ಬ್ರೇಕಿಂಗ್ ನ್ಯೂಸ್
06-01-21 03:24 pm Source: GIZBOT Manthesh ಡಿಜಿಟಲ್ ಟೆಕ್
ನಿಮಗೆ ನಿಮ್ಮ ಹೋಲದ ಪಹಣಿ ಪಡೆಯಬೇಕಿದ್ದರೇ, ಮೊದಲಿನಂತೆ ನಾಡ ಕಚೇರಿಗೆ ಹೋಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಅತೀ ಸುಲಭವಾಗಿ ಹೋಲದ RTC ಉತಾರ/ ಪಹಣಿಯನ್ನು ನೀವು ಪಡೆಯಬಹುದಾಗಿದೆ. ಹಾಗೆಯೇ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಸಹ ಅವಕಾಶವಿದೆ.
ಹೌದು, ಸದ್ಯ ತಂತ್ರಜ್ಞಾನ ಬಹುತೇಕ ಎಲ್ಲ ಕೆಲಸಗಳನ್ನು ಸರಳಗೊಳಿಸಿದೆ. ಸರ್ಕಾರ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಆನ್ಲೈನ್ ಮೂಲಕ ಯಾವಾಗ ಬೇಕಾದರೂ ಪಹಣಿಯಲ್ಲಿ ಪಡೆಯಬಹುದಾಗಿದೆ. ಪಹಣಿ ಪಡೆಯಲು ಅಗತ್ಯ ಮಾಹಿತಿಗಳಾದ ಹೋಲದ ಸರ್ವೇ ನಂಬರ್, ಹಿಸ್ಸಾ, ಯಾವ ಜಿಲ್ಲೆ, ಯಾವ ತಾಲೂಕ್, ಯಾವ ಹೋಬಳಿಗಳ ಇವುಗಳ ಮಾಹಿತಿ ನೀಡಬೇಕಿರುತ್ತದೆ. ಹಾಗಾದರೇ ಆನ್ಲೈನ್ನಲ್ಲಿ ಪಹಣಿ ಪಡೆಯುವುದು

ಆನ್ಲೈನ್ನಲ್ಲಿ ಪಹಣಿ ಪಡೆಯಲು ಈ ಕ್ರಮ ಅನುಸರಿಸಿ
ಹಂತ 1 ಮೊದಲು ನೀವು ಬ್ರೌಸರ್ನಲ್ಲಿ https://landrecords.karnataka.gov.in ಅಥವಾ Bhoomi ವೆಬ್ಸೈಟ್ ತೆರೆಯಿರಿ.
ಹಂತ 2 ಆ ನಂತರ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ View RTC and MR ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3 View RTC and MR ಆಯ್ಕೆ ಕ್ಲಿಕ್ ಮಾಡಿದ ನಂತರ ಮೇಲೆ ತೋರಿಸಿರುವ ವಿಂಡೋ ತೆರದುಕೊಳ್ಳುತ್ತದೆ.

ಹಂತ 4 ನಂತರ ಅಲ್ಲಿ ಕೇಳಲಾಗಿರುವ, ಹೋಲ ಇರುವ ಜಿಲ್ಲೆ ಯಾವುದು, ತಾಲೂಕು ಯಾವುದು, ಹೋಬಳಿ, ಗ್ರಾಮ, ಸರ್ವೇ ನಂಬರ್ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 5 ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ Fetch Details ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6 Fetch Details ಆಯ್ಕೆ ಕ್ಲಿಕ್ ಮಾಡಿದ ಮೇಲೆ ನೀವು ನಮೂದಿಸಿದ ಜಾಗದ/ಭೂಮಿಯ ಮಾಹಿತಿಯನ್ನಾಧರಿಸಿ ಆ ಸರ್ವೇ ನಂಬರ್ನಲ್ಲಿರುವ ಭೂಮಿಯ ವಿವರಗಳು ನಿಮಗೆ ಕಾಣುತ್ತವೆ.

ಹಂತ 7 ಭೂಮಿಯ ವಿವರಗಳು ಕಾಣಿಸಿಕೊಂಡ ನಂತರ View ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 8 View ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೊಂದು ಪುಟದಲ್ಲಿ ನಿಮ್ಮ ಪಹಣಿ ಕಾಣುತ್ತದೆ. ನೀವು ಅಲ್ಲಿ ಕಾಣುವ ಪಹಣಿಯನ್ನು ಸೇವ್ ಮಾಡಿಕೊಂಡು ಪ್ರಿಂಟ್ ತೆಗೆಸಿಕೊಳ್ಳಬಹುದು.
ಹಂತ 9 ಆನ್ಲೈನ್ನಲ್ಲಿ ವೀಕ್ಷಿಸುವ ಪಹಣಿ ವೀಕ್ಷಣೆಗೆ ಮಾತ್ರ. ಆದರೆ ನಿಗದಿತ ಸರ್ಕಾರಿ ಶುಲ್ಕ ಪಾವತಿಸುವ ಮೂಲಕ ಕೆಲಸಗಳಿಗೆ ಮಾನ್ಯತೆ ಇರುವಂತಹ ಪಹಣಿ ಸಹ ಪ್ರಿಂಟ್ ಮಾಡಬಹುದಾಗಿದೆ.
This News Article is a Copy of GIZBOT
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
20-07-26 03:42 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ...
18-07-26 09:31 pm
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
20-07-26 03:14 pm
HK News Staffer
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
19-07-26 07:42 pm
HK News Desk
ಮೂಡುಬಿದ್ರೆ ; ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ಯು...
18-07-26 10:06 pm
ಮೈಸೂರು ; ಹೊಸ ಬದುಕಿನ ಕನಸು 15 ದಿನದಲ್ಲೇ ನುಚ್ಚುನ...
18-07-26 07:27 pm
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 8 ಕಾರ್...
18-07-26 07:21 pm
ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡುಕೋಣ ಬೇಟೆ ; ತಡೆದು...
18-07-26 12:34 pm