ಟವರ್‌ನಲ್ಲಿ ಸಿಲುಕಿದ್ದ ಪಕ್ಷಿ ಉಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ; ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ 

03-01-23 04:46 pm       Bangalore Correspondent   ಕರ್ನಾಟಕ

ತಮ್ಮ ಕರ್ತವ್ಯದಲ್ಲಿ ಸದಾ ನಿರತರಾಗಿರುವ ಆರಕ್ಷಕರು, ಇತರರ ಜೀವನ ಉಳಿಸುವಲ್ಲಿ ಸದಾ ಕಾರ್ಯೋನ್ಮುಖರಾಗಿರುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಅಂದ ಹಾಗೆ, ಇಲ್ಲಿ ಆರಕ್ಷಕರೊಬ್ಬರು ರಕ್ಷಿಸಿದ್ದು ಮನುಷ್ಯನ ಪ್ರಾಣವನ್ನಲ್ಲ. ಬದಲಾಗಿ ಪುಟ್ಟ ಹಕ್ಕಿಯೊಂದನ್ನು.

ಬೆಂಗಳೂರು, ಜ.3 : ತಮ್ಮ ಕರ್ತವ್ಯದಲ್ಲಿ ಸದಾ ನಿರತರಾಗಿರುವ ಆರಕ್ಷಕರು, ಇತರರ ಜೀವನ ಉಳಿಸುವಲ್ಲಿ ಸದಾ ಕಾರ್ಯೋನ್ಮುಖರಾಗಿರುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಅಂದ ಹಾಗೆ, ಇಲ್ಲಿ ಆರಕ್ಷಕರೊಬ್ಬರು ರಕ್ಷಿಸಿದ್ದು ಮನುಷ್ಯನ ಪ್ರಾಣವನ್ನಲ್ಲ. ಬದಲಾಗಿ ಪುಟ್ಟ ಹಕ್ಕಿಯೊಂದನ್ನು.

ಬೆಂಗಳೂರಿನ ಟ್ರಾಫಿಕ್ ಪೊಲೀಸ್‌ ಒಬ್ಬರು, ಟವರ್‌ನಲ್ಲಿ ಸಿಲುಕಿಕೊಂಡಿದ್ದ ಕಾಗೆಯನ್ನು ರಕ್ಷಿಸಲು ಆ ಟವರ್ ಏರಿರುವ ಘಟನೆ ನಡೆದಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ, ಪಕ್ಷಿಯ ಪ್ರಾಣವನ್ನು ಉಳಿಸಿದ ಆರಕ್ಷಕನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಬೆಂಗಳೂರಿನ ಪಶ್ಚಿಮ ಟ್ರಾಫಿಕ್‌ ವಿಭಾಗದ ಉಪ ಪೊಲೀಸ್‌ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಅವರು ಹಂಚಿಕೊಂಡಿದ್ದಾರೆ.

Bengaluru traffic police risks life to rescue a bird, sparks debate on  Twitter | India News

ಉಪ ಪೊಲೀಸ್‌ ಆಯುಕ್ತರು ಶೇರ್‌ ಮಾಡಿರುವ ವಿಡಿಯೋವನ್ನು 2.26 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಟ್ರಾಫಿಕ್‌ ಪೊಲೀಸ್‌ ಸುರೇಶ್‌ ಅವರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಟವರ್‌ ಏರಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಪಕ್ಷಿಯನ್ನು ರಕ್ಷಿಸಿದ್ದಾರೆ. ಹೀಗಾಗಿ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಇದೇ ವಿಡಿಯೋವನ್ನು ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು ಕೂಡಾ ಹಂಚಿಕೊಂಡಿದ್ದಾರೆ. 'ನಮ್ಮ ಸಂಚಾರ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ರಾಜಾಜಿನಗರದ ಟ್ರಾಫಿಕ್‌ ಪೊಲೀಸ್‌ ಸುರೇಶ್‌ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು," ಅಂದು ಎವರು ಟ್ವೀಟ್‌ ಮಾಡಿದ್ದಾರೆ.‌

Bengaluru traffic police being praised for his brave move of risking his  life to save a bird | Video

ಹಲವಾರು ಇಂಟರ್ನೆಟ್ ಬಳಕೆದಾರರು ಸುರೇಶ್‌ ಅವರ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿದ್ದಾರೆ. ಈ ನಡುವೆ, ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಪೊಲೀಸರಿಗೆ ಕರೆ ನೀಡಿದ್ದಾರೆ. “ಇದು ಅವರ ಕರ್ತವ್ಯವನ್ನು ಮೀರಿದೆ. ದಯವಿಟ್ಟು ಅವರಿಗೆ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಿ,” ಎಂದು ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.

“ಎಲ್ಲ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಎಂದು ಹೇಗೆ ಒತ್ತಾಯಿಸುತ್ತೀರೋ, ಹಾಗೆಯೇ ಪೊಲೀಸರ ಸುರಕ್ಷತೆಯ ಬಗ್ಗೆಯೂ ಆದ್ಯತೆ ನೀಡಬೇಕು. ಅವರಿಗೂ ಮನೆ ಹಾಗೂ ಕುಟುಂಬ ಎಂಬುದು ಇದೆ,” ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.

“ಸರ್, ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಇಲ್ಲದೆ ದಯವಿಟ್ಟು ಇಂತಹ ಕ್ರಮಗಳನ್ನು ಪ್ರೋತ್ಸಾಹಿಸಬೇಡಿ. ಏನಾದರೂ ಹೆಚ್ಚು ಕಡಿಮೆಯಾದರೆ ಅವರ ಜೀವನದುದ್ದಕ್ಕೂ ಅವರ ಕುಟುಂಬದೊಂದಿಗೆ ಯಾರೂ ಬೆಂಬಲವಾಗಿ ನಿಲ್ಲುವುದಿಲ್ಲ ಎಂಬುದು ನಮಗೆ ಗೊತ್ತಿದೆ,” ಎಂದು ಮತ್ತೊಬ್ಬರು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಪೊಲೀಸರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಇಂತಹ ಸಾಹಸಕ್ಕೆ ಕೈ ಹಾಕುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ.

A video is being circulated on the Internet where a traffic police official can be seen climbing a hoarding structure to save a bird without any safety gear on. The video has been posted on Twitter by Kuldeep Kumar R Jain, Bengaluru's deputy commissioner of traffic police (west) in which he lauded the Bengaluru traffic policeman. He wrote, "The hidden and unexplored side of policemen. Well done Mr Suresh from Rajajinagar Traffic BTP."