ಕಾಂಗ್ರೆಸ್ 124 ಅಭ್ಯರ್ಥಿ ಪಟ್ಟಿ ಬಿಡುಗಡೆ ; ಸಿದ್ದರಾಮಯ್ಯಗೆ ವರುಣಾ, ಬಂಟ್ವಾಳ ರಮಾನಾಥ ರೈ, ಬೆಳ್ತಂಗಡಿ ರಕ್ಷಿತ್ ಶಿವರಾಂ, ಸುಳ್ಯಕ್ಕೆ ಜಿಗಣಿ ಕೃಷ್ಣಪ್ಪ ಸ್ಪರ್ಧೆ

25-03-23 11:43 am       Bangalore Correspondent   ಕರ್ನಾಟಕ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಹುತೇಕ ತೀವ್ರ ಪೈಪೋಟಿ ಇಲ್ಲದ ಕಡೆಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಬೆಂಗಳೂರು, ಮಾ.25 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಹುತೇಕ ತೀವ್ರ ಪೈಪೋಟಿ ಇಲ್ಲದ ಕಡೆಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲು ವರುಣಾ ಕ್ಷೇತ್ರವನ್ನು ಅಂತಿಮ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ, ಬೆಳ್ತಂಗಡಿಗೆ ರಕ್ಷಿತ್ ಶಿವರಾಂ, ಸುಳ್ಯ ಎಸ್ಸಿ ಮೀಸಲು ಕ್ಷೇತ್ರಕ್ಕೆ ಜಿಗಣಿ ಕೃಷ್ಣಪ್ಪ ಹೆಸರನ್ನು ಫೈನಲ್ ಮಾಡಲಾಗಿದೆ. ಸುಳ್ಯದಲ್ಲಿ ಮಡಿಕೇರಿ ಮೂಲದ ನಂದಕುಮಾರ್ ಟಿಕೆಟ್ ಪಡೆಯಲು ತೀವ್ರ ಸೆಣಸಾಟ ನಡೆಸಿದ್ದರು. ಉಳಿದಂತೆ, ಮೂಡುಬಿದ್ರೆಗೆ ಮಿಥುನ್ ರೈಗೆ, ಮಂಗಳೂರು- ಉಳ್ಳಾಲ ಕ್ಷೇತ್ರದಲ್ಲಿ ಯುಟಿ ಖಾದರ್ ಗೆ ಟಿಕೆಟ್ ನೀಡಲಾಗಿದೆ. 

ಉಡುಪಿ ಜಿಲ್ಲೆಯಲ್ಲಿ ಕಾಪು ಕ್ಷೇತ್ರಕ್ಕೆ ವಿನಯ ಕುಮಾರ್ ಸೊರಕೆ, ಬೈಂದೂರಿಗೆ ಗೋಪಾಲ ಪೂಜಾರಿ, ಕುಂದಾಪುರದಲ್ಲಿ ಸಹಕಾರಿ ಹಿನ್ನೆಲೆಯ ದಿನೇಶ್ ಹೆಗ್ಡೆ ಅವರಿಗೆ ಟಿಕೆಟ್ ಸಿಕ್ಕಿದೆ.‌ ಕುಂದಾಪುರದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು ತೀವ್ರ ಪೈಪೋಟಿ ಒಡ್ಡಿದ್ದರು. ಸ್ಪರ್ಧೆ ಹೆಚ್ಚಿರುವ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಉಡುಪಿ, ಕಾರ್ಕಳ ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿಲ್ಲ. 

ಸೊರಬ ಮಧು ಬಂಗಾರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡಲಾಗಿದೆ. ಹುಣಸೂರಿನಲ್ಲಿ ಎಚ್.ಪಿ. ಮಂಜುನಾಥ್ ಟಿಕೆಟ್ ಪಡೆದಿದ್ದಾರೆ.

The Congress party released its first list of 124 candidates for the upcoming legislative assembly elections. It is confirmed that former chief minister and leader of opposition Siddaramaiah will be contesting from Varuna constituency. D K Shivakumar will be contesting from Kanakapura.