ಬ್ರೇಕಿಂಗ್ ನ್ಯೂಸ್
05-07-21 11:10 pm Mangaluru Correspondent ಕ್ರೈಂ
ಪುತ್ತೂರು, ಜುಲೈ 5: ಹೈಟೆಕ್ ಹನಿಟ್ರ್ಯಾಪ್ ಪ್ರಕರಣ ಸಂಬಂಧಿಸಿ ಪುತ್ತೂರು ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಯುವಕನಿಂದ ಹಣ ಕಿತ್ತುಕೊಂಡಿದ್ದ ಪುತ್ತೂರಿನ ಮಹಮ್ಮದ್ ಶಾಫಿ (34), ಸವಣೂರಿನ ಅಜರುದ್ದೀನ್(38), ನಝೀರ್ (32) ಎಂಬವರನ್ನು ಬಂಧಿಸಲಾಗಿದೆ.
ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸೀರ್ ಎಂಬಾತನಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ವಿಡಿಯೋ ಕಾಲ್, ಚಾಟಿಂಗ್ ಮಾಡಿ ಹತ್ತಿರವಾಗಿದ್ದಳು. ಬಳಿಕ ವಿಡಿಯೋ ಕಾಲ್ ನಲ್ಲಿ ಅರೆ ನಗ್ನವಾಗಿ ತೋರಿಸುವಂತೆ ಹೇಳಿ, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಯುವತಿಯ ಬಲೆಗೆ ಬಿದ್ದು ಆಕೆ ಹೇಳಿದಂತೆ ಕೇಳಿದ್ದ ಅಬ್ದುಲ್ ನಾಸೀರ್ ಹನಿಟ್ರ್ಯಾಪ್ ಒಳಗಾಗಿದ್ದ. ಬಳಿಕ ಆರೇಳು ಮಂದಿ ಯುವಕರು ಅಬ್ದುಲ್ ನಾಸಿರ್ ಹಿಂದೆ ಬಿದ್ದು ಹಣಕ್ಕಾಗಿ ಪೀಡಿಸಿದ್ದಾರೆ. 30 ಲಕ್ಷ ರೂ. ಹಣ ನೀಡದೇ ಇದ್ದರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಹೇಳಿ, ಒತ್ತಡ ಹೇರಿದ್ದಾರೆ. ಅದರಂತೆ, ಮಾನಸಿಕ ಒತ್ತಡಕ್ಕೊಳಗಾದ ಅಬ್ದುಲ್ ನಾಸೀರ್ ಜಾಗ ಖರೀದಿಸಲೆಂದು ಕೂಡಿಟ್ಟಿದ್ದ 25 ಲಕ್ಷ ರೂ.ವನ್ನು ಆರೋಪಿಗಳಿಗೆ ಕೊಟ್ಟಿದ್ದ. ಆದರೆ, ಐದು ಲಕ್ಷ ಬಾಕಿ ಇರಿಸಿಕೊಂಡ ಹಣವನ್ನು ಪೀಕಿಸಿಕೊಳ್ಳಲು ನಜೀರ್ ಮತ್ತು ಅಜರ್ ಬಂದಿದ್ದು ಮತ್ತೆ ಅಬ್ದುಲ್ ನಾಸೀರ್ ನನ್ನು ಸತಾಯಿಸಿದ್ದಾರೆ.

ಇದರಿಂದ ಹಿಂಸೆಗೊಳಗಾಗಿದ್ದ ಅಬ್ದುಲ್ ನಾಸೀರ್ ಪುತ್ತೂರು ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಮೊದಲು ಯುವತಿಯನ್ನು ಬಂಧಿಸಿದ್ದು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಏಳು ಮಂದಿ ಆರೋಪಿಗಳ ಹೆಸರನ್ನು ಪೊಲೀಸರಿಗೆ ನೀಡಲಾಗಿತ್ತು. ಯುವತಿ ತನ್ನ ಹೆಸರನ್ನು ನತಾಶಾ ಎಂದು ಪರಿಚಯಿಸಿದ್ದಲ್ಲದೆ, ಕಾರ್ಕಳದವಳೆಂದು ಹೇಳಿ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ಬಂಧನದ ಬಳಿಕ ಆಕೆ ಬಂಟ್ವಾಳದ ನಿವಾಸಿಯೆಂದು ತಿಳಿದುಬಂದಿತ್ತು.
ಆರೋಪಿಗಳ ಬಳಿಯಿಂದ ಏಳು ಲಕ್ಷ ರೂ. ನಗದು, ಒಂದು ಕಾರು, ಒಂದು ಆಟೋ ಮತ್ತು ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೇ ಹನಿಟ್ರ್ಯಾಪ್ ; ಲಕ್ಷಾಂತರ ಕಳಕೊಂಡ ಯುವಕ, ಬಲೆಗೆ ಬಿದ್ದ ಯುವತಿ !
Puttur Honey trap case three Absconding persons have been arrested by Police. Seven lakh cash, 5 lakh worth Car and 1 lakh worth Auto has been seized by the Police.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm