ಬ್ರೇಕಿಂಗ್ ನ್ಯೂಸ್
14-09-23 11:24 am HK News Desk ಕರ್ನಾಟಕ
ಮಂಜೇಶ್ವರ, ಸೆ.14: ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ಮಂಗಲ್ಪಾಡಿ ಬಳಿಯ ಕೋಟಿಬೈಲು ಎಂಬಲ್ಲಿ ನಡೆದಿದ್ದು ತಾಯಿಯೇ ಕೊಲೆಗೈದ ಆರೋಪ ಕೇಳಿಬಂದಿದೆ.
ಸತ್ಯನಾರಾಯಣ- ಸುಮಂಗಲಾ ದಂಪತಿಯ ಒಂದೂವರೆ ತಿಂಗಳ ಮಗು ಕೆಸರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಗುವಿನ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿರುವುದರಿಂದ ಕತ್ತು ಹಿಸುಕಿ ಕೊಲೆಗೈದು ಕೆಸರಿನಲ್ಲಿ ಮುಳುಗಿಸಿರುವ ಶಂಕೆಯಿದೆ. ಕೃತ್ಯದ ಬಳಿಕ ಸುಮಂಗಲಾ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಅಸ್ಪಷ್ಟ ಹೇಳಿಕೆ ನೀಡುತ್ತಿದ್ದು ಪೊಲೀಸರು ಆಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಸುಮಂಗಲಾ - ಸತ್ಯನಾರಾಯಣ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಸುಮಂಗಲಾ ಉಪ್ಪಳ ಬಳಿಯ ಅತ್ತೆಯ ಮನೆಯಲ್ಲಿ ವಾಸವಿದ್ದಳು. ಪತಿಯ ಜೊತೆಗೆ ವೈಮನಸ್ಯದಿಂದ ಮಾನಸಿಕ ತೊಂದರೆಗೀಡಾಗಿದ್ದಳು. ಇತ್ತೀಚಿಗೆ ತಾಯಿಯೂ ತೀರಿಕೊಂಡಿದ್ದರಿಂದ ಮಾನಸಿಕ ಖಿನ್ನಳಾಗಿದ್ದಳು. ಮಗುವನ್ನು ಗದ್ದೆಯ ಬಳಿಗೆ ಕೊಂಡೊಯ್ಯುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುಮಂಗಲಾ ತಲಪಾಡಿ ಬಳಿಯ ಕಿನ್ಯಾ ನಿವಾಸಿಯಾಗಿದ್ದು ಗರ್ಭಿಣಿಯಾದಾಗಲೇ ಗಂಡನ ಬಗ್ಗೆ ವೈಮನಸ್ಯ ಹೊಂದಿದ್ದು ತಾಯಿ ಮನೆಯಲ್ಲಿದ್ದಳು. ಈಚೆಗೆ ತಾಯಿ ತೀರಿಕೊಂಡಿದ್ದರಿಂದ ಉಪ್ಪಳದ ಅತ್ತೆ ಮನೆಗೆ ಹೋಗಿ ಉಳಿದುಕೊಂಡಿದ್ದಳು.
In a shocking incident a mother allegedly killed her newborn baby by drowing it in the muddy water at Kasargod.
15-02-26 10:22 am
HK News Staffer
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
14-02-26 10:55 pm
HK Staffer
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
80 ವರ್ಷಗಳ ಬಳಿಕ ಪ್ರಧಾನಿ ಕಚೇರಿಗೆ ಹೊಸ ಭವನ, 'ಸೇವಾ...
13-02-26 11:00 pm
ವಂದೇ ಮಾತರಂ ಕಡ್ಡಾಯ ಕ್ರಮಕ್ಕೆ ಜಮಾತೆ ಉಲೆಮಾ ಹಿಂದ್...
12-02-26 10:51 pm
14-02-26 07:16 pm
Mangaluru Staffer
CT Ravi, Mangalore: ಕಾಂಗ್ರೆಸ್ ಸಂಭ್ರಮ ಭ್ರಷ್ಟಾ...
14-02-26 05:16 pm
Builder Jithendra Kottary, FIR: ಗನ್ ಹಿಡಿದು ಜೀ...
14-02-26 04:38 pm
ವಿದೇಶಿ ಉದ್ಯೋಗ ; ಗಲ್ಫ್, ದಕ್ಷಿಣ ಏಷ್ಯಾ ರಾಷ್ಟ್ರಗ...
13-02-26 09:52 pm
Pilikula zoo, Mangalore: ಪಿಲಿಕುಳ ಪ್ರಾಣಿ ಸಂಗ್ರ...
13-02-26 06:38 pm
14-02-26 10:47 pm
HK Staffer
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆ ಪತ್ತೆ...
13-02-26 11:52 am
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am