ಬ್ರೇಕಿಂಗ್ ನ್ಯೂಸ್
21-11-23 09:34 pm Bangalore Correspondent ಕರ್ನಾಟಕ
ಬೆಂಗಳೂರು, ನ.21: ಬೆಂಗಳೂರು ಕಂಬಳಕ್ಕೆ ದೆಹಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನಿಸಿದ್ದು ವಿವಾದಕ್ಕೀಡಾಗುತ್ತಲೇ ಅವರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ನ.25 ಮತ್ತು 26ರಂದು ನಡೆಯುವ ಕಂಬಳಕ್ಕೆ ಭರದ ಸಿದ್ಧತೆ ನಡೆಯುತ್ತಿರುವಾಗಲೇ ಕಂಬಳ ಕೂಟಕ್ಕೆ ಹೆಣ್ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ಕರೆಸಲಾಗಿದೆ ಎನ್ನುವ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಸರಕಾರವೇ ಮುಂದೆ ನಿಂತು ಆಯೋಜಿಸುತ್ತಿರುವ ಕಂಬಳಕ್ಕೆ ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದನನ್ನು ಕರೆಸಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರೇ ಕಟು ಟೀಕೆಯನ್ನು ಮಾಡಿದ್ದರು.
ಇದರ ಬೆನ್ನಲ್ಲೇ ಆಶೋಕ್ ರೈ ಹೇಳಿಕೆ ನೀಡಿದ್ದು, ಕಂಬಳ ಜನಪದ ಕ್ರೀಡೆಯಾಗಿದ್ದು ಇದೊಂದು ಮಹತ್ವದ ಕಾರ್ಯಕ್ರಮವೂ ಹೌದು. ಕಾರ್ಯಕ್ರಮಕ್ಕೆ ಬೇರೆ ಬೇರೆ ಸಂಘಟನೆಗಳು ತಮ್ಮ ನಾಯಕರನ್ನು ಕರೆಸಲು ಆಹ್ವಾನ ನೀಡಿವೆ. ಪುನೀತ್ ರಾಜಕುಮಾರ್ ಅಭಿಮಾನಿಗಳ ಬೇಡಿಕೆಯಂತೆ ವೇದಿಕೆಗೆ ನಟ ಪುನೀತ್ ಹೆಸರಿನ್ನಿಡಲಾಗಿದೆ. ಸಿದ್ಧಿ ಜನಾಂಗದವರು ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕರೆಸಲು ಹೇಳಿದ್ದು ಅದರಂತೆ ಆಮಂತ್ರಣ ಪತ್ರ ರೆಡಿಯಾಗಿತ್ತು. ಸಂಸದ ಬ್ರಿಜ್ ಭೂಷಣ್ ಸಿಂಗ್ ತಾನು ಬರೋದಿಲ್ಲ ಎಂದೂ ಆರಂಭದಲ್ಲಿ ಹೇಳಿದ್ದರು. ಈಗ ಆಮಂತ್ರಣ ಪತ್ರವನ್ನು ಮರು ಮುದ್ರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಂಬಳ ಎನ್ನುವುದು ಎಲ್ಲರ ಕಾರ್ಯಕ್ರಮ, ಎಲ್ಲರಿಗೆ ಸೇರಿದ್ದು. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಅನ್ನುವ ರಾಜಕೀಯ, ಮತ ಭೇದ ಇಲ್ಲದೆ ಎಲ್ಲರೂ ಆಗಮಿಸುತ್ತಾರೆ. ದೊಡ್ಡ ಕಾರ್ಯಕ್ರಮ ಸಂಘಟಿಸುವಾಗ ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಅದನ್ನು ಸರಿ ಪಡಿಸಲಾಗುವುದು ಎಂದು ಅಶೋಕ್ ರೈ ಹೇಳಿದ್ದಾರೆ. ದೆಹಲಿಯ ಕೈಸರ್ಗಂಜ್ ಲೋಕಸಭಾ ಕ್ಷೇತ್ರದ ಸಂಸದನಾಗಿರುವ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದಾಗ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೀಡಾಗಿದ್ದರು. ಖ್ಯಾತ ನಾಮ ಕುಸ್ತಿ ಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
The Bengalore Kambala Committee president and Congress MLA Ashok Rai Kodimbadi has opted not to extend an invitation to BJP MP Brij Bhushan Sharan Singh for the upcoming Kambala event in coastal Karnataka, following widespread criticism on social media regarding the initial decision to invite him.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
01-12-23 08:06 pm
Mangalore Correspondent
Sunil Kumar Bajal: ಗ್ರಾಮ ಪಂಚಾಯತ್ ಪುಸ್ತಕ ಬರಹಗಾ...
01-12-23 06:33 pm
Mangalore Ullal, garbage collection van: ತುಕ್...
01-12-23 02:18 pm
S L Boje Gowda, BJP, JDS, Mangalore: ವಿಧಾನ ಪರ...
01-12-23 01:45 pm
Mangalore Catholics, Tipu attack,Kirem: ಟಿಪ್ಪ...
30-11-23 04:43 pm
01-12-23 10:41 pm
Bangalore Correspondent
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm
Baby Sale Bangalore: ನವಜಾತ ಶಿಶು ಮಾರಾಟ ಕೇಸ್ ;...
30-11-23 07:35 pm
ನಕಲಿ ನೋಟು ಸಪ್ಲೈ , ಇನ್ಶೂರೆನ್ಸ್ ಹೆಸ್ರಲ್ಲಿ ಜನರಿ...
30-11-23 07:24 pm
Bangalore Mangalore News, Mobile Naked Photos...
30-11-23 03:15 pm