ಬಿಜೆಪಿಯವರು ಶೆಟ್ಟರ್ ಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ; ಕಾಂಗ್ರೆಸ್ ನಿಂದ ಬೇರೆ ಪಕ್ಷಕ್ಕೆ ಹೋಗುವವರು ಯಾರೂ ಇಲ್ಲ, ಬರುವವರು ಇದ್ದಾರೆ !

27-08-23 07:32 pm       HK News Desk   ಕರ್ನಾಟಕ

``ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ''

ಹಾಸನ, ಆಗಸ್ಟ್ 27: ``ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ''

ಇದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಕೇಂದ್ರದಿಂದ ಅಮಿತ್ ಶಾ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಹಕಾರ ಸಚಿವ ಕೆಎನ್ ರಾಜಣ್ಣ ನೀಡಿದ ಪ್ರತಿಕ್ರಿಯೆ.

Karnataka Elections 2023 BJP In Control Of Very Few People Was Forcefully  Thrown Out Jagadish Shettar After Joining Congress

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಎನ್ನುವುದು ನಿಂತ ನೀರಲ್ಲ. ಸದಾ ಚಲನ ಶೀಲ, ಯಾವ ಸಮಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದರಂತೆ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ಎಂದರು.

ಯಾವುದೇ ಕಾರಣಕ್ಕೂ ಅವರು ವಾಪಸ್ ಹೋಗುವುದಿಲ್ಲ. ಸಾಧ್ಯವಿಲ್ಲ ಅನ್ನೋದು ನನ್ನ ಧೃಡವಾದ ಮಾತು. ನಾವು 135 ಜನ ಶಾಸಕರಿದ್ದೀವಿ, ಎಲ್ಲರೂ ಕೂಡ ಗಟ್ಟಿಯಾಗಿ ಇದ್ದೀವಿ. ಯಾರೂ ಹೋಗೋದು ಇಲ್ಲಾ, ಇನ್ನೂ ಬರೋರು ಇದ್ದಾರೆ ಅಷ್ಟೆ ಎಂದು ಟಾಂಗ್ ನೀಡಿದರು. ಅಧಿಕಾರದಲ್ಲಿರುವಾಗ ಹೋಗಲು ಶಾಸಕರು ಏನು ದಡ್ಡರಾ! ಕಾಂಗ್ರೆಸ್‌ನಲ್ಲಿ ಎಲ್ಲಾ ಹಿರಿಯರೇ ಇದ್ದಾರೆ. ಮಂತ್ರಿಯಾಗುವ ಅರ್ಹತೆ ಕೂಡ ಇದೆ ಇರುವವರೂ ಇದ್ದಾರೆ. ಸೀನಿಯರ್ ಲೀಡರ್ಸ್ ಯಾವಾ ಗಲೂ ತಪ್ಪು ನಿರ್ಧಾರ ಮಾಡಲ್ಲ. ಕಾಂಗ್ರೆಸ್ ಗಟ್ಟಿ ಬಂಡೆಯಾಗಿದೆ, ಕಾಂಗ್ರೆಸ್‌ನಿಂದ ಹೋಗುವವರು ಯಾರೂ ಇರುವುದಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸೇರ್ಪಡೆ ವಿಚಾರವಾಗಿ ಮತನಾಡಿ, ಅದೆಲ್ಲಾ ಕಟ್ಕಂಡು ಏನಪ್ಪಾ, ನಾನೇ ದಳಕ್ಕೆ ಹೋಗ್ತಿದ್ದೀನಿ, ನಾನೇ ದಳಕ್ಕೆ ಹೋಗ್ತಿದ್ದೀನಿ ಅಂತ ಹೇಳಿದ್ದೀನಿ ನಿನ್ಯಾರು ಬರೆಯದೇ ಇಲ್ವಲ್ಲಾ ಎಂದು ಎಂದು ಮಾರ್ಮಿಕವಾಗಿ ನುಡಿದರು.

The way BJP has insulted Jagadish shettar no one has ever insulted slams K.N. Rajanna.