ಬ್ರೇಕಿಂಗ್ ನ್ಯೂಸ್
            
                        05-11-23 05:05 pm HK News Desk ಕರ್ನಾಟಕ
            ಚಿತ್ರದುರ್ಗ, ನ.5: ಗಣಪತಿಯದ್ದು ಪೌರಾಣಿಕ ಕಲ್ಪನೆ. ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೇನೆ. ಅದನ್ನು ಮತ್ತೆ ಹೇಳುತ್ತೇನೆ ಎಂದು ತರಳಬಾಳು ಮಠದ ಸ್ವಾಮೀಜಿ ಪಂಡಿತಾರಾಧ್ಯಶ್ರೀ ಮತ್ತೆ ಕಿಡಿಕಾರಿದ್ದಾರೆ.
ಸಾಣೇಹಳ್ಳಿಯ ತರಳಬಾಳು ಮಠದಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಸ್ವಾಮೀಜಿ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಇಷ್ಟಲಿಂಗ ಧರಿಸಿ ಪೂಜಿಸುವುದು ಬಸವ ಸಂಸ್ಕೃತಿ. ಗಣಪತಿಗೆ ಸುಮ್ಮನೆ ಇಷ್ಟೆಲ್ಲಾ ಪೂಜೆ ಮಾಡುತ್ತೀರಿ. ಗಣಪತಿ ಯಾರಿಗಾದರೂ ವರ, ಶಾಪ ಕೊಟ್ಟಿದೆಯೇನು? ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗಣಪತಿ ದೇಗುಲಕ್ಕೆ ಹೋಗುತ್ತಾರೆ. ಓದದಿದ್ದರೆ, ಉತ್ತರ ಬರೆಯದಿದ್ದರೆ ಪಾಸ್ ಆಗಲು ಸಾಧ್ಯವೇ?
ಗಣಪತಿ ಎಂಬುದು ಅದೊಂದು ನಂಬಿಕೆ ಅಷ್ಟೇ. ಅದನ್ನೇ ವಿಜೃಂಭಣೆ ಮಾಡುತ್ತ ವಾತಾವರಣ ಕುಲಗೆಡಿಸಲಾಗುತ್ತಿದೆ. ಡಿಜೆ ಸೌಂಡ್ ಹಾಕಿ ಎಲ್ಲರ ಕಿವಿ ಬಂದ್ ಮಾಡುವ ವಾತಾವರಣ ನಿರ್ಮಾಣ ಆಗಿದೆ. ಗಣಪತಿ ಹೆಸರಲ್ಲಿ ಕುಡಿದು ಕುಣಿದು ಮತ್ತೇನೇನೋ ಮಾಡುತ್ತಿರುತ್ತಾರೆಂದು ಸ್ವಾಮೀಜಿ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಭಟನೆ ಮಾಡಬೇಕಾದವರು ಯಾರು? ಸತ್ಯ ಹೇಳಬೇಕಾಗುತ್ತದೆ, ನಿಷ್ಠುರ ಮಾತಾಡಬೇಕಾಗುತ್ತದೆ. ರಾಜಕಾರಣಿಗಳು ಗಣಪತಿ ಉತ್ಸವಕ್ಕೆ ಕೆಲ ಹೊತ್ತು ಹೋಗಿ ಬರುತ್ತಾರೆ. ಸತ್ಯ ಹೇಳಿದ್ದಕ್ಕೆ ನಮ್ಮ ವಿರುದ್ಧ ಮುಗಿಬಿದ್ದರೆ ನಾವು ಭಯಪಡುವ ಅಗತ್ಯವಿಲ್ಲ. ವಿಶ್ವೇಶ್ವರ ಭಟ್ ಅವರ ಪತ್ರಿಕೆಯಲ್ಲಿ ಕೀಳುಮಟ್ಟದ ಪದ ಬಳಸಿ ನಮ್ಮ ಬಗ್ಗೆ ಲೇಖನ ಬರೆದಿದ್ದಾರೆ. ಅದು ಅವರ ಸಂಸ್ಕೃತಿ, ನಮ್ಮ ಸಂಸ್ಕೃತಿ ಅಲ್ಲ.
ಪ್ರತಿಭಟನೆ ಮಾಡುತ್ತೇವೆಂದ ಭಕ್ತರಿಗೆ ಬೇಡ ಎಂದು ಹೇಳಿದ್ದೇವೆ. ನಾವೇ ನೇರವಾಗಿ ಮಾತಾಡುತ್ತೇವೆಂದು ಹೇಳಿದ್ದೇವೆ ಎಂದು ಪಂಡಿತಾರಾಧ್ಯಶ್ರೀ ಹೇಳಿದ್ದಾರೆ.
            
            
            In a recent address at the Sanehalli National Drama Festival program in Chitradurga’s Hosadurga Taluk, Panditaradhya Shivacharya Swamiji, a prominent religious figure, reiterated his contentious statement that "Ganpati is not our culture," further fueling the wrath of Hindu communities.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm