ಬ್ರೇಕಿಂಗ್ ನ್ಯೂಸ್
21-09-23 11:46 am Bangalore Correspondent ಕರ್ನಾಟಕ
ಬೆಂಗಳೂರು, ಸೆ 21: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಯಥಾವತ್ತಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ಮೂವರು ಸದಸ್ಯರ ಪೀಠದಿಂದ ಆದೇಶ ಹೊರಡಿಸಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಲಾಗಿತ್ತು. ನಾವು 2,500 ಕ್ಯೂಸೆಕ್ಸ್ ನೀರನ್ನು ಮಾತ್ರವೇ ಬಿಡುಗಡೆ ಮಾಡಲು ಸಾಧ್ಯವಿದೆ. ಕಳೆದ ಎರಡು ತಿಂಗಳಿನಿಂದ ಮಳೆ ಕೊರತೆ ಇದೆ. ಆದ್ದರಿಂದ ನೀರು ಬಿಡಲಾಗಲ್ಲ ಎಂದು ಕರ್ನಾಟಕದ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದ್ದರು.
ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಇದೆ, ರೈತರು ಎಲ್ಲೆಡೆ ನೀರಿನ ಅಭಾವವಿದೆ. ನಮಗೆ ಕುಡಿಯವ ನೀರಿನ ಅಭಾವವಿದೆ ಆದ್ದರಿಂದ ತಮಿಳುನಾಡಿನ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಆದರೆ ತಮಿಳುನಾಡು ಪರ ಮುಕುಲ್ ರೋಹ್ಟಗಿ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ಪಾಲಿಸಬೇಕು ಎಂದು ಹೇಳಿದ್ದರು.
ತಮಿಳುನಾಡು ವಾದ ಏನಾಗಿತ್ತು?
ನೀರು ಹಂಚಿಕೆ ಬಗ್ಗೆ CWRC, CWMA ಸಭೆ ಮಾಡಿದ್ದು, ಪ್ರಾಧಿಕಾರ ನೀರು ಹರಿಸಲು ಸೂಚನೆ ನೀಡಿವೆ. ಆದರೆ ಕರ್ನಾಟಕ ಆದೇಶವನ್ನು ಪಾಲಿಸಿಲ್ಲ. ನಾವು ಬಹಳಷ್ಟು ಕಡಿಮೆ ನೀರು ಪಡೆಯುತ್ತಿದ್ದೇವೆ. CWMA ಆದೇಶಿಸಿದಷ್ಟು ನೀರು ಬಿಡುಗಡೆ ಮಾಡ್ತಿಲ್ಲ. ಕರ್ನಾಟಕ ಪ್ರತಿದಿನ 1200 ಕ್ಯೂ. ನೀರು ಬಿಡ್ತಿದೆ. ಇದು ಯಾವ ನ್ಯಾಯ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ನಮಗೆ ಪ್ರತಿದಿನ 6,400 ಕ್ಯೂಸೆಕ್ ನೀರು ಬಿಡಬೇಕು. ನಮಗೆ CWMA ಆದೇಶದ ಬಗ್ಗೆ ತಕರಾರು ಇದೆ. ಮಳೆ ಇಲ್ಲ ಎಂಬ ಅರಿವಿದೆ, ಆದರೆ ನಮ್ಮ ಪಾಲಿನ ನೀರು ಕೇಳ್ತಿದ್ದೇವೆ. ಮಳೆ ಕಡಿಮೆ, ನೀರಿನ ಮಟ್ಟ ಇಳಿಕೆ ಬಗ್ಗೆ ಗೊತ್ತಿದೆ. ವರದಿ ಆಧರಿಸಿಯೇ CWMA ಆದೇಶ ನೀಡಿದೆ ಎಂದು ರೋಹ್ಟಗಿ ತಮ್ಮ ವಾದದಲ್ಲಿ ಹೇಳಿದರು.
ಕಡಿಮೆ ನೀರು ಬಿಡುಗಡೆಗೆ ಆದೇಶಿಸಿದ್ರೂ ಪಾಲಿಸ್ತಿಲ್ಲ. ಅಗತ್ಯ ಇರೋದು 7,200 ಕ್ಯೂಸೆಕ ನೀರು. ಆದ್ರೆ ಇದು ಶೇ.25ಕ್ಕೆ ಇಳಿಕೆಯಾಗಿದೆ. ಕರ್ನಾಟಕ 1000-2000 ಕ್ಯೂ ಬಿಡುತ್ತೇವೆ ಎಂದು ಹೇಳುತ್ತವೆ. ನಾವು 10 ಸಾವಿರದಿಂದ 12 ಸಾವಿರ ಕ್ಯೂ. ಕೇಳುತ್ತಿದ್ದೇವೆ. ಪ್ರಾಧಿಕಾರ ಕೇಳಿದ್ದಕ್ಕಿತ 7,200 ಕ್ಯೂಸೆಕ್ ಕಡಿಮೆ ಮಾಡಿದೆ. ಈಗ ದಿನಕ್ಕೆ 7,200 ಕ್ಯೂಸೆಕ್ ಆದ್ರೂ ಬಿಡಬೇಕು. ಇದಕ್ಕಿಂತ ಶೇ.25ರಷ್ಟು ಕಡಿಮೆ ಮಾಡಬಾರದು ಎಂದು ಮುಕುಲ್ ರೋಹ್ಟಗಿ ಮನವಿ ಮಾಡಿಕೊಂಡರು.
ಕರ್ನಾಟಕ ವಾದ ಏನಾಗಿತ್ತು?
ಕರ್ನಾಟಕದಲ್ಲಿ ನೀರಿನ ಸಮಸ್ಯೆಯಿದೆ. ನಾವು CWMA ಹೇಳಿದಂತೆ ನೀರು ಹರಿಸಿದ್ದೇವೆ. ಕರ್ನಾಟಕದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸಂಕಷ್ಟದಲ್ಲಿ ತಮಿಳುನಾಡಿಗೆ ನೀರು ಬಿಡಿ ಅಂದ್ರೆ ಹೇಗೆ? ತಮಿಳುನಾಡಿಗೆ ನಿತ್ಯ 12,500 ಕ್ಯೂ. ನೀರು ಬಿಡಬೇಕು. ನಾವು ಹೆಚ್ಚುವರಿ ನೀರು ಹರಿಸಿದ್ದೇವೆ ಎಂದು ಕರ್ನಾಟಕದ ಪರ ಶ್ಯಾಮ್ ದಿವಾನ್ ವಾದ ಮಂಡಿಸಿದ್ದರು.
Cauvery Water, Supreme court orders to release 5000 units of water to Tamilnadu.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm