ಅತ್ತಿಬೆಲೆ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಸ್ಫೋಟ ; 12 ಮಂದಿ ಸಜೀವ ದಹನ, ಆವರಿಸಿದ ದಟ್ಟ ಹೊಗೆ, ಬೆಂಕಿ

07-10-23 09:28 pm       Bangalore Correspondent   ಕರ್ನಾಟಕ

ತಮಿಳುನಾಡಿನಿಂದ ಲಾರಿಯಲ್ಲಿ ತಂದಿದ್ದ ಪಟಾಕಿಯನ್ನು ಇಳಿಸುತ್ತಿದ್ದಾಗ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು, ಅ.7: ತಮಿಳುನಾಡಿನಿಂದ ಲಾರಿಯಲ್ಲಿ ತಂದಿದ್ದ ಪಟಾಕಿಯನ್ನು ಇಳಿಸುತ್ತಿದ್ದಾಗ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ 25ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ನಡೆದಿದ್ದು, ನಾಲ್ಕೈದು ಗಂಟೆ ಕಳೆದರೂ ರಾತ್ರಿ ವರೆಗೂ ಸ್ಥಳದಲ್ಲಿ ಉರಿಯುತ್ತಲೇ ಇತ್ತು. ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿದ್ದ ಮೃತದೇಹಗಳು ಪೂರ್ತಿ ಸುಟ್ಟು ಹೋಗಿದ್ದು ಗುರುತು ಸಿಗದಂತಾಗಿದೆ. ಪಟಾಕಿ ಮಳಿಗೆಯಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನಿತ್ತು ಎನ್ನಲಾಗಿದೆ. ದಾಸ್ತಾನು ಮಳಿಗೆ, ಪಟಾಕಿಯಿದ್ದ ಒಂದು ಲಾರಿ, ಮತ್ತೊಂದು ಸರಕು ಸಾಗಣೆಯ ಲಾರಿ, ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಹೋಗಿವೆ. ಸ್ಥಳದಲ್ಲಿ ಎಷ್ಟು ಮಂದಿ ಇದ್ದರು ಅನ್ನುವ ನಿಖರ ಮಾಹಿತಿಯಿಲ್ಲ. ಹಲವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Fire at cracker shop leaves 3 injured, adjacent buildings, vehicles burnt -  Public TV English

Fire at cracker shop leaves 3 injured, adjacent buildings, vehicles burnt -  Public TV English

ಸಂಜೆ ಹೊತ್ತಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದ್ದರಿಂದ ಅತ್ತಿಬೆಲೆ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಲ್ಲಿಂದ ತಮಿಳುನಾಡಿನ ಹೊಸೂರು ಭಾಗಕ್ಕೆ ಹೆದ್ದಾರಿಯೇ ನಾಲ್ಕು ಗಂಟೆ ಕಾಲ ಬಂದ್ ಆಗಿತ್ತು. ಎರಡು ಕಿಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿದ್ದರೆ, ಏನೋ ಸ್ಫೋಟ ಆಗಿದೆಯೆಂದು ಜನರು ಗಾಬರಿಯಿಂದ ನಿಂತು ನೋಡುತ್ತಿದ್ದರು. ಜನರನ್ನು ಸಂಭಾಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

A major fire broke out at a firecracker shop at Attibele in Anekal taluk while unloading the firecrackers from a goods vehicle on Saturday. As a result of the fire, 4-5 adjacent shops and some vehicles, including a truck, were burnt.