Karnataka Cauvery Water Protest, 44 flights stand cancelled: ಕರ್ನಾಟಕ ಬಂದ್ ಎಫೆಕ್ಟ್ ; ಪ್ರಯಾಣಿಕರ ಕೊರತೆ, ಬೆಂಗಳೂರು ಏರ್ಪೋರ್ಟ್ ನಲ್ಲಿ 44 ವಿಮಾನಗಳ ಹಾರಾಟ ರದ್ದು 

29-09-23 04:01 pm       Bangalore Correspondent   ಕರ್ನಾಟಕ

ಕರ್ನಾಟಕ ಬಂದ್ ಪರಿಣಾಮ ಬೆಂಗಳೂರು ಏರ್ಪೋರ್ಟ್ ನಲ್ಲಿ ಬಂದು ಹೋಗುವ 44 ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ.

ಬೆಂಗಳೂರು, ಸೆ.29: ಕರ್ನಾಟಕ ಬಂದ್ ಪರಿಣಾಮ ಬೆಂಗಳೂರು ಏರ್ಪೋರ್ಟ್ ನಲ್ಲಿ ಬಂದು ಹೋಗುವ 44 ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ. ಬೆಂಗಳೂರಿಗೆ ಆಗಮಿಸಬೇಕಿದ್ದ 22 ವಿಮಾನಗಳು ಮತ್ತು ಬೆಂಗಳೂರಿನಿಂದ‌ ಬೇರೆ ಬೇರೆ ಕಡೆಗೆ ಹೋಗಬೇಕಿದ್ದ 22 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. 

ಮಂಗಳೂರು, ಹುಬ್ಬಳ್ಳಿ, ಮುಂಬೈ, ಅಲಹಾದಬಾದ್ ಸೇರಿ ಹಲವು ಕಡೆಗಳಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳಲ್ಲಿ ಪ್ರಯಾಣಿಕರು ಕಡಿಮೆ ಇದ್ದುದರಿಂದ ಸಂಚಾರ ಕಡಿತ ಮಾಡಲಾಗಿದೆ. ಜೈಪುರ,‌ ಮಧುರೈ, ಕಾನ್ಪುರ, ಮುಂಬೈ, ಅಲಹಾಬಾದ್, ವಿಶಾಖಪಟ್ಟಣಗಳಿಗೆ ಶುಕ್ರವಾರ ಬೆಂಗಳೂರಿನಿಂದ ತೆರಳಬೇಕಿದ್ದ ವಿಮಾನಗಳನ್ನೂ ಪ್ರಯಾಣಿಕರ ಕೊರತೆಯಿಂದಾಗಿ ರದ್ದು ಮಾಡಿದ್ದಾರೆ. 

ಬೆಂಗಳೂರಿಗೆ ಬರಬೇಕಿದ್ದ ಫ್ಲೈಟ್ ಕ್ಯಾನ್ಸಲ್ 

1. ಮಂಗಳೂರಿನಿಂದ ಬೆಳಗ್ಗೆ 7.50ಕ್ಕೆ ಆಗಮಿಸಬೇಕಿದ್ದ ಇಂಡಿಗೋ 6ಇ-255 ಫ್ಲೈಟ್ ಕ್ಯಾನ್ಸಲ್ 

2. ಬೆಳಗ್ಗೆ 9.10ಕ್ಕೆ ಹುಬ್ಬಳ್ಳಿಯಿಂದ ಬರಬೇಕಿದ್ದ ಇಂಡಿಗೋ 6ಇ-7233 ವಿಮಾನ ರದ್ದು

3. ಬೆಳಗ್ಗೆ 10.20ಕ್ಕೆ ಮಂಗಳೂರಿನಿಂದ ಬರಬೇಕಿದ್ದ ಇಂಡಿಗೋ 6ಇ-5347 ವಿಮಾನ ರದ್ದು 

4. ಬೆಳಗ್ಗೆ 11 ಗಂಟೆಗೆ ಕೋಲ್ಕತಾದಿಂದ ಬರಬೇಕಿದ್ದ ಏರ್ ಏಷಿಯಾ ಐ5-1536 ವಿಮಾನ

ಬೆಂಗಳೂರಿನಿಂದ ತೆರಳಬೇಕಿದ್ದ ವಿಮಾನ ರದ್ದು 

1. 7.50 ಮಂಗಳೂರಿಗೆ ತೆರಳಬೇಕಿದ್ದ ಇಂಡಿಗೋ 6ಇ-6858 ವಿಮಾನ‌ 

2. 8 ಗಂಟೆಗೆ ಜೈಪುರ್ ಗೆ ತೆರಳಬೇಕಿದ್ದ ಏರ್-ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್-1941 ಫ್ಲೈಟ್

3. 10.35ಕ್ಕೆ ಮಧುರೈಗೆ ಹೋಗಬೇಕಿದ್ದ ಇಂಡಿಗೋ-6ಇ7203 ವಿಮಾನ 

4. 10.40ಕ್ಕೆ ಕಾನ್ಪುರಕ್ಕೆ ಹೋಗಬೇಕಿದ್ದ ಇಂಡಿಗೋ 6ಇ-6137

5. 11.30ಕ್ಕೆ ಪೋರ್ಟ್ ಬ್ಲೇರ್ ಗೆ ತೆರಳಬೇಕಿದ್ದ ಇಂಡಿಗೋ ವಿಮಾನ‌
6. 11.35ಕ್ಕೆ ಚನೈಗೆ ತೆರಳಬೇಕಿದ್ದ ಇಂಡಿಗೋ ವಿಮಾನ

7. 12.15ಕ್ಕೆ ಅಲಹದಾಬಾದ್ ಗೆ ತೆರಳಬೇಕಿದ್ದ ಇಂಡಿಗೋ 6ಇ-6595

8. 12.20ಕ್ಕೆ ಮುಂಬೈ ತೆರಳಬೇಕಿದ್ದ ಇಂಡಿಗೋ-6ಇ-5293 ಫ್ಲೈಟ್

9. 12.3೦ಕ್ಕೆ ವಿಶಾಖಪಟ್ನಂಗೆ ತೆರಳಬೇಕಿದ್ದ ಇಂಡಿಗೋ 6ಇ-6366 ಫ್ಲೈಟ್

10. ಮಧ್ಯಾಹ್ನ 12.35ಕ್ಕೆ ಮುಂಬೈಗೆ ಹೋಗಬೇಕಿದ್ದ ಇಂಡಿಗೋ ಫ್ಲೈಟ್

11. ಮಧ್ಯಾಹ್ನ 1.15ಕ್ಕೆ ಟುಟಿ ಕೋರಿನ್ ಗೆ ಹೋಗಬೇಕಿದ್ದ ಇಂಡಿಗೋ ವಿಮಾನ

12. 2.15ಕ್ಕೆ ಉದಯಪುರಕ್ಕೆ ತೆರಳಬೇಕಿದ್ದ ಏರ್-ಏಷಿಯಾ ಐ5-1782 ವಿಮಾನ‌

13. 2.2೦ಕ್ಕೆ ಮುಂಬೈಗೆ ಹೋಗಬೇಕಿದ್ದ ಏರ್-ಏಷಿಯಾ ಫ್ಲೈಟ್

 14. 2.25ಕ್ಕೆ ಜೈಪುರಕ್ಕೆ ಹೋಗಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ

15. 2.30ಕ್ಕೆ ಕೋಲ್ಕತಾಗೆ ಹೋಗಬೇಕಿದ್ದ ಆಕಾಶ್ ಏರ್-ವಿಮಾನ

16. 2.55ಕ್ಕೆ‌ ಮಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳನ್ನು ರದ್ದು ಮಾಡಲಾಗಿದೆ.

Cauvery Water Dispute, 44 flights stand cancelled today at Bangalore Airport on Karnataka Bandh. On account of the statewide Karnataka Bandh over the Cauvery water sharing dispute, 22 incoming flights and 22 outbound flights from Kempegowda International Airport stand cancelled today. According to airport authorities, the 44 flights are cancelled due to operational issues and the same was notified to passengers in advance.