ಬ್ರೇಕಿಂಗ್ ನ್ಯೂಸ್
16-09-23 06:43 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.16: ಈ ಬಾರಿಯೂ ಗಣೇಶನ ಹಬ್ಬದ ಹೆಸರಲ್ಲಿ ಪ್ರಯಾಣಿಕರನ್ನು ದೋಚಲು ಖಾಸಗಿ ಬಸ್ಗಳ ಜೊತೆಗೆ ಕೆಎಸ್ಸಾರ್ಟಿಸಿಯೂ ಮುಂದಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಕೂಡ ತನ್ನ ವಿಶೇಷ ಬಸ್ಗಳ ಪ್ರಯಾಣ ದರವನ್ನು ಶೇ.20 ರಷ್ಟು ಹೆಚ್ಚಿಸಿದ್ದು ಅಧಿಕೃತವಾಗಿ ಹೇಳಿಕೊಂಡಿದೆ!
ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ಖಾಸಗಿ ಬಸ್ಗಳು ಟಿಕೆಟ್ ದರ ಹೆಚ್ಚಿಸಿ ಸುಲಿಗೆ ಮಾಡುತ್ತಿದ್ದರೆ, ಸಾರಿಗೆ ಇಲಾಖೆ ಕೇವಲ ಎಚ್ಚರಿಕೆ ನೀಡುವುದಕ್ಕೆ ಸೀಮಿತವಾಗಿದೆ. ಇನ್ನೊಂದೆಡೆ ರಾಜ್ಯದ ಜೀವನಾಡಿಗಳು ಎಂದು ಕರೆಯುವ ಕೆಎಸ್ಆರ್ಟಿಸಿ ಕೂಡ ತನ್ನ ವಿಶೇಷ ಬಸ್ಗಳ ಟಿಕೆಟ್ ದರವನ್ನು ಶೇ. 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪ್ರಯಾಣಿಕರು ಖಾಸಗಿ ಆಗಲಿ ಕೆಎಸ್ಆರ್ಟಿಸಿ ಆಗಲಿ ಹೆಚ್ಚಿನ ದರ ಪಾವತಿಸಿಯೇ ತಮ್ಮ ಊರುಗಳಿಗೆ ತೆರಳಬೇಕಾಗಿದೆ.
ಕೆಎಸ್ಆರ್ಟಿಸಿ ವಿಭಾಗದ ಅಧಿಕೃತ ವೆಬ್ಸೈಟ್ನಲ್ಲೇ ವಿಶೇಷ ಬಸ್ಗಳ ಟಿಕೆಟ್ ದರವನ್ನು ಶೇ. 18 ರಿಂದ 20 ರಷ್ಟು ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ ರಾಜಹಂಸ ಸಾಮಾನ್ಯ ಬಸ್ ದರ 505 ರೂಪಾಯಿ ಇದ್ದರೆ, ರಾಜಹಂಸ ವಿಶೇಷ ಬಸ್ ಟಿಕೆಟ್ ದರ 591 ರೂಪಾಯಿ ಇದೆ. ಬೆಂಗಳೂರು ಹುಬ್ಬಳ್ಳಿ ಎಸಿ ಸ್ಲೀಪರ್ ದರವು 1159 ರೂಪಾಯಿ ಇದೆ. ಇದೇ ಮಾರ್ಗದ ಹಬ್ಬದ ವಿಶೇಷ ಬಸ್ ದರವು 1365 ರೂ. ಇದೆ. ನಾನ್ ಎಸಿ ಸ್ಲೀಪರ್ 975 ರೂಪಾಯಿ ಇದ್ದರೆ, ಹಬ್ಬದ ವಿಶೇಷ ಬಸ್ ದರ 1148 ರೂ. ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು, ಹಬ್ಬದ ಸಂದರ್ಭದಲ್ಲಿ ವಿಶೇಷ ಬಸ್ಗಳ ದರವನ್ನು ಹೆಚ್ಚಳ ಮಾಡುತ್ತೇವೆ. ಈ ಹಿಂದೆಯು ಹಬ್ಬದ ವೇಳೆ ದರ ಹೆಚ್ಚಿಸಿದ್ದೆವು. ಸಾಮಾನ್ಯ ಬಸ್ಗಳ ದರ ಎಂದಿನಂತೆಯೇ ಇದೆ ಎಂದು ಹೇಳುತ್ತಾರೆ. ಇದಲ್ಲದೆ, ಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 1200 ಬಸ್ಗಳನ್ನು ಕೆಎಸ್ಆರ್ಟಿಸಿ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಓಡಿಸುತ್ತಿದೆ. ಸೆ. 15ರಿಂದ ಸೆ.17ರ ವರೆಗೆ 1200 ಹೆಚ್ಚುವರಿ ಬಸ್ಗಳು ರಾಜ್ಯ ಮತ್ತು ಹೊರರಾಜ್ಯಗಳಿಗೆ ಓಡಾಡಲಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಹೋಗಿ ಬರುವ ಪ್ರಯಾಣದ ಟಿಕೆಟ್ ಕಾಯ್ದಿರಿಸಿದರೆ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ, ಸುದ್ದಿಗೋಷ್ಟಿ ನಡೆಸಿದ್ದ ಶಿವಮೊಗ್ಗ ವಿಭಾಗದ ಕೆಎಸ್ಸಾರ್ಟಿಸಿ ಅಧಿಕಾರಿ, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳ ದರ ಹೆಚ್ಚಿಸಿದರೆ ದೂರು ಕೊಡುವಂತೆ ಹೇಳಿದ್ದರು. ದರ ಹೆಚ್ಚಿಸುವ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಈಗ ಖಾಸಗಿಯ ಜೊತೆಗೆ ಕೆಎಸ್ಸಾರ್ಟಿಸಿಯೂ ದರ ಹೆಚ್ಚಿಸಿದೆ.
Ahead of the Ganesh Chaturthi celebrations on Monday, thousands of people from across Bengaluru are heading to their respective hometowns this weekend. And as it happens every year, private bus services have significantly hiked the ticket fares to make quick gains on the limited time rush. The fares have been hiked despite a warning from the Transport Commissioner that any spike in ticket prices will invite strict action.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm