ಬ್ರೇಕಿಂಗ್ ನ್ಯೂಸ್
21-05-22 10:32 pm Source: Vijayakarnataka ಉದ್ಯೋಗ
ಹೊಸದಿಲ್ಲಿ: ಪೇಟಿಎಂ ಮಾತೃ ಸಂಸ್ಥೆ ಒನ್97 ಕಮ್ಯುನಿಕೇಶನ್ಸ್ ಶುಕ್ರವಾರ ತನ್ನ ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು ಕಂಪನಿಯ ನಷ್ಟ 761.4 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ 441.8 ಕೋಟಿ ರೂ. ನಷ್ಟ ಅನುಭವಿಸಿತ್ತು.
ಇದೇ ವೇಳೆ ಪೇಟಿಎಂ ಕಾರ್ಯಾಚರಣೆಗಳಿಂದ 1540.9 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 815.3 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಕಂಪನಿಯ ಆದಾಯ ಶೇ. 88.99ರಷ್ಟು ಏರಿಕೆ ಕಂಡಿದೆ.
ಆದಾಯ ಹೆಚ್ಚಲು ಎಂಡಿಆರ್ ಬೇರಿಂಗ್ ಉಪಕರಣಗಳ ಮೂಲಕ (ಪೇಟಿಎಂ ವ್ಯಾಲೆಟ್, ಪೇಟಿಎಂ ಬ್ಯಾಂಕ್ ಖಾತೆ, ಕಾರ್ಡ್ಗಳು, ಇತ್ಯಾದಿ) ವ್ಯಾಪಾರಿಗಳು ಹೆಚ್ಚಿನ ಪಾವತಿಗಳನ್ನು ಪಡೆದುಕೊಂಡಿದ್ದೇ ಕಾರಣ ಎಂದು ಪೇಟಿಎಂ ಹೇಳಿದೆ. ಪ್ಲಾಟ್ಫಾರ್ಮ್ನಲ್ಲಿ ಪಾಲುದಾರರ ಮೂಲಕ ಸಾಲಗಳ ವಿತರಣೆ ಏರಿಕೆಯಾಗಿದ್ದರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.
![]()
ಇನ್ನು ಕಂಪನಿಯ ಸರಾಸರಿ ಮಾಸಿಕ ವಹಿವಾಟು ಬಳಕೆದಾರರ (ಎಂಟಿಯು) ಸಂಖ್ಯೆ, ಅಂದರೆ ಒಂದು ತಿಂಗಳಲ್ಲಿ ಕನಿಷ್ಠ ಒಂದು ಯಶಸ್ವಿ ಪಾವತಿ ಮಾಡಿದ ಬಳಕೆದಾರರ ಸಂಖ್ಯೆ ಶೇ. 41ರಷ್ಟು ಬೆಳವಣಿಗೆ ಕಂಡಿದ್ದು 7.09 ಕೋಟಿಗೆ ತಲುಪಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದೊಂದು ವರ್ಷದಲ್ಲಿ ನೀಡಲಾದ ಸಾಲಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಕಂಪನಿ ಹೇಳಿದ್ದು, 65 ಲಕ್ಷ ಸಾಲ ವಿತರಿಸಿರುವುದಾಗಿ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 374ರಷ್ಟು ಸಾಲ ವಿತರಣೆ ಹೆಚ್ಚಾಗಿರುವುದಾಗಿ ತಿಳಿಸಿದೆ.
ಇಷ್ಟೆಲ್ಲಾ ಬೆಳವಣಿಗಳ ನಡುವೆಯೂ ಕಂಪನಿಯ ನಷ್ಟ ಮುಂದುವರಿದಿದೆ. ಆದಾಯ ಏರಿಕೆಯಾಗಿದ್ದರೂ ವೆಚ್ಚಗಳು ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಮೇಲಿನ ವೆಚ್ಚಗಳು 347.8 ಕೋಟಿ ರೂ.ನಿಂದ 863.4 ಕೋಟಿ ರೂ.ಗೆ ಏರಿಕೆಯಾಗಿವೆ.

ಪಾವತಿ ಪ್ರಕ್ರಿಯೆ ಶುಲ್ಕಗಳು ಮಾರ್ಚ್ 2022ರ ತ್ರೈಮಾಸಿಕದಲ್ಲಿ ಒಂದು ವರ್ಷದ ಹಿಂದೆ ಇದ್ದ 508.7 ಕೋಟಿ ರೂ.ನಿಂದ 774.2 ಕೋಟಿ ರೂಪಾಯಿಗಳಿಗೆ ಹೆಚ್ಚಿದ್ದು, ಶೇ. 52ರಷ್ಟು ಏರಿಕೆ ದಾಖಲಾಗಿದೆ. ಮಾರ್ಕೆಟಿಂಗ್ ವೆಚ್ಚಗಳು ಕೂಡ 100.1 ಕೋಟಿ ರೂ.ಗಳಿಂದ 248.9 ಕೋಟಿ ರೂ.ಗೆ ಏರಿಕೆಯಾಗಿವೆ.
ಒಟ್ಟಾರೆ ಇಡೀ ವರ್ಷದ ಲೆಕ್ಕ ತೆಗೆದುಕೊಂಡರೆ ಮಾರ್ಚ್ 31, 2022 ಕ್ಕೆ ಕೊನೆಗೊಂಡ ವರ್ಷದಲ್ಲಿ ಪೇಟಿಎಂ 2,396.4 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ಕಂಪನಿ 1,701 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ ಆದಾಯ 2,802.4 ಕೋಟಿ ರೂ.ನಿಂದ ಶೇ. 77.49ರಷ್ಟು ಏರಿಕೆ ಕಂಡಿದ್ದು 4,974.2 ಕೋಟಿ ರೂ.ಗೆ ತಲುಪಿರುವುದೇ ಕಂಪನಿಯ ಪಾಲಿನ ಶುಭ ಸುದ್ದಿಯಾಗಿದೆ.
Paytm Q4 Results Company Net Loss Widens To Rs 761 Crore In March Quarter.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm