Chintamani Accident, Prabhakar Ayya: ಚಿಂತಾಮಣಿಯಲ್ಲಿ ಚರ್ಚ್ ನಡೆಸುತ್ತಿದ್ದ ಪ್ರಭಾಕರ ಅಯ್ಯ ರಸ್ತೆ ಅಪಘಾತದಲ್ಲಿ ಸಾವು 

30-11-23 12:14 pm       Bengaluru Correspondent   ಕರ್ನಾಟಕ

ಚಿಂತಾಮಣಿಯಲ್ಲಿ ಚರ್ಚ್ ಪಾಸ್ಟಾರ್ ಆಗಿದ್ದ ಉಡುಪಿ ಮೂಲದ ಪ್ರಭಾಕರ ಅಯ್ಯ (73) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಕೋಲಾರ, ನ.30: ಚಿಂತಾಮಣಿಯಲ್ಲಿ ಚರ್ಚ್ ಪಾಸ್ಟಾರ್ ಆಗಿದ್ದ ಉಡುಪಿ ಮೂಲದ ಪ್ರಭಾಕರ ಅಯ್ಯ (73) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಚಿಂತಾಮಣಿ ತಾಲೂಕಿನ ಎನ್ಆರ್ ಬಡಾವಣೆ ನಿವಾಸಿಯಾಗಿದ್ದ ಪ್ರಭಾಕರ ಅಯ್ಯ ನಿನ್ನೆ ಕಾರಿನಲ್ಲಿ ತೆರಳುತ್ತಿದ್ದಾಗ  ತಲೆಸುತ್ತು ಬಂದು ಬಾಗೇಪಲ್ಲಿ ವಿನಾಯಕ ಬಾರ್ ಬಳಿ ನಿಂತಿದ್ದ ಟ್ರಕ್ಕಿಗೆ ಡಿಕ್ಕಿಯಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. 

ಉಡುಪಿ ಜಿಲ್ಲೆಯ ಕಟಪಾಡಿ ಮೂಲದವರಾಗಿದ್ದ ಪ್ರಭಾಕರ ಅವರು ಚಿಂತಾಮಣಿಯಲ್ಲಿ ಚರ್ಚ್ ನಡೆಸುತ್ತಿದ್ದರು.‌ ಮೃತರು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಮಧ್ಯಾಹ್ನ ಚಿಂತಾಮಣಿ ನಗರದ ಕ್ರಿಶ್ಚಿಯನ್ ಸಿಮೆಟರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Accident, Pastor Rev Dr J Prabhakar Ayya killed after his car rammed a truck near Bagepalli at chintamani. Prabhakar Ayya hails from Udupi district and was running a church at chintamani. He was rushed to the hospital but he breathed his last