Chaitra Kundapura, Amith Shah, 19 lakhs duped, BJP: ಬಿಜೆಪಿ ಟಿಕೆಟ್ ಹೆಸರಲ್ಲಿ ಮತ್ತೊಂದು 'ಡೀಲ್' ಪ್ರಕರಣ ಬೆಳಕಿಗೆ ; ಗೃಹ ಸಚಿವ ಅಮಿತ್ ಷಾ ಹೆಸರಲ್ಲೇ ಮೋಸ, ಸರ್ವೇ ತಂಡದ ಮುಖ್ಯಸ್ಥನೆಂದು ನಂಬಿಸಿ ಬಿಜೆಪಿ ಮುಖಂಡನಿಗೆ ದ್ರೋಹ !  

15-09-23 08:26 pm       Bangalore Correspondent   ಕರ್ನಾಟಕ

ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಮತ್ತೊಂದು ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.‌ ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೇ ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡನಿಂದ 21 ಲಕ್ಷ ಪಡೆದು ಟೋಪಿ ಹಾಕಲಾಗಿದೆ.

ಬೆಂಗಳೂರು, ಸೆ.15: ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಮತ್ತೊಂದು ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.‌ ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೇ ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡನಿಂದ 21 ಲಕ್ಷ ಪಡೆದು ಟೋಪಿ ಹಾಕಲಾಗಿದೆ. 

ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಬಿಜೆಪಿ ಮುಖಂಡ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಅವರನ್ನು ನಂಬಿಸಿ ಹಣ ಪಡೆದಿದ್ದಾರೆ. ತಿಮ್ಮಾರೆಡ್ಡಿ ಅವರು ತಮ್ಮ ಪತ್ನಿ ಗಾಯತ್ರಿಗೆ ಟಿಕೆಟ್ ಕೊಡಿಸುವಲ್ಲಿ ಭಾರಿ ಪ್ರಯತ್ನ ಮಾಡಿದ್ದರು. ಬಿಜೆಪಿ ಟಿಕೆಟಿಗಾಗಿ ಭಾರೀ ಪೈಪೋಟಿ ನಡೆಸಿದ್ದ ತಿಮ್ಮಾರೆಡ್ಡಿಯನ್ನು ಚೈತ್ರಾ ಕುಂದಾಪುರ ತಂಡದ ಮಾದರಿಯಲ್ಲೇ ಮೂವರ ತಂಡ ಸಂಪರ್ಕಿಸಿ ಮೋಸ ಮಾಡಿದೆ. 

Union home minister Amit Shah's secret survey team of B-schoolers holds the  pulse | Hyderabad News - Times of India

ಅಮಿತ್ ಷಾ ಹೆಸರಲ್ಲಿ ವಂಚನೆ 

ತಾವು ಗೃಹ ಸಚಿವ ಅಮಿತ್ ಷಾ ಆಪ್ತರೆಂದು ಹೇಳಿಕೊಂಡು ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬವರು ತಿಮ್ಮಾರೆಡ್ಡಿಯನ್ನು ಸಂಪರ್ಕಿಸಿದ್ದರು.‌ 19 ಲಕ್ಷ ನಗದು ಮತ್ತು ಎರಡು ಲಕ್ಷ ರೂ. ಖಾತೆಗೆ ಹಾಕಿಸಿಕೊಂಡಿದ್ದರು. ಚೈತ್ರಾಳ ಡೀಲ್ ಪುರಾಣ ಹೊರಬರುತ್ತಲೇ ತಿಮ್ಮಾರೆಡ್ಡಿ ಅವರು ಮೂವರು ವಂಚಕರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಅಮಿತ್ ಷಾ ಸೂಚನೆಯಂತೆ, ರಾಜ್ಯದಲ್ಲಿ ಸಮೀಕ್ಷೆ ಮಾಡ್ತಿದ್ದೇವೆ. ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದು ಹೇಳಿಕೊಂಡಿದ್ದ ತಂಡದ ವಿಶಾಲ್ ನಾಗ್ ಎಂಬಾತ ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ತಂಡದಲ್ಲಿ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ. ಹೀಗಾಗಿ ಆತನನ್ನ ನಂಬಿ ವಿಶಾಲ್ ನಾಗ್ ಅವರ ಬ್ಯಾಂಕ್ ಖಾತೆಗ 2 ಲಕ್ಷ ರೂ., 19 ಲಕ್ಷ ನಗದನ್ನು ನೇರವಾಗಿ ನೀಡಿದ್ದೆ. ಇವರು, ನನ್ನ ರೀತಿ ಬಹಳ ಜನರಿಗೆ ಮೋಸ ಮಾಡಿದ್ದಾರೆ ಎಂದು ತಿಮ್ಮಾರೆಡ್ಡಿ ತಿಳಿಸಿದ್ದಾರೆ. 

ಹೀಗಾಗಿ ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ‌ ಹಲವಾರು ಮಂದಿ ಆಕಾಂಕ್ಷಿಗಳು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಕುಂದಾಪುರ ಮತ್ತು ತಂಡ ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಐದು ಕೋಟಿ ಡೀಲ್ ಮಾಡಿರೋದು ಬೆಳಕಿಗೆ ಬರುತ್ತಲೇ ಮತ್ತೊಂದು ವಂಚನೆ ಪುರಾಣ ಹೊರಬಂದಿದೆ.

Another fraud case exposed like Chaitra Kundapura in Bangalore by the name of Amith Shah,  Thimareddy duped of 19 lakhs in the name of BJP Ticket.