ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಅಲರ್ಟ್, ಹಂದಿ ಮಾಂಸ ಪೂರೈಕೆಗೆ ನಿಷೇಧ 

23-08-23 12:24 pm       HK News Desk   ಕರ್ನಾಟಕ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆ ಕೇರಳ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ಭಾಗದಿಂದ ಹಂದಿ ಮಾಂಸ ಪೂರೈಕೆ ನಿಷೇಧಿಸಲಾಗಿದೆ. 

ಮೈಸೂರು, ಆಗಸ್ಟ್ 23: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆ ಕೇರಳ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ಭಾಗದಿಂದ ಹಂದಿ ಮಾಂಸ ಪೂರೈಕೆ ನಿಷೇಧಿಸಲಾಗಿದೆ. 

ಮೈಸೂರಿನಿಂದ ಕೇರಳಕ್ಕೆ ಹೊಂದಿಕೊಂಡ ಹೆಚ್.ಡಿ.ಕೋಟೆ ತಾಲೂಕಿನ ಚೆಕ್ ಪೋಸ್ಟ್​ ಗಳಲ್ಲಿ ವಿಶೇಷ ತಂಡ ರಚನೆ ಮಾಡಿ, ಅಧಿಕಾರಿಗಳು ತಪಾಸಣೆ ಆರಂಭಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಕನ್ನಿಚ್ಚಾರ್ ಎಂಬಲ್ಲಿ ಕಳೆದ ವಾರ ಹಂದಿ ಜ್ವರ ದೃಢಪಟ್ಟಿತ್ತು. ಆನಂತರ, ಎರಡು ಫಾರ್ಮ್ ಗಳಲ್ಲಿರುವ ಎಲ್ಲ ಹಂದಿಗಳನ್ನು ಮತ್ತು ಫಾರ್ಮ್‌ ಸುತ್ತಮುತ್ತಲಿನ ಹತ್ತು ಕಿಮೀ ಪ್ರದೇಶದಲ್ಲಿ ಎಲರ್ಟ್ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. 

ಆಗಸ್ಟ್ 19 ರಂದು ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಏಕಾಏಕಿ ಕಾಣಿಸಿಕೊಂಡ ಬೆನ್ನಲ್ಲೇ ಹಂದಿಗಳನ್ನು ಕೊಲ್ಲುವುದು ಮತ್ತು ಮಾಂಸ ಬಳಕೆ ಮಾಡದಂತೆ ಆದೇಶ ನೀಡಲಾಗಿತ್ತು. ಹಂದಿ ಮಾಂಸದ ವಿತರಣೆ, ಮಾರಾಟ ಮತ್ತು ಸಾಗಣೆಯನ್ನು ಮೂರು ತಿಂಗಳ ವರೆಗೆ ನಿಷೇಧ ಮಾಡಿ ಆದೇಶ ಮಾಡಲಾಗಿದೆ.

An alert has been sounded along the Karnataka-Kerala border in the wake of the detection of  African swine flu in Kerala. It is a disease found in pigs and transportation of animals from Kerala to the state has been banned as a precautionary measure. A special team has been formed at Bavali check post in H.D. Kote taluk. H.D. Kote Tahsildar Sanna Ramappa, Taluk Health Officer Ravikumar and Animal Husbandry Department Director Prasanna visited the spot.