು ನಜೀರ್ ಮತ್ತು ಅಜರ್ ಬಂದಿದ್ದು ಮತ್ತೆ ಅಬ್ದುಲ್ ನಾಸೀರ್ ನನ್ನು ಸತಾಯಿಸಿದ್ದಾರೆ.
ಇದರಿಂದ ಹಿಂಸೆಗೊಳಗಾಗಿದ್ದ ಅಬ್ದುಲ್ ನಾಸೀರ್ ಪುತ್ತೂರು ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಮೊದಲು ಯುವತಿಯನ್ನು ಬಂಧಿಸಿದ್ದು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಏಳು ಮಂದಿ ಆರೋಪಿಗಳ ಹೆಸರನ್ನು ಪೊಲೀಸರಿಗೆ ನೀಡಲಾಗಿತ್ತು. ಯುವತಿ ತನ್ನ ಹೆಸರನ್ನು ನತಾಶಾ ಎಂದು ಪರಿಚಯಿಸಿದ್ದಲ್ಲದೆ, ಕಾರ್ಕಳದವಳೆಂದು ಹೇಳಿ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ಬಂಧನದ ಬಳಿಕ ಆಕೆ ಬಂಟ್ವಾಳದ ನಿವಾಸಿಯೆಂದು ತಿಳಿದುಬಂದಿತ್ತು.
ಆರೋಪಿಗಳ ಬಳಿಯಿಂದ ಏಳು ಲಕ್ಷ ರೂ. ನಗದು, ಒಂದು ಕಾರು, ಒಂದು ಆಟೋ ಮತ್ತು ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೇ ಹನಿಟ್ರ್ಯಾಪ್ ; ಲಕ್ಷಾಂತರ ಕಳಕೊಂಡ ಯುವಕ, ಬಲೆಗೆ ಬಿದ್ದ ಯುವತಿ !
Puttur Honey trap case three Absconding persons have been arrested by Police. Seven lakh cash, 5 lakh worth Car and 1 lakh worth Auto has been seized by the Police.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm