ವೈದ್ಯನ ಇಂಜೆಕ್ಷನ್ ಎಡವಟ್ಟು  ; ಹೋಟೆಲ್​ ಬಿಸಿನೆಸ್​ ಶುರು ಮಾಡಿದ ಮಂಗಳೂರಿನ ಯುವಕನ ದುರಂತ ಅಂತ್ಯ

19-08-23 10:01 pm       Bangalore Correspondent   ಕರ್ನಾಟಕ

ವೈದ್ಯನ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. ಮಂಗಳೂರು ಮೂಲದ ಅಮರ್​ ಶೆಟ್ಟಿ(31) ಮೃತ ಯುವಕ ಎಂದು ತಿಳಿದು ಬಂದಿದೆ.

ಬೆಂಗಳೂರು, ಆಗಸ್ಟ್ 19: ವೈದ್ಯನ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. ಮಂಗಳೂರು ಮೂಲದ ಅಮರ್​ ಶೆಟ್ಟಿ(31) ಮೃತ ಯುವಕ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯ ಹಾಗೂ ಕ್ಲಿನಿಕ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ದುಬೈನಲ್ಲಿದ್ದ ಯುವಕ ಅಮರ್​ ಶೆಟ್ಟಿ ಒಂದು ವರ್ಷದ ಹಿಂದೆ ತಾಯ್ನಾಡಿಗೆ ವಾಪಸ್​​ ಬಂದು ತಮ್ಮದೇ ಆದ ಹೋಟೆಲ್​ ಬಿಸಿನೆಸ್​ಅನ್ನು ಶುರು ಮಾಡಿದ್ದರು. ಆಗಸ್ಟ್​ 13ರಂದು ಜ್ವರ ಕಾಣಿಸಿಕೊಂಡಿದ್ದ ಕಾರಣ ಅಮರ್​ ಕೆ.ಪಿ. ಅಗ್ರಹಾರದಲ್ಲಿರುವ ಭಾಗ್ಯ ಕ್ಲಿನಿಕ್​ಗೆ ತೆರಳಿ ಇಂಜೆಕ್ಷನ್​ ಪಡೆದಿದ್ದರು.

ಇಂಜೆಕ್ಷನ್​ ಅಡ್ಡಪರಿಣಾಮದಿಂದ ಯುವಕನಿಗೆ ಜ್ವರ ಕಡಿಮೆಯಾಗದಿದ್ದಾಗ ತಕ್ಷಣವೇ ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಯನ್ನು ದಾಖಲಿಸಿಕೊಂಡ ವೈದ್ಯರು ಪರೀಕ್ಷೆ ನಡೆಸಿ ಇಂಜೆಕ್ಷನ್​ ಅಡ್ಡಪರಿಣಾಮದಿಂದಾಗಿ ಬಹು ಅಂಗಾಂಗ ವೈಫಲ್ಯವಾಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಚಕಿತ್ಸೆ ಫಲಕಾರಿಯಾಗದೆ ಅಮರ್​ ಶೆಟ್ಟಿ ಶುಕ್ರವಾರ ನಿಧನರಾಗಿದ್ದಾರೆ. ವೈದ್ಯನ ನಿರ್ಲಕ್ಷಕ್ಷ್ಯಕ್ಕೆ ಯುವಕನ ಕುಟುಂಬಸ್ಥರು ಕಿಡಿಕಾರಿದ್ದು, ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕೆ.ಪಿ. ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

In a tragic incident, an innocent youth died due to negligence of a doctor at K.P. Nagar on Magadi Road in Bengaluru city. It happened in Agrahara. The deceased has been identified as Amar Shetty (31), a native of Mangaluru.