ಬ್ರೇಕಿಂಗ್ ನ್ಯೂಸ್
25-11-23 10:28 pm Bangalore Correspondent ಕರ್ನಾಟಕ
ಬೆಂಗಳೂರು, ನ.25: ಬೆಂಗಳೂರು ಕಂಬಳದಲ್ಲಿ ತುಳು ಅಧಿಕೃತ ಭಾಷೆಯಾಗಬೇಕೆಂಬ ಧ್ವನಿ ನಾಲ್ಕೂರುಗಳಿಗೆ ಮಾರ್ದನಿಸಿದೆ. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷಿಗರ ಬಗ್ಗೆ ಅಭಿಮಾನ ತೋರಿದ್ದಾರೆ. ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿಸುವ ವಿಚಾರದಲ್ಲಿ ನಿಮ್ಮ ಭಾಗದವರೇ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿದ್ದರಲ್ವಾ.. ಯಾಕೆ ಮಾಡಿಲ್ಲ ಎಂದು ಕುಹುಕದ ಪ್ರಶ್ನೆಯೆತ್ತಿ ನಾವು ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಉಡುಪಿ, ಮಂಗಳೂರಿನ ಇಬ್ಬರು ಎಲ್ಲೇ ಸಿಗಲಿ ಅವರು ತುಳುವಿನಲ್ಲೇ ಮಾತಾಡುತ್ತಾರೆ. ನಡುವೆ ನಾವಿದ್ದರೆ ಅವರ ಮುಖ ನೋಡುವ ಸ್ಥಿತಿ. ಬಿ.ಆರ್ ಶೆಟ್ಟಿ ಹಿಂದೆ ದುಬೈನಲ್ಲಿದ್ದರೂ ಕರಾವಳಿಯ ಯಾರೇ ಸಿಕ್ಕಿದರೂ ಅವರಲ್ಲಿ ತುಳುವಲ್ಲೇ ಮಾತಾಡುತ್ತಿದ್ದರು ಅಂತ ವೇದಿಕೆಯಲ್ಲಿದ್ದ ಶೆಟ್ಟರ ಮುಖ ನೋಡಿ ನಕ್ಕರು. ಆ ಭಾಗದವರಿಗೆ ತುಳು ಭಾಷೆ ಅಂದ್ರೆ ಅಷ್ಟೊಂದು ಪ್ರೀತಿ. ಈ ಭಾಷೆಗೆ ಸ್ವಂತ ಲಿಪಿ ಇಲ್ಲ ತಾನೇ ಎಂದು ಕೇಳಿದಾಗ, ಸೇರಿದ್ದ ಜನರು ಇದೆ, ಇದೆ ಎಂದು ಉದ್ಘೋಷ ಹಾಕಿದರು. ತುಳು ಲಿಪಿ ಇದೆಯಾ.. ಓಕೆ.. ತುಳುವನ್ನು ಹೆಚ್ಚುವರಿ ಭಾಷೆ ಮಾಡಬೇಕೆಂದು ಅಶೋಕ್ ರೈ ವಿಧಾನಸಭೆಯಲ್ಲಿ ಮಾತಾಡಿದ್ರು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರ ಕೊಟ್ಟಿದ್ರು. ಹಿಂದೆ ನಿಮ್ಮ ಭಾಗದವರೇ ಈ ಖಾತೆಯ ಸಚಿವರಾಗಿದ್ದರು. ಆಗ ಸುಲಭದಲ್ಲಿ ಮಾಡಬಹುದಿತ್ತು. ಮಾಡಿಲ್ಲ ತಾನೇ..?

ನಾವು ಆ ಪ್ರಯತ್ನ ಮಾಡುತ್ತೇವೆ. ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾಡುತ್ತೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೆಸರೆತ್ತದೆ ಕಾಲೆಳೆಯುತ್ತ ವ್ಯಂಗ್ಯವಾಡಿದರು. ಅಲ್ಲದೆ, ಕಂಬಳಕ್ಕೆ ಇಷ್ಟೊಂದು ಜನ ಸೇರುತ್ತಾರೆಂದು ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಕಂಬಳ ಮಾಡಿದ್ದಕ್ಕಾಗಿ ಅಶೋಕ್ ರೈಗೆ ಶಹಭಾಸ್ ಹೇಳುತ್ತೇನೆ. ಪ್ರತಿ ವರ್ಷ ಇಲ್ಲಿ ಕಂಬಳ ಮಾಡಬೇಕೆಂದು ಆಶಿಸುತ್ತೇನೆ, ಇದೊಂದು ದೊಡ್ಡ ಈವೆಂಟ್ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು.



