ಬ್ರೇಕಿಂಗ್ ನ್ಯೂಸ್
03-02-23 11:33 am Bangalore Correspondent ಕರ್ನಾಟಕ
ಬೆಂಗಳೂರು, ಫೆ.3: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕರ ಒಳಗಿನ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಗೆ ಬೇಸತ್ತ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸಮಿತಿಯಲ್ಲಿ ಚರ್ಚಿಸದೆ, ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ತಮ್ಮದೇ ಭರವಸೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಹೀಗಾಗಿ ನಾಮಕೆವಾಸ್ತೆ ಪ್ರಣಾಳಿಕೆ ಸಮಿತಿಯಲ್ಲಿ ಇರುವುದಿಲ್ಲ ಎಂದು ಹಿರಿಯ ನಾಯಕ ಪರಮೇಶ್ವರ್ ರಾಜೀನಾಮೆ ಪತ್ರ ಬರೆದು ನೀಡಿದ್ದಾರೆ ಎನ್ನಲಾಗಿದೆ.
ಪ್ರಣಾಳಿಕೆ ಘೋಷಣೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಪರಮೇಶ್ವರ ಅಸಮಾಧಾನಕ್ಕೆ ಕಾರಣ. ಈ ಬಗ್ಗೆ ತಮ್ಮ ಆಪ್ತರ ಬಳಿಯೂ ಬೇಸರ ಹೊರ ಹಾಕಿದ್ದರು ಎಂಬುದು ಮಾಹಿತಿ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಷ್ಟೇ ಏಕೆ, ಡಿಸಿಎಂ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನದೇ ಆದ ಕೊಡುಗೆ ಇದೆ. ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದೇನೆ. ಆದರೂ ತನ್ನನ್ನು ಕಡೆಗಣಿಸಿ ಉಚಿತ ಯೋಜನೆಗಳನ್ನು ನಾಯಕರೇ ಘೋಷಣೆ ಮಾಡುತ್ತಿದ್ದಾರೆಂದು ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪರಮೇಶ್ವರ್ ರಾಜಿನಾಮೆ ಪಕ್ಷದ ಒಳಗಡೆ ಭಿನ್ನವಾದ ಸಂದೇಶ ಹೋಗಲಿದೆ ಎಂಬುದನ್ನು ಅರಿತ ಸುರ್ಜೇವಾಲಾ, ಪರಮೇಶ್ವರ್ ಅವರನ್ನು ಮನವೊಲಿಸಿದ್ದಾರೆ. ಪ್ರಬಲ ದಲಿತ ವರ್ಗಕ್ಕೆ ಸೇರಿರುವ ಪರಮೇಶ್ವರ್ ರಾಜಿನಾಮೆ ಪಕ್ಷದ ಕಾರ್ಯಕರ್ತರ ನಡುವೆ ಭಿನ್ನವಾದ ಸಂದೇಶ ನೀಡುವುದರಿಂದ ಅವರನ್ನು ಮನವೊಲಿಸಿ ಆ ಹುದ್ದೆಯಲ್ಲೇ ಮುಂದುವರಿಸುವ ಸಾಧ್ಯತೆಯಿದೆ.
Simmering discontent has reportedly erupted the congress party in the state.
19-05-26 11:34 pm
HK News Desk
ಮೋರ್ಬಿ ಘಟನೆ ಗುಜರಾತ್ ಮಾದರಿಯನ್ನು ಟೊಳ್ಳಾಗಿಸಿದೆ,...
19-05-26 09:09 pm
ದಕ್ಷಿಣ ಭಾರತದಲ್ಲೇ ಮೊದಲ ಪ್ರಯೋಗ ; ಚಿಕ್ಕಮಗಳೂರಿನಲ್...
17-05-26 08:55 pm
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
21-05-26 02:49 pm
HK News Staffer
ಗೊಂದಲ ನಡುವೆಯೇ ಖಾತೆ ಹಂಚಿಕೆ ಮಾಡಿದ ಕೇರಳ ಸಿಎಂ ಸತೀ...
20-05-26 11:23 pm
ಆನ್ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಪ್ರತಿಭಟ...
20-05-26 10:33 am
ಆನೆಗಳ ಕಾದಾಟ; ದುಬಾರೆ ಕ್ಯಾಂಪ್ನಲ್ಲಿ ಗಾಯಗೊಂಡಿದ್ದ...
19-05-26 04:27 pm
ಮತ್ತೆ ಬೆಲೆ ಏರಿಕೆ ಶಾಕ್! ಒಂದೇ ವಾರದಲ್ಲಿ 2ನೇ ಬಾರಿ...
19-05-26 01:06 pm
21-05-26 05:52 pm
HK News Staffer
ಮೇ 25ರವರೆಗೆ ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧ ಎ...
20-05-26 06:51 pm
ಬೆಳ್ತಂಗಡಿ ; ನೇತ್ರಾವತಿ ನದಿಯಲ್ಲಿ ಸ್ನಾನಕ್ಕಿಳಿದು...
19-05-26 10:47 pm
ಬಾವಿಯಲ್ಲಿ ನೀರಲ್ಲ , ಡೀಸೆಲ್ ! ಮಂಗಳೂರಿನಲ್ಲಿ ಆತಂಕ...
19-05-26 05:57 pm
ಒಂದು ರೂ.ಗೆ ಒಂದು ಶರ್ಟ್ ! ಆಫರ್ ಕೇಳಿ ಮುಗಿಬಿದ್ದ ಜ...
19-05-26 10:44 am
21-05-26 07:33 pm
HK News Staffer
ಧರ್ಮಸ್ಥಳದ ಬುರುಡೆ ರಹಸ್ಯ ಪ್ರಕರಣ ಮತ್ತೆ ಚುರುಕು ;...
21-05-26 04:34 pm
ಎನ್ಐಎಸ್ಎಂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾ...
21-05-26 01:34 pm
ಬೆಳ್ತಂಗಡಿ; ಜಲಪಾತಕ್ಕೆ ತೆರಳಿದ್ದ ಕಾಲೇಜು ಯುವತಿಯರಿ...
21-05-26 10:20 am
ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಬಂದ ಸ್ಲೀಪರ್ ಸೆ...
20-05-26 03:08 pm