Mysuru police, Mahisha Dasara rally: ಮೈಸೂರು ಮಹಿಷ ದಸರಾಗಿಲ್ಲ ಅವಕಾಶ ; ಮೆರವಣಿಗೆ, ಜಾಥಾ ನಿಷೇಧಿಸಿ ನಿಷೇಧಾಜ್ಞೆ, ಸಭಾ ಕಾರ್ಯಕ್ರಮಕ್ಕೆ ಷರತ್ತಿನ ಅನುಮತಿ 

12-10-23 05:15 pm       HK News Desk   ಕರ್ನಾಟಕ

ವಿವಾದಿತ ಮಹಿಷಾ ದಸರಾ ಮತ್ತು ಅದರ ವಿರುದ್ಧ ಬಿಜೆಪಿ ನಡೆಸಲು ಉದ್ದೇಶಿಸಿರುವ ಚಲೋ ಚಾಮುಂಡಿ ಜಾಥಾಗಳೆರಡಕ್ಕೂ ಮೈಸೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮೈಸೂರು, ಅ.12: ವಿವಾದಿತ ಮಹಿಷಾ ದಸರಾ ಮತ್ತು ಅದರ ವಿರುದ್ಧ ಬಿಜೆಪಿ ನಡೆಸಲು ಉದ್ದೇಶಿಸಿರುವ ಚಲೋ ಚಾಮುಂಡಿ ಜಾಥಾಗಳೆರಡಕ್ಕೂ ಮೈಸೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇದೇ ವೇಳೆ, ಮೈಸೂರು ಪುರಭವನದಲ್ಲಿ ಏರ್ಪಡಿಸಿರುವ ಮಹಿಷ ದಸರಾದ ಸಭಾ ಕಾರ್ಯಕ್ರಮಕ್ಕೆ ಪೊಲೀಸರು ಷರತ್ತಿನ ಅನುಮತಿ ನೀಡಿದ್ದಾರೆ. 

ಮೈಸೂರು ಮಹಿಷ ದಸರಾ ಸಮಿತಿಯು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ಬಳಿ ಆಯೋಜಿಸಲು ಉದ್ದೇಶಿಸಿದ್ದ ಮಹಿಷಾ ದಸರಾಗೆ ಪೊಲೀಸರು ಈಗಾಗಲೇ ಅನುಮತಿ ನಿರಾಕರಿಸಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ ನಡೆಸಲು ಉದ್ದೇಶಿಸಿರುವ ಮಹಿಷ ದಸರಾದ ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. 

ಮೈಸೂರು ನಗರ ಪೊಲೀಸ್ ಆಯುಕ್ತರು ಸಭಾ ಕಾರ್ಯಕ್ರಮಕ್ಕೆ ಷರತ್ತಿನ ಅನುಮತಿಯೊಂದಿಗೆ ಆದೇಶ ಹೊರಡಿಸಿದ್ದಾರೆ. ದೇವರಾಜ ಪೊಲೀಸ್ ಠಾಣಾ ಸರಹದ್ದಿನ ಪುರಭವನದ ಒಳ ಆವರಣದಲ್ಲಿ ಡಾ.ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡಿ ನಂತರ ಮಹಿಷ ಉತ್ಸವ ಹಾಗೂ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಸಲಾಗುವುದು ಎಂದು ಮಹಿಷಾ ದಸರಾ ಸಮಿತಿ ತಿಳಿಸಿದೆ. 

ಆದರೆ ಯಾವುದೇ ರೀತಿಯ ರ‍್ಯಾಲಿ, ಮೆರವಣಿಗೆ, ಪ್ರತಿಭಟನೆ ಮಾಡುವಂತಿಲ್ಲ. ನೇರವಾಗಿ ಸಭಾ ಕಾರ್ಯಕ್ರಮ ಪ್ರಾರಂಭಿಸಬೇಕು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಬಾರದು. ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ನೀಡುವ ಭಾಷಣ ಮಾಡಬಾರದು ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.‌

The Karnataka police has denied permission to Dalit and rationalist groups who were planning to celebrate Mahisha Dasara, an alternative Dasara celebration that is antithetic to the narrative that Mahishasura was a ‘Rakshasa’ or demon. The celebrations were planned to be held on October 13 in Mysuru with a procession by Dalit groups to Chamundi Hill.