ಕಂಬಳ ಸಮಾರಂಭದಲ್ಲಿ ಕರಾವಳಿಯ ಜನಪ್ರತಿನಿಧಿಗಳು ಹೆಚ್ಚಿನವರು ತಾವೂ ತುಳುವರೆಂದು ಹೇಳಿಕೊಳ್ಳಲು ತುಳು ಭಾಷೆಯಲ್ಲೇ ಮಾತನಾಡಿದ್ರು. ಯುಟಿ ಖಾದರ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಭಾಗವಹಿಸಿ ತುಳುವಿನಲ್ಲಿ ಮಾತಾಡಿದ್ರು. ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿದ್ದಾಗ ಕಂಬಳದ ವಿಶೇಷ ಬಗ್ಗೆ ಖಾದರ್ ಅವರೇ ಹೇಳುತ್ತಿದ್ದರು.
Bangalore Kambala, CM Siddaramaiah assures of making Tulu as official language.
19-05-26 11:34 pm
HK News Desk
ಮೋರ್ಬಿ ಘಟನೆ ಗುಜರಾತ್ ಮಾದರಿಯನ್ನು ಟೊಳ್ಳಾಗಿಸಿದೆ,...
19-05-26 09:09 pm
ದಕ್ಷಿಣ ಭಾರತದಲ್ಲೇ ಮೊದಲ ಪ್ರಯೋಗ ; ಚಿಕ್ಕಮಗಳೂರಿನಲ್...
17-05-26 08:55 pm
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
20-05-26 10:33 am
HK News Staffer
ಆನೆಗಳ ಕಾದಾಟ; ದುಬಾರೆ ಕ್ಯಾಂಪ್ನಲ್ಲಿ ಗಾಯಗೊಂಡಿದ್ದ...
19-05-26 04:27 pm
ಮತ್ತೆ ಬೆಲೆ ಏರಿಕೆ ಶಾಕ್! ಒಂದೇ ವಾರದಲ್ಲಿ 2ನೇ ಬಾರಿ...
19-05-26 01:06 pm
ಕಾಂಗೋ, ಉಗಾಂಡದಲ್ಲಿ ಎಬೋಲಾ ಸೋಂಕು ತೀವ್ರ ; ಮಾರಣಾಂತ...
18-05-26 02:18 pm
ಭೋಜಶಾಲಾ ವಿವಾದಿತ ಮಸೀದಿ ಕಟ್ಟಡವಲ್ಲ, ವಾಗ್ದೇವಿ ಸರಸ...
16-05-26 10:13 pm
20-05-26 06:51 pm
HK News Staffer
ಬೆಳ್ತಂಗಡಿ ; ನೇತ್ರಾವತಿ ನದಿಯಲ್ಲಿ ಸ್ನಾನಕ್ಕಿಳಿದು...
19-05-26 10:47 pm
ಬಾವಿಯಲ್ಲಿ ನೀರಲ್ಲ , ಡೀಸೆಲ್ ! ಮಂಗಳೂರಿನಲ್ಲಿ ಆತಂಕ...
19-05-26 05:57 pm
ಒಂದು ರೂ.ಗೆ ಒಂದು ಶರ್ಟ್ ! ಆಫರ್ ಕೇಳಿ ಮುಗಿಬಿದ್ದ ಜ...
19-05-26 10:44 am
ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ; ಕೇಂ...
18-05-26 10:47 pm
20-05-26 03:08 pm
HK News Staffer
ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ,...
20-05-26 09:53 am
ತಾಯಿ ಬೈದಿದ್ದಕ್ಕೆ ಅಪ್ಪ, ಅಮ್ಮ ಸಾರಿ, ನಿಮ್ಮೆದುರು...
19-05-26 05:55 pm
ಕಾಶ್ಮೀರಕ್ಕೆ ಕೆಲಸಕ್ಕೆಂದು ಕರೆದೊಯ್ದು ಉತ್ತರ ಪ್ರದೇ...
19-05-26 05:23 pm
‘ದಿನಕ್ಕೆ ₹1 ಲಕ್ಷ ರೂ. ಗಳಿಸಿ’ ; ಮೋದಿ, ಪ್ರಿಯಾಂಕ...
19-05-26 04:23 pm