Kapu, Banyan tree Fell on worker: ಆಲದ ಮರ ಕಡಿಯುತ್ತಿದ್ದಾಗ ಸಿಕ್ಕಿಕೊಂಡ ಕಾರ್ಮಿಕರು ; ಜಾರ್ಖಂಡ್ ಮೂಲದ ಕಾರ್ಮಿಕ ಮೃತ್ಯು 

02-10-23 09:26 pm       HK News Desk   ಕರ್ನಾಟಕ

ಆಲದ ಮರವನ್ನು ಕಡಿಯುತ್ತಿದ್ದಾಗ ಮರ ಉರುಳಿ ಬಿದ್ದು, ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ಸಾವನಪ್ಪಿದ ಘಟನೆ ಕಾಪು ಠಾಣೆ ವ್ಯಾಪ್ತಿಯ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ.

ಪಡುಬಿದ್ರೆ, ಅ.2: ಆಲದ ಮರವನ್ನು ಕಡಿಯುತ್ತಿದ್ದಾಗ ಮರ ಉರುಳಿ ಬಿದ್ದು, ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ಸಾವನಪ್ಪಿದ ಘಟನೆ ಕಾಪು ಠಾಣೆ ವ್ಯಾಪ್ತಿಯ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕಾರ್ಮಿಕನೆಂದು ಗುರುತಿಸಲಾಗಿದೆ. 

ಕರಂದಾಡಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಖಾಸಗಿ ವ್ಯಕ್ತಿಗೆ ಸೇರಿದ್ದ ಗೋಳಿ ಮರ ಅಪಾಯಕಾರಿಯಾಗಿ ವಾಲಿ ನಿಂತಿತ್ತು. ನಾಗಬನ ಮತ್ತು ಮನೆ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಗೋಳಿ ಮರವನ್ನು ಸೋಮವಾರ ಕಡಿಯುತ್ತಿದ್ದಾಗಲೇ ಕೆಳಗಡೆ ನಿಂತಿದ್ದ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. 

ಮರ ಉರುಳಿಬಿದ್ದಾಗ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

A labourer from Jharkhand was killed when a banyan tree fell on him while he was cutting it down at Karandadi in Majoor village under Kapu police station limits. The deceased has been identified as Sudhir Panje, a native of Jharkhand.