"ಕುರುಡನ ಹೆಗಲ ಮೇಲೆ ಕುಂಟನ ಸವಾರಿ"ಯಂತಿದೆ! ಜೆಡಿಎಸ್ ಬದಲಾಗ್ತಿದೆ ನಾಗವಲ್ಲಿಯ ತರ!! ಬಿಜೆಪಿ- ಜೆಡಿಎಸ್ ಸಖ್ಯಕ್ಕೆ ಕಾಂಗ್ರೆಸ್ ವ್ಯಂಗ್ಯ 

21-07-23 08:57 pm       Bangalore Correspondent   ಕರ್ನಾಟಕ

ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯ ಬಗ್ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯ ಮಾತಿನಿಂದ ತಿವಿದಿದ್ದು ಎರಡು ಪಕ್ಷಗಳ ನಡೆಯು "ಕುರುಡನ ಹೆಗಲ ಮೇಲೆ ಕುಂಟನ ಸವಾರಿ"ಯಂತಿದೆ! ಎಂದು ಟೀಕೆ ಮಾಡಿದೆ. 

ಬೆಂಗಳೂರು, ಜುಲೈ 21: ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯ ಬಗ್ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯ ಮಾತಿನಿಂದ ತಿವಿದಿದ್ದು ಎರಡು ಪಕ್ಷಗಳ ನಡೆಯು "ಕುರುಡನ ಹೆಗಲ ಮೇಲೆ ಕುಂಟನ ಸವಾರಿ"ಯಂತಿದೆ! ಎಂದು ಟೀಕೆ ಮಾಡಿದೆ. 

ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ನಾಯಕತ್ವವಿಲ್ಲದ ಬಿಜೆಪಿ ಜೆಡಿಎಸ್ ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು. ಇತ್ತ ಜೆಡಿಎಸ್ ಕೋಮುವಾದಿಗಳ ಸಂಘ ಮಾಡಿದ್ದು ಮತಿಗೇಡಿತನ ಎಂದು ಕಾಂಗ್ರೆಸ್ ಹೇಳಿದೆ.‌

ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ?

ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್. ನಾಗವಲ್ಲಿಯ ತರ!! ಎಂದು ಕಾಂಗ್ರೆಸ್, ಜೆಡಿಎಸ್ ನಡೆಯ ಬಗ್ಗೆ ಟೀಕೆ ಮಾಡಿದೆ.

Talks of a huge debate regarding the JDS-BJP alliance in the upcoming Lok Sabha elections have been in the news for many days. It is said that JD(S) which had formed an alliance with Congress last time will be friendly with BJP this time. The Karnataka Congress, which tweeted about this issue, compared the JDS party to 'Nagavalli'.