Kambala Bangalore, Mangalore Accident; ಬೆಂಗಳೂರು ಕಂಬಳದಿಂದ ಹಿಂತಿರುಗುತ್ತಿದ್ದ ಕಾರು ಅಪಘಾತ ; ಮಂಗಳೂರಿನ ಇಬ್ಬರು ಯುವಕರು ದಾರುಣ ಮೃತ್ಯು 

26-11-23 10:32 am       Bengaluru Correspondent   ಕರ್ನಾಟಕ

ಬೆಂಗಳೂರಿನಲ್ಲಿ ಕಂಬಳ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಲಾರಿ ಡಿಕ್ಕಿಯಾಗಿದ್ದು ಜವರಾಯನ ಅಟ್ಟಹಾಸಕ್ಕೆ ಮಂಗಳೂರು ಮೂಲದ ಇಬ್ಬರು ಯುವಕರು ಪ್ರಾಣ ತೆತ್ತಿದ್ದಾರೆ. 

ತುಮಕೂರು, ನ.26: ಬೆಂಗಳೂರಿನಲ್ಲಿ ಕಂಬಳ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಲಾರಿ ಡಿಕ್ಕಿಯಾಗಿದ್ದು ಜವರಾಯನ ಅಟ್ಟಹಾಸಕ್ಕೆ ಮಂಗಳೂರು ಮೂಲದ ಇಬ್ಬರು ಯುವಕರು ಪ್ರಾಣ ತೆತ್ತಿದ್ದಾರೆ. 

ಬೋರ್ವೆಲ್ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ, ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಕುಣಿಗಲ್ ತಾಲ್ಲೂಕಿನ ಚಿಗಣಿ ಪಾಳ್ಯ ಬಳಿ ಘಟನೆ ನಡೆದಿದೆ. 

ಮಂಗಳೂರಿನ ಬಜಪೆ ಗ್ರಾಮದ ಪೆರಾರ ನಿವಾಸಿ ಕಿಶನ್ ಶೆಟ್ಟಿ(20), ಭಟ್ರಕೆರೆ ವಾಸಿ ಫೀಲಿಪ್ ನೇರಿ(32) ಮೃತ ದುರ್ದೈವಿಗಳು.‌ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಕಂಬಳ‌ ನೋಡಿ ಮಂಗಳೂರಿಗೆ ವಾಪಸ್ ತೆರುಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಯುವಕರು ತೀವ್ರ ಗಾಯಗೊಂಡಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಲಾರಿ ಹಾಗೂ ಚಾಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಜ್ಜಿ ಹೋಗಿದ್ದು ಪೊಲೀಸರು ಹರಸಾಹಸಪಟ್ಟು ತೆರವು ಮಾಡಿದ್ದಾರೆ. ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Kunigal accident, Kambala Bangalore Two Mangalore youths killed, 3 injured. Two persons were killed and three seriously injured when the car in which they were travelling back to Mangaluru after partaking in the Bengaluru Kambala was hit by a truck in the early hours of Sunday, November 26 at Kottagere Hobali Chiganipalya village on State Highway 33.