ಬ್ರೇಕಿಂಗ್ ನ್ಯೂಸ್
01-10-21 08:06 pm Mangaluru Correspondent ಕ್ರೈಂ
ಉಳ್ಳಾಲ, ಅ.1: ಕಳೆದ ವಾರವಷ್ಟೇ ಅಪರಿಚಿತ ವ್ಯಕ್ತಿಯೊಬ್ಬ ಸೋಮೇಶ್ವರದ ಮನೆ, ಮನೆಗಳಿಗೆ ಕ್ರೈಸ್ತ ಧರ್ಮ ಪ್ರಚಾರದ ಕರಪತ್ರಗಳನ್ನ ಹಂಚಿದ ಪ್ರಕರಣ ನಡೆದಿದ್ದು ಇದರ ಬೆನ್ನಲ್ಲೇ ಇಂದು ತೊಕ್ಕೊಟ್ಟಿನ ಮನೆಗಳಿಗೂ ವ್ಯಕ್ತಿಯೋರ್ವ ಅಂತಹದೇ ಕರಪತ್ರಗಳನ್ನ ಹಂಚಿದ್ದಾನೆ.
ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ವಿನಮ್ರ ಬಾರಿನ ಪಕ್ಕದ ಕಿರು ರಸ್ತೆಯಲ್ಲಿರುವ ಆರು ಮನೆಗಳಿಗೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಹಂಚಿದ್ದಾನೆ. ಸ್ಥಳೀಯರಾದ ದಯಾನಂದ್ ಎಂಬವರ ಮನೆಗೇಟಲ್ಲಿ ಅಪರಿಚಿತ ವ್ಯಕ್ತಿ ಸ್ಟಿಕ್ಕರ್, ಕರಪತ್ರಗಳನ್ನ ಇರಿಸಿದ್ದು ಅದನ್ನು ಕಿತ್ತೆಸೆದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕರಪತ್ರ, ಪುಸ್ತಕಗಳನ್ನ ವಶಕ್ಕೆ ಪಡೆದಿದ್ದಾರೆ.


ಹೆಗಲಿಗೆ ಬ್ಯಾಗ್ ಹಾಕಿದ್ದ ಸುಮಾರು 45 ವರ್ಷದ ವ್ಯಕ್ತಿಯೋರ್ವ ಕರಪತ್ರ, ಪುಸ್ತಕಗಳನ್ನ ಗೇಟಲ್ಲಿ ಇರಿಸಿದ್ದಾನೆಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ವಿಚಾರವನ್ನ ಬಜರಂಗದಳದ ಪ್ರಮುಖರಿಗೂ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿ ತೊಕ್ಕೊಟ್ಟು ಪರಿಸರದ ಇನ್ನಷ್ಟು ಮನೆಗಳಿಗೆ ಕರಪತ್ರಗಳನ್ನು ಹಂಚಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ವಾರ ಸೆ.24ರಂದು ಸೋಮೇಶ್ವರದ ರೈಲ್ವೇ ನಿಲ್ದಾಣದ ಹಿಂದಿನ ಬೀಚ್ ರಸ್ತೆಯ ಮನೆಗಳ ಗೇಟ್ ಗಳಲ್ಲಿ ಸಂಪರ್ಕದ ಮೊಬೈಲ್ ಸಂಖ್ಯೆ ನಮೂದಿಸಿದ ಕನ್ನಡ, ಮಳಯಾಲಂನಲ್ಲಿ ಮುದ್ರಿತ ಕರಪತ್ರ, ಪುಸ್ತಕ, ಸ್ಟಿಕ್ಕರ್ ಗಳನ್ನ ಅಪರಿಚಿತನೊಬ್ಬ ಇರಿಸಿ ಹೋಗಿದ್ದ. ಬಜರಂಗದಳ ಕಾರ್ಯಕರ್ತರು ಕರಪತ್ರ ಹಂಚಿದ್ದ ವ್ಯಕ್ತಿಯ ಶೋಧ ಕಾರ್ಯವನ್ನೂ ನಡೆಸಿದ್ದರು.
ಇಂದು ಅದೇ ರೀತಿಯ ಪುಸ್ತಕ, ಕರಪತ್ರಗಳನ್ನು ತೊಕ್ಕೊಟ್ಟಿನ ಪರಿಸರದ ಮನೆಗಳ ಗೇಟ್ ಗಳಲ್ಲಿ ಇರಿಸಲಾಗಿದೆ. ಘಟನೆ ಕುರಿತಂತೆ ಬಜರಂಗದಳ ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಅಪರಿಚಿತ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸೋಮೇಶ್ವರ ; ಮನೆ, ಮನೆಗೆ ಕ್ರೈಸ್ತ ಧರ್ಮ ಪ್ರಚೋದಿತ ಕರಪತ್ರ, ಪುಸ್ತಕ ಹಂಚಿದ ಅಪರಿಚಿತ ! ಬಜರಂಗದಳ ಕಾರ್ಯಕರ್ತರ ಆಕ್ರೋಶ
Christian Letters, Bible, and Magazine found at outside homes in Thokottu after Someshwara VHP demands arrest. Recently the same were found in houses at Someshwara.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am