ಬ್ರೇಕಿಂಗ್ ನ್ಯೂಸ್
12-09-23 06:14 pm HK News Desk ಕರ್ನಾಟಕ
ಶಿವಮೊಗ್ಗ, ಸೆ.12: ಸಿದ್ದರಾಮಯ್ಯ ಅವರು ಸಾಯೋದು ಬೇಡ, ಅವರ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ. ಅವರು ಹೆಚ್ಚು ದಿನ ಬದುಕಬೇಕು. ಆದರೆ, ಅವರು ಮೊದಲ ಸಲ ಸರ್ಕಾರ ಕಾರು ಹತ್ತಿದ್ದು ಬಿಜೆಪಿ ಬೆಂಬಲಿತ ಸರ್ಕಾರದಿಂದ ಎನ್ನುವುದನ್ನು ಮರೆಯಬಾರದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇಗ ಸಾಯಬಾರದು. ಬಹಳ ವರ್ಷ ಬದುಕಿರಬೇಕು. ಜನರ ಪರವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ. ನಾವಂತೂ ಬೇಡ ಅನ್ನೋದಿಲ್ಲ. ಯಾವ ಕಾರಣಕ್ಕೂ ನೀವು ಸಾಯೋದೂ ಬೇಡ, ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ. ಆದರೆ, ನೀವು ಮೊದಲ ಸಲ ಸರಕಾರಿ ಕಾರು ಹತ್ತಿದ್ದು, ಬಿಜೆಪಿ ಬೆಂಬಲಿತ ಸರ್ಕಾರದಿಂದ ಎಂಬುದನ್ನ ನೆನಪು ಮಾಡಿಕೊಳ್ಳಿ ಎಂದು ಟಾಂಗ್ ನೀಡಿದರು.

ರಾಮಕೃಷ್ಣ ಹೆಗಡೆ ಸರ್ಕಾರ ಬಂದಾಗ ನೀವು ಅಂದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದೀರಿ. ಅಂದು ಬಿಜೆಪಿಯ 19 ಶಾಸಕರು ಬೇಷರತ್ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ಸೇತರ ಸರ್ಕಾರವಾಗಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ನೀವು ಮೊದಲನೇ ಸರಕಾರಿ ಕಾರ್ ಪಡೆದಿದ್ರಿ. ಅಂದು ಕೋಮುವಾದಿ ಪಕ್ಷ ಎಂದು ನಿಮಗೆ ಗೊತ್ತಾಗಲಿಲ್ವಾ? ಆ ಸರ್ಕಾರಿ ಕಾರ್ ಹತ್ತಿ ಮಜಾ ಮಾಡುವಾಗ ಎಲ್ಲಿ ಹೋಗಿತ್ತು ನಿಮ್ಮ ಸಿದ್ದಾಂತ? ಎಂದು ಕಿಡಿಕಾರಿದರು.
ಬಿಜೆಪಿ ಬೆಂಬಲ ತೆಗೆದುಕೊಂಡು ನೀವು ಸಮಾಜವಾದಿಯಾದ್ರಿ, ನಾವು ಈಗ ಕೋಮುವಾದಿ ಅಂತ ಕರೆಸಿಕೊಳ್ಳುತ್ತಿದ್ದೇವೆ. ಜೆಎಚ್ ಪಟೇಲ್ ಸರ್ಕಾರ ಕೂಡ ಬಿಜೆಪಿ ಬೆಂಬಲ ಪಡೆದುಕೊಂಡಿತ್ತು. ಅಂದು ಸಿದ್ದರಾಮಯ್ಯನವರಿಗೆ ಬಿಜೆಪಿ ಕೋಮುವಾದಿ ಎಂದು ಗೊತ್ತಾಗಲಿಲ್ವಾ? ಅವಕಾಶವಾದಿ ರಾಜಕಾರಣಿ ಸಿದ್ದರಾಮಯ್ಯಗೆ ಮಜಾ ಮಾಡೋದಕ್ಕೆ ಬಿಜೆಪಿ ಬೇಕಿತ್ತಾ? ಆಗ ಸಮಾಜವಾದಿತನ ಇತ್ತಾ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಹೆಣ ನಮಗೆ ಬೇಡ. ನೀವು ಬೇಗ ಸಾಯಬೇಡಿ. ಬಹಳ ದಿನ ಬದುಕಿ ಎಂದು ಮತ್ತೆ ನಾನು ಹೇಳುತ್ತೇನೆ. ಆದರೆ, ನಮ್ಮ ಬಲದಿಂದ ಅಂದು ಸರ್ಕಾರಿ ಕಾರ್ ಪಡೆದಿದ್ದಕ್ಕಾಗಿ ಇಂದು ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ಅಂದು ಬಿಜೆಪಿ ಬೆಂಬಲ ಪಡೆದಿದ್ದು ನಿಜ ಎಂದು ಜನರಿಗೆ ಹೇಳಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಬಿಜೆಪಿ ಕೋಮುವಾದಿ ಅಂತಾ ಸಿದ್ದರಾಮಯ್ಯಗೆ ಯಾವಾಗ ಗೊತ್ತಾಯಿತು?
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಅನೇಕ ಸುಳ್ಳುಗಳನ್ನ ಹೇಳುತ್ತಾರೆ. ಆದರೆ, ಅವುಗಳ ಬಗ್ಗೆ ನಾನು ಚಕಾರ ಎತ್ತೋದಿಲ್ಲ. ಆದರೆ, ಬಿಜೆಪಿಯನ್ನು ಕೋಮುವಾದಿ ಎಂದು ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದರೆ, ಬಿಜೆಪಿ ಕೋಮುವಾದಿ ಎಂದು ಸಿದ್ದರಾಮಯ್ಯ ಅಂತವರಿಗೆ ಗೊತ್ತಾಗಿದ್ದು ಯಾವಾಗ? ಅಧಿಕಾರ ಪಡೆದುಕೊಂಡು ಬೆಂಬಲಿತ ಸರ್ಕಾರ ಜೊತೆಗೆ ಸವಲತ್ತು ಅನುಭವಿಸುವಾಗ ಏಕೆ ಬಿಜೆಪಿ ಕೋಮುವಾದಿ ಎನಿಸಲಿಲ್ಲ. ಈಗ ನಿಮಗೆ ಬಿಜೆಪಿ ಕೋಮುವಾದಿ ಅಂತ ಅನ್ನಿಸಿರುವುದು ದುರಂತ ಎಂದು ಈಶ್ವರಪ್ಪ ಕಿಡಿಕಾರಿದರು.
Former Minister KS Eshwarappa has said that Chief Minister Siddaramaiah should not die early and neither he nor his party wants it.He was responding to a question on Siddaramaiah's statement in Shivamogga on Tuesday that "not even my dead body will go to the BJP office".
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 08:29 pm
HK News Staffer
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm