ಪ್ರಮಾಣ ವಚನಕ್ಕೆ ಸಿದ್ಧತೆ ; ಸಿಎಂ, ಡಿಸಿಎಂ ಜೊತೆಗೆ ಎಂಟು ಮಂದಿಗಷ್ಟೆ ಸಚಿವ ಸ್ಥಾನ 

20-05-23 10:46 am       Bangalore Correspondent   ಕರ್ನಾಟಕ

ಸಚಿವ ಸ್ಥಾನಕ್ಕೇರಲು ಆಕಾಂಕ್ಷಿಗಳ ಲಾಬಿ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸೀಮಿತ ಎಂಟು ಮಂದಿಯ ಹೆಸರನ್ನಷ್ಟೆ ಕಾಂಗ್ರೆಸ್ ಹೈಕಮಾಂಡ್ ಪ್ರಮಾಣ ವಚನಕ್ಕೆ ಅಂತಿಮಗೊಳಿಸಿದೆ.

ಬೆಂಗಳೂರು, ಮೇ 20: ಸಚಿವ ಸ್ಥಾನಕ್ಕೇರಲು ಆಕಾಂಕ್ಷಿಗಳ ಲಾಬಿ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸೀಮಿತ ಎಂಟು ಮಂದಿಯ ಹೆಸರನ್ನಷ್ಟೆ ಕಾಂಗ್ರೆಸ್ ಹೈಕಮಾಂಡ್ ಪ್ರಮಾಣ ವಚನಕ್ಕೆ ಅಂತಿಮಗೊಳಿಸಿದೆ. ಇಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗೆ ಎಂಟು ಮಂದಿಯಷ್ಟೆ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. 

ಹಿರಿಯ ಶಾಸಕರಾದ ಡಾ.ಜಿ.ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್ ಹೆಸರನ್ನು ಫೈನಲ್ ಮಾಡಲಾಗಿದೆ. ನಿನ್ನೆ ತಡರಾತ್ರಿ ವರೆಗೂ ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆಗೂಡಿ ಚರ್ಚೆ ನಡೆಸಿದ್ದಾರೆ. ‌ಆದರೆ ಸಚಿವ ಸ್ಥಾನಕ್ಕೆ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ‌

ಒಂದು ಹಂತದಲ್ಲಿ 25 ಸಚಿವರ ಹೆಸರು ಅಂತಿಮ ಮಾಡಲಾಗಿದೆ ಎನ್ನಲಾಗಿತ್ತು. ಮುಖ್ಯಮಂತ್ರಿ ಜೊತೆಗೆ 25 ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆಂದು ಹೇಳಲಾಗಿತ್ತು.‌ಆದರೆ ಬೆಳಗ್ಗಿನ ಹೊತ್ತಿಗೆ ಈ ಪಟ್ಟಿಯನ್ನು ಹಿಂಪಡೆದು ಎಂಟು ಮಂದಿಯ ಹೆಸರನ್ನು ಮಾತ್ರ ಹೈಕಮಾಂಡ್ ಪ್ರಕಟಿಸಿದೆ. ಪ್ರಾದೇಶಿಕವಾರು ನೆಲೆಯಲ್ಲಿ ಒತ್ತು ಕೊಟ್ಟಿದ್ದ ಪಟ್ಟಿಯನ್ನು ಹಿಂಪಡೆಯಲಾಗಿದೆ. ಇದರಲ್ಲಿ ಕರಾವಳಿಯ ಯುಟಿ ಖಾದರ್ ಆಗಲೀ, ಬಿಕೆ ಹರಿಪ್ರಸಾದ್ ಹೆಸರು ಇಲ್ಲ. ಮಧ್ಯಾಹ್ನ ಹೊತ್ತಿಗೆ ಮತ್ತೆ ಒಂದಷ್ಟು ಹೆಸರು ಸೇರ್ಪಡೆಯಾದರೂ ಅಚ್ಚರಿ ಇಲ್ಲ.

Ahead of the swearing-in ceremony of Karnataka Chief Minister-designate Siddaramaiah, and his deputy D K Shivakumar in Bengaluru today, the Congress released the first list of MLAs who have been included in the state Cabinet. The new ministers are likely to be: G Parameshwara, K H Muniyappa, K J George, M B Patil, Satish Jarkiholi, Priyank Kharge, Ramalinga Reddy, and B Z Zameer Ahmed Khan